
ಚಿತ್ರ ವರದಿ.. ಉಮೇಶ್ ಕೆ.ಅಂಚನ್.
ಕೆನರಾ ವಿದ್ಯಾದಾಯಿನಿ ರಾತ್ರಿ ಶಾಲಾ ಸಂಚಾಲಕರಾದ ವಿದ್ಯಾದಾಯಿನಿ ಸಭಾ ಮುಂಬಯಿ, ಫೋರ್ಟ್ ಇದರ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜನ್ಮ ದಿನೋತ್ಸವವನ್ನು ಸೆ.7ರಂದು ಬುವಾಜಿ ಬಾಲಕೃಷ್ಣ ಸುವರ್ಣರ ಪೂಜಾವಿಧಿಯೊಂದಿಗೆ ಆಚರಿಸಲಾಯಿತು. ಆರಂಭದಲ್ಲಿ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಅಲಂಕೃತ ಗುರುದೇವರ ಮಂಟಪಕ್ಕೆ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಭಜನಾ ಸಮಿತಿಯ ಕಾರ್ಯಾಧ್ಯಕ್ಷ ಅಶೋಕ್ ಟಿ.ಪೂಜಾರಿ ಹಾಗೂ ಬಳಗದವರಿಂದ ಭಜನಾ ಕಾರ್ಯಕ್ರಮ ನಡೆಯಿತು.

ಸಂಸ್ಥೆಯ ಗೌರವಾಧ್ಯಕ್ಷ ಜೆ.ಎಮ್.ಕೋಟ್ಯಾನ್, ಉಪಾಧ್ಯಕ್ಷ ಆರ್.ಕೆ.ಕೋಟ್ಯಾನ್, ಗೌ.ಕಾರ್ಯದರ್ಶಿ ಚಿತ್ರಾಪು ಕೆ.ಎಮ್.ಕೋಟ್ಯಾನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಸಂತಿ ಕೋಟ್ಯಾನ್, ಕೆನರಾ ವಿದ್ಯಾದಾಯಿನಿ ರಾತ್ರಿ ಶಾಲಾ ಶಾಲಾಧಿಕಾರಿ ಡಾ.ಪ್ರಕಾಶ್ ಮೂಡುಬಿದಿರೆ ,ಗೋಪಾಲ್ ಪೂಜಾರಿ, ಯಶೋಧರಾ ಮೂಡಬಿದ್ರಿ, ಸದಾನಂದ್ ಪೂಜಾರಿ,ರಾಜು ಪೂಜಾರಿ, ಜತೀಶ್ ಕುಂದರ್,ಪವನ್ ಪೂಜಾರಿ, ದಿನೇಶ್ ಪೂಜಾರಿ, ಜಯಾನಂದ್ ಪೂಜಾರಿ ಹಾಗೂ ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ್ದರು.




