September 6, 2026
Mumbai News Kannada
ಪ್ರಕಟಣೆ

ಇಂದು ಡೊಂಬಿ‌ವಲಿಯಲ್ಲಿ ಕಲಾ ಪ್ರಕಾಶ್ ಪ್ರತಿಷ್ಠಾನದಿಂದ ವಾಲಿ ಮೋಕ್ಷ ಯಕ್ಷಗಾನ ಪ್ರದರ್ಶನ





ಮುಂಬಯಿ: ಮುಂಬಯಿಯ ಪ್ರಸಿದ್ಧ ಸಾಂಸ್ಕೃತಿಕ ಸಂಸ್ಥೆಯಾದ ಕಲಾ ಪ್ರಕಾಶ್ ಪ್ರತಿಷ್ಠಾನ (ರಿ), ಇದರ ಸಂಸ್ಥಾಪಕರಾದ ಶ್ರೀ ಪ್ರಕಾಶ್ ಎಂ. ಶೆಟ್ಟಿ ಸುರತ್ಕಲ್ ಅವರ ನೇತೃತ್ವದಲ್ಲಿ, ಕಲಾ ಪ್ರೇಮಿಗಳಿಗಾಗಿ ಅದ್ಭುತ ಯಕ್ಷಗಾನ ಕಾರ್ಯಕ್ರಮವೊಂದನ್ನು ಆಯೋಜಿಸಿದೆ. ತವರೂರಿನ ನಾಮಂಕಿತ ಕಲಾವಿದರ ಸಂಯೋಜನೆಯಲ್ಲಿ ಇಂದು, (ಸೆಪ್ಟೆಂಬರ್ 08, ಸೋಮವಾರ. ಸಂಜೆ 3.30ಕ್ಕೆ ಸರಿಯಾಗಿ) ಸುಧರ್ಮ ಸಭಾ‌ಗೃಹ, ಶ್ರೀ ಅಯ್ಯಪ್ಪ ಮಂದಿರ, ಅಜ್ಜೆಪಾಡ, ಡೊಂಬಿ‌ವಲಿ ಪೂರ್ವ ಇಲ್ಲಿ ‘ವಾಲಿ ಮೋಕ್ಷ’ ಎಂಬ ಸುಪ್ರಸಿದ್ಧ ಪ್ರಸಂಗವು ಜರುಗಲಿದೆ. ಈ ಪ್ರದರ್ಶನವು ಕಲಾಭಿಮಾನಿಗಳಿಗೆ ಒಂದು ಹೊಸ ಅನುಭವ ನೀಡಲಿದೆ.

ಕಲಾವಿದರು:
ಭಾಗವತರು: ಮಹೇಶ್ ಕನ್ಯಾಡಿ,
ಮದ್ದಳೆಕಾರರು: ಮಧುಸೂದನ್ ಪಾಲನ್
ಚೆಂಡೆ: ಆಶಿಶ್ ಆರ್ ದೇವಾಡಿಗ
ಮುಮ್ಮೇಳ: ಜಬ್ಬಾರ್ ಸಮೋ ಸಂಪಾಜೆ, ಪವನ್ ಕಿರಣ್ ಕೆರೆ,ಗಣೇಶ್ ಶೆಟ್ಟಿ ಕನ್ನಡಿಕಟ್ಟೆ, ಸುರೇಶ್ ಶೆಟ್ಟಿ ನಂದ್ರೊಳ್ಳಿ, ಡಾ ಮಹೇಶ್ ಸಾಣೂರು,

ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಯಕ್ಷಗಾನ ಕಲೆಯ ಸೊಬಗನ್ನು ಸವಿಯಬೇಕೆಂದು ಕಲಾ ಪ್ರಕಾಶ್ ಪ್ರತಿಷ್ಠಾನದ ಸಂಸ್ಥಾಪಕರಾದ ಶ್ರೀ ಪ್ರಕಾಶ್ ಎಂ. ಶೆಟ್ಟಿ ಸುರತ್ಕಲ್ ಅವರು ಕೋರಿದ್ದಾರೆ.



Related posts

  ಪುಣೆ  ‌:ಸುಂದರ ಪೂಜಾರಿ ಕಾಣೆಯಾಗಿದ್ದಾರೆ

Mumbai News Desk

ಸೆ.7: ಸಾಫಲ್ಯ ಸೇವಾ ಸಂಘ, ಮುಂಬೈ – ವಿದ್ಯಾರ್ಥಿ ಸಹಾಯಧನ, ಮಹಿಳೆಯರಿಗೆ ಘರ್‌ಘಂಟಿ ವಿತರಣೆ ಹಾಗೂ ನಾನಾ ಸಮಾಜಮುಖಿ ಕಾರ್ಯಕ್ರಮಗಳು

Mumbai News Desk

ಮಾ. 15 : ತುಳು ವೆಲ್ಫೇರ್ ಅಸೋಸಿಯೇಶನ್ ಡೊಂಬಿವಲಿ ಇದರ ಆಶ್ರಯದಲ್ಲಿ ಸೋಮನಾಥ ಎಸ್. ಕರ್ಕೇರರ “ಪೆರ್ಗ” ತುಳು ಹನಿಗವನ ಸಂಕಲನ ಬಿಡುಗಡೆ ಮತ್ತು ಕವಿಗೋಷ್ಠಿ

Mumbai News Desk

ಬಂಟರ ಸಂಘ ಮುಂಬಯಿ : ಫೆ 4 ರಂದು ವಸಯಿ-ದಾಹಣು ಪ್ರಾದೇಶಿಕ ಸಮಿತಿ ಇದರ ನೂತನ ಸಮಿತಿಯ ಪದಗ್ರಹಣ ಸಮಾರಂಭ

Mumbai News Desk

ಶ್ರೀ ಅಯ್ಯಪ್ಪ ಸೇವಾ ಸಮಿತಿ ಕಿಸನ್ ನಗರ, ಥಾಣೆ : ಫೆಬ್ರವರಿ 14 ರಂದು 19ನೇ ವರ್ಷದ ಶ್ರೀ ಶನೀಶ್ವರ ಮಹಾಪೂಜೆ

Mumbai News Desk

ಡೊಂಬಿವಲಿ: ಫೆ. 14ರಂದು ಶ್ರೀ ಜೈ ಭವಾನಿ ಶನೀಶ್ವರ ಮಂದಿರದ 36ನೇ ವಾರ್ಷಿಕ ಮಂಗಳೋತ್ಸವ

Mumbai News Desk