
ಮುಂಬೈ, ಸೆಪ್ಟೆಂಬರ್ 22: ಮಲಾಡ್ ಪೂರ್ವದ ಕುರಾರ್ ವಿಲೇಜ್ನಲ್ಲಿರುವ ಕೇತುವಾಡಿಯ ಶ್ರೀ ದೇವಿ ಮಹಾಮ್ಮಾಯಿ ದೇವಸ್ಥಾನದಲ್ಲಿ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2ರ ವರೆಗೆ ನವರಾತ್ರಿ ಮಹೋತ್ಸವವು ಕ್ಷೇತ್ರದ ಧರ್ಮದರ್ಶಿ ರವಿ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನಡೆಯಲಿದೆ.
ಕಾರ್ಯಕ್ರಮಗಳ ವಿವರ:
- ಸೆಪ್ಟೆಂಬರ್ 23: ಸಂಜೆ 7:30ಕ್ಕೆ ಭಜನೆ, ರಾತ್ರಿ 8:30ಕ್ಕೆ ದೇವಿ ಆವೇಶ ಪೂಜೆ (ಪಿಂಗಾರ ಸೇವೆ), ಮತ್ತು ರಾತ್ರಿ 9:00ಕ್ಕೆ ತೀರ್ಥ ಪ್ರಸಾದ ವಿತರಣೆ.
- ಸೆಪ್ಟೆಂಬರ್ 24: ಸಂಜೆ 7:30ಕ್ಕೆ ಭಜನೆ, ರಾತ್ರಿ 8:30ಕ್ಕೆ ದೇವಿ ಆವೇಶ ಪೂಜೆ (ಅಗ್ನಿ ಸೇವೆ), ಮತ್ತು ರಾತ್ರಿ 9:00ಕ್ಕೆ ತೀರ್ಥ ಪ್ರಸಾದ ವಿತರಣೆ.
- ಸೆಪ್ಟೆಂಬರ್ 25: ಸಂಜೆ 7:30ಕ್ಕೆ ಭಜನೆ, ರಾತ್ರಿ 8:30ಕ್ಕೆ ದೇವಿ ಆವೇಶ ಪೂಜೆ (ಕರ್ಪೂರ ಸೇವೆ), ಮತ್ತು ರಾತ್ರಿ 9:00ಕ್ಕೆ ತೀರ್ಥ ಪ್ರಸಾದ ವಿತರಣೆ.
- ಸೆಪ್ಟೆಂಬರ್ 26: ಸಂಜೆ 7:30 ರಿಂದ 8:00ರವರೆಗೆ ಭಜನೆ, ರಾತ್ರಿ 8:30ಕ್ಕೆ ದೇವಿ ಆವೇಶ ಪೂಜೆ, ಮತ್ತು ರಾತ್ರಿ 9:00ಕ್ಕೆ ತೀರ್ಥ ಪ್ರಸಾದ ವಿತರಣೆ.
- ಸೆಪ್ಟೆಂಬರ್ 27: ಸಂಜೆ 7:30ಕ್ಕೆ ಭಜನೆ, ರಾತ್ರಿ 8:30ಕ್ಕೆ ದೇವಿ ಆವೇಶ ಪೂಜೆ (ತೆಂಗಿನಕಾಯಿ ಸೇವೆ), ಮತ್ತು ರಾತ್ರಿ 9:00ಕ್ಕೆ ತೀರ್ಥ ಪ್ರಸಾದ ವಿತರಣೆ.
- ಸೆಪ್ಟೆಂಬರ್ 28: ಸಂಜೆ 7:30 ರಿಂದ ಭಜನೆ, ದೇವಿ ಆವೇಶ ಪೂಜೆ, ಮತ್ತು ತೀರ್ಥ ಪ್ರಸಾದ ವಿತರಣೆ.
- ಸೆಪ್ಟೆಂಬರ್ 29: ಸಂಜೆ 7:30ಕ್ಕೆ ಭಜನೆ, ರಾತ್ರಿ 8:30ಕ್ಕೆ ದೇವಿ ಆವೇಶ ಪೂಜೆ (ಅರಿಶಿನ ಸೇವೆ), ಮತ್ತು ರಾತ್ರಿ 9:00ಕ್ಕೆ ತೀರ್ಥ ಪ್ರಸಾದ ವಿತರಣೆ.
- ಸೆಪ್ಟೆಂಬರ್ 30: ಬೆಳಿಗ್ಗೆ 8:00ಕ್ಕೆ ದುರ್ಗಾ ಹೋಮ, ಮಧ್ಯಾಹ್ನ 12:00ಕ್ಕೆ ಮಹಾಪೂಜೆ ಮತ್ತು ಮಂಗಳಾರತಿ, ಮಧ್ಯಾಹ್ನ 12:30ಕ್ಕೆ ಅನ್ನಪ್ರಸಾದ. ನಂತರ, ರಾತ್ರಿ 7:30ಕ್ಕೆ ಭಜನೆ, ರಾತ್ರಿ 8:30ಕ್ಕೆ ದೇವಿ ಆವೇಶ ಪೂಜೆ (ಕುಂಕುಮ ಸೇವೆ), ಮತ್ತು ರಾತ್ರಿ 9:00ಕ್ಕೆ ತೀರ್ಥ ಪ್ರಸಾದ ವಿತರಣೆ.
- ಅಕ್ಟೋಬರ್ 1: ಸಂಜೆ 7:30ಕ್ಕೆ ಭಜನೆ, ರಾತ್ರಿ 8:30ಕ್ಕೆ ದೇವಿ ಆವೇಶ ಪೂಜೆ (ಸಿಹಿ ಹಲ್ವಾ ಸೇವೆ), ಮತ್ತು ರಾತ್ರಿ 9:00ಕ್ಕೆ ತೀರ್ಥ ಪ್ರಸಾದ ವಿತರಣೆ.
- ಅಕ್ಟೋಬರ್ 2: ಮಧ್ಯಾಹ್ನ 12:30ಕ್ಕೆ ಮಂಗಳಾರತಿ, ಮಧ್ಯಾಹ್ನ 1:00ಕ್ಕೆ ದೇವಿ ಆವೇಶ ಪೂಜೆ, ಮತ್ತು ಸಂಜೆ 5:00ಕ್ಕೆ ಕಲಶ ವಿಸರ್ಜನೆ.
ಶ್ರೀದೇವಿ ಮಹಾಮ್ಮಾಯಿ ಸೇವಾ ಸಮಿತಿಯ ಪದಾಧಿಕಾರಿಗಳು, ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಿ ಶ್ರೀದೇವಿಯ ಮಹಾಪ್ರಸಾದವನ್ನು ಸ್ವೀಕರಿಸಬೇಕೆಂದು ಭಕ್ತಾದಿಗಳಲ್ಲಿ ವಿನಂತಿಸಿದ್ದಾರೆ.




