July 23, 2026
Mumbai News Kannada
ಮುಂಬಯಿ

ಗೋರೆಗಾವ್ ಶ್ರೀ ಶಾಂತ ದುರ್ಗಾ ದೇವಿ ದೇವಸ್ಥಾನ. ಬ್ರಹ್ಮಕಳಸೋತ್ಸವದ ಪ್ರಯುಕ್ತ ಮಂಡಲ ಭಜನೆ ಸಂಪನ್ನ.







ಗೋರೆಗಾವ್ :ಗೋರೆಗಾವ್ ಪಶ್ಚಿಮದ ಮೋತಿಲಾಲ್ ನಗರದ ಕೈವಲ್ಯ  ಶ್ಯಾಮಾನಂದ ಸ್ವಾಮೀಜಿಯವರು ಮಾರ್ಗದರ್ಶನದಲ್ಲಿ ಸ್ಥಾಪಿತಗೊಂಡಿರುವ ಶ್ರೀ ಶಾಂತ ದುರ್ಗಾ ದೇವಿ ದೇವಸ್ಥಾನದ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ,ಬ್ರಹ್ಮಕಳಸೋತ್ಸವದ  ಸಂಭ್ರಮದಲ್ಲಿದ್ದು ಆ ಪ್ರಯುಕ್ತ ಪ್ರತಿ ಮಂಗಳವಾರ ಸಂಜೆ ನಗರದ ವಿವಿಧ ಭಜನಾ ಮಂಡಳಿಗಳಿಂದ. ಮಂಡಲ ಭಜನಾ ಸಂಧ್ಯಾ ಕಾರ್ಯಕ್ರಮವು ನಡೆಯುತ್ತಿದ್ದು ಅದರ ಅಂತಿಮ ಮಂಗಳವಾರದ ಮಂಡಲ ಭಜನೆಯು  ನ 14 ರಂದು ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ,ಮೀರಾಗಾಂವ್, ಮೀರಾರೋಡ್ ನ  ಸದಸ್ಯರ ಭಜನೆಯ ಮೂಲಕ ಸಂಪನ್ನಗೊಂಡಿದೆ.

ಕಾರ್ಯಕ್ರಮದ ನಂತರ ಭಜನಾ ಸಂಧ್ಯಾ ಮಂಡಲೋತ್ಸವದ ಪ್ರಯುಕ್ತ ಕುರಾರ್ ವಿಲೇಜ್ ಮಲಾಡ್ ನ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಯುವ ವಿಭಾಗದ ಸದಸ್ಯರಿಂದ ಕುಣಿತ ಭಜನೆ ಏರ್ಪಟ್ಟಿತ್ತು. ಬಳಿಕ ವಾರದ ಮಹಾಪೂಜೆ ಹಾಗೂ ಮಂಗಳಾರತಿ ದೇವಸ್ಥಾನದ ಆಡಳಿತ ಟ್ರಸ್ಟ್  ಉದಯ ಯಸ್ ಸಾಲಿಯಾನ್ ರವರ ನೇತೃತ್ವದಲ್ಲಿ ಜರಗಿತು. 

ಬ್ರಹ್ಮಕಳಸೋತ್ಸವ  ಸಮಿತಿಯ ಅಧ್ಯಕ್ಷ ಕಾಂದಿವಲಿ ರಘುನಾಥ್ ಏನ್ ಶೆಟ್ಟಿಯವರು ಭಜನಾ ತಂಡದ ಸದಸ್ಯರನ್ನು ಹಾಗೂ ನೆರೆದ ಭಕ್ತರನ್ನು ಸ್ವಾಗತಿಸಿ, ಕ್ಷೇತ್ರದಲ್ಲಿ ಡಿ 22 ರಿಂದ ಡಿ 29 ರ ತನಕ ಜರಗಲಿರುವ ಬ್ರಹ್ಮಕಳಸೋತ್ಸವದ  ಸಂಕ್ಷಿಪ್ತ ವಿವರಗಳನ್ನು ನೀಡಿ ಎಲ್ಲರೂ ಈ ಪುಣ್ಯಕಾರ್ಯದಲ್ಲಿ ಪಾಲುಗೊಂಡು ಸಹಕರಿಸಬೇಕೆಂದರು.  ಕೊನೆಯಲ್ಲಿ ಭಜನಾ ಕಾರ್ಯಕ್ರಮವನ್ನು ಸಾದರಪಡಿಸಿದ ಸದಸ್ಯರಿಗೆ ದೇವಸ್ಥಾನದ ಆಡಳಿತ ವಿಶ್ವಸ್ಥರು ಹಾಗೂ ಬ್ರಹ್ಮಕಳಸೋತ್ಸವ  ಸಮಿತಿಯ ಸದಸ್ಯರು ಸಾಲು ಹೊದಿಸಿ ದೇವರ ಪ್ರಸಾದವನ್ನಿತ್ತು ಗೌರವಿಸಿದರು.

ದೀಪಾವಳಿಹಬ್ಬದ ಶುಭಾಶಯಗಳು



Related posts

ವಡಾಲದ ರಾಷ್ಟ್ರೀಯ ಕನ್ನಡ ಶಿಕ್ಷಣ ಸಂಸ್ಥೆಯ ಪ್ರೌಢಶಾಲೆಗೆ ಎಸ್ ಎಸ್ ಸಿ ಯಲ್ಲಿ ಶೇಕಡ 100% ಫಲಿತಾಂಶ.

Mumbai News Desk

ಬಿಲ್ಲವರ ಅಸೋಸಿಯೇಷನ್ ಮುಂಬಯಿ: ಡೊಂಬಿವಲಿ ಸ್ಥಳೀಯ ಕಚೇರಿಯಲ್ಲಿ ಶಾರದಾ ಪೂಜೆ

Mumbai News Desk

ಕುಲಾಲ ಸಂಘ ಮುಂಬಯಿ  ನವಿ ಮುಂಬಯಿ ಸ್ಥಳೀಯ ಸಮಿತಿಯ ವಾರ್ಷಿಕ ಸ್ನೇಹ ಸಮ್ಮಿಲನ.,  ಸಾಧಕರಿಗೆ ಸನ್ಮಾನ.” ಏರೆಗಾವು ಕಿರಿ ಕಿರಿ ” ,. ಮಾಮಿ – ಮಾರ್ಮಲ್”.ನಾಟಕ

Mumbai News Desk

ಜ್ಞಾನ ವಿಕಾಸ ಮಂಡಳದ ಮೆಹ್ತಾ ಕಾಲೇಜಿನಲ್ಲಿ ಗೀತಾ ಜಯಂತಿ ಕಾರ್ಯಕ್ರಮ

Mumbai News Desk

ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿಯ 59ನೇ ನವರಾತ್ರಿ ಉತ್ಸವ ಸಂಪನ್ನ

Mumbai News Desk

ಮೀರಾ – ಭಾಯಂದರ್ ನಲ್ಲಿ ಶ್ರೀ ನಾರಾಯಣ ಗುರು ಭಜನಾ ಮಂಡಳಿ ಉದ್ಘಾಟನೆ. ಕಾರ್ಯಾಧ್ಯಕ್ಷರಾಗಿ ಉದಯ ಡಿ ಸುವರ್ಣ ಆಯ್ಕೆ

Mumbai News Desk