July 23, 2026
Mumbai News Kannada
ಪ್ರಕಟಣೆ

ಇಂದು ಡೊಂಬಿ‌ವಲಿಯಲ್ಲಿ ಕಲಾ ಪ್ರಕಾಶ್ ಪ್ರತಿಷ್ಠಾನದಿಂದ ವಾಲಿ ಮೋಕ್ಷ ಯಕ್ಷಗಾನ ಪ್ರದರ್ಶನ







ಮುಂಬಯಿ: ಮುಂಬಯಿಯ ಪ್ರಸಿದ್ಧ ಸಾಂಸ್ಕೃತಿಕ ಸಂಸ್ಥೆಯಾದ ಕಲಾ ಪ್ರಕಾಶ್ ಪ್ರತಿಷ್ಠಾನ (ರಿ), ಇದರ ಸಂಸ್ಥಾಪಕರಾದ ಶ್ರೀ ಪ್ರಕಾಶ್ ಎಂ. ಶೆಟ್ಟಿ ಸುರತ್ಕಲ್ ಅವರ ನೇತೃತ್ವದಲ್ಲಿ, ಕಲಾ ಪ್ರೇಮಿಗಳಿಗಾಗಿ ಅದ್ಭುತ ಯಕ್ಷಗಾನ ಕಾರ್ಯಕ್ರಮವೊಂದನ್ನು ಆಯೋಜಿಸಿದೆ. ತವರೂರಿನ ನಾಮಂಕಿತ ಕಲಾವಿದರ ಸಂಯೋಜನೆಯಲ್ಲಿ ಇಂದು, (ಸೆಪ್ಟೆಂಬರ್ 08, ಸೋಮವಾರ. ಸಂಜೆ 3.30ಕ್ಕೆ ಸರಿಯಾಗಿ) ಸುಧರ್ಮ ಸಭಾ‌ಗೃಹ, ಶ್ರೀ ಅಯ್ಯಪ್ಪ ಮಂದಿರ, ಅಜ್ಜೆಪಾಡ, ಡೊಂಬಿ‌ವಲಿ ಪೂರ್ವ ಇಲ್ಲಿ ‘ವಾಲಿ ಮೋಕ್ಷ’ ಎಂಬ ಸುಪ್ರಸಿದ್ಧ ಪ್ರಸಂಗವು ಜರುಗಲಿದೆ. ಈ ಪ್ರದರ್ಶನವು ಕಲಾಭಿಮಾನಿಗಳಿಗೆ ಒಂದು ಹೊಸ ಅನುಭವ ನೀಡಲಿದೆ.

ಕಲಾವಿದರು:
ಭಾಗವತರು: ಮಹೇಶ್ ಕನ್ಯಾಡಿ,
ಮದ್ದಳೆಕಾರರು: ಮಧುಸೂದನ್ ಪಾಲನ್
ಚೆಂಡೆ: ಆಶಿಶ್ ಆರ್ ದೇವಾಡಿಗ
ಮುಮ್ಮೇಳ: ಜಬ್ಬಾರ್ ಸಮೋ ಸಂಪಾಜೆ, ಪವನ್ ಕಿರಣ್ ಕೆರೆ,ಗಣೇಶ್ ಶೆಟ್ಟಿ ಕನ್ನಡಿಕಟ್ಟೆ, ಸುರೇಶ್ ಶೆಟ್ಟಿ ನಂದ್ರೊಳ್ಳಿ, ಡಾ ಮಹೇಶ್ ಸಾಣೂರು,

ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಯಕ್ಷಗಾನ ಕಲೆಯ ಸೊಬಗನ್ನು ಸವಿಯಬೇಕೆಂದು ಕಲಾ ಪ್ರಕಾಶ್ ಪ್ರತಿಷ್ಠಾನದ ಸಂಸ್ಥಾಪಕರಾದ ಶ್ರೀ ಪ್ರಕಾಶ್ ಎಂ. ಶೆಟ್ಟಿ ಸುರತ್ಕಲ್ ಅವರು ಕೋರಿದ್ದಾರೆ.



Related posts

ಓಂ ಶ್ರೀ ಜಗದೀಶ್ವರಿ ದೇವಸ್ಥಾನ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಬೊರಿವಲಿಜ.20ಕ್ಕೆ ಸುವರ್ಣ ಮಹೋತ್ಸವದ ನಿಮ್ಮಿತ್ತ ಸಾಂಸ್ಕೃತಿಕ ಕಾರ್ಯಕ್ರಮ.

Mumbai News Desk

ವೆಸ್ಟೆರ್ನ್ ಇಂಡಿಯಾ ಶ್ರೀ ಶನಿಮಹಾತ್ಮ ಸೇವಾ ಸಮಿತಿ ಯಿಂದ ಸೆ. 28 ರಂದು ಶನಿ ಸಿಂಗನಾಪುರದಲ್ಲಿ ಶನಿ ಪೂಜೆ.

Mumbai News Desk

ಶ್ರೀ ಶನಿ ಮಹಾತ್ಮ ಪೂಜಾ ಸಮಿತಿ ಕೋಟೆ , ನಾಲಸೋಪರ ಜೂನ್ 19ಕ್ಕೆ ಶ್ರೀ ನಾಗದೇವರ ಪ್ರತಿಷ್ಟಾಪನ ದಿನಾಚರಣೆ

Mumbai News Desk

ಆಗಸ್ಟ್‌ 30ರಂದು ‘ತುಲುವೆರೆ ಕಲ ಬೊಂಬೈ ಎಗ್ಗೆ’ ವಾರ್ಷಿಕೋತ್ಸವ: ಹಾಸ್ಯ ಕವಿಗೋಷ್ಠಿಗೆ ಹೆಸರು ನೋಂದಾವಣೆಗೆ ಆಹ್ವಾನ

Mumbai News Desk

ಇಂದು: ಗೊರೇಗಾವ್ ಪೂರ್ವದ ಜಯ ಲೀಲಾ ಸಭಾಗೃಹದಲ್ಲಿ* ನಾಗೇಶ್ ಎಂ ಕೋಟ್ಯಾನ್* ಶ್ರದ್ದಾಂಜಲಿ ಸಭೆ.

Mumbai News Desk

ಫೆ. 22 ರಂದು ಬಿಲ್ಲವರ ಅಸೋಸಿಯೇಶನ್ ಮುಂಬಯಿ, ಡೊಂಬಿವಲಿ ಸ್ಥಳೀಯ ಕಛೇರಿಯಲ್ಲಿ ವಾರ್ಷಿಕ ಶನಿಗ್ರಂಥ ಪಾರಾಯಣ

Mumbai News Desk