
ಮುಂಬಯಿ : ಭಾರತ್ ಬ್ಯಾಂಕ್ ಭೊಯಿಸರ್ ಶಾಖೆಯ ದಶಮಾನೋತ್ಸವ ಸಮಾರಂಭವು ಸೆ. 22 ರಂದು ನಡೆಯಿತು.
ಬ್ಯಾಂಕಿನ ಭೊಯಿಸರ್ ಶಾಖೆಯ ಮುಖ್ಯಸ್ಥೆ ಜೆನಿಫರ್ ಬಿ. ಸಿಕ್ವೇರಾ ಇವರ ನೇತ್ರತ್ವದಲ್ಲಿ ನಡೆದ ಸಮಾರಂಭಕ್ಕೆ ಸ್ಥಳೀಯ ಗಣ್ಯರು, ಪ್ರಮುಖ ಗ್ರಾಹಕರು ದೀಪ ಬೆಳಗಿಸಿ ಚಾಲನೆ ನೀಡಿ ಬ್ಯಾಂಕಿನ ಭೊಯಿಸರ್ ಶಾಖೆಯ ಎಲ್ಲಾ ಸಿಬ್ಬಂದಿಗಳು ಗ್ರಾಹಕರಿಗೆ ನೀಡುವ ಸೇವೆಯ ಬಗ್ಗೆ ಪ್ರಶಂಸನೀಯ ಮಾತುಗಳನ್ನಾಡಿ ದಶಮಾನೋತ್ಸವ ಸಮಾರಂಭವನ್ನಾಚರಿಸುತ್ತಿರುವ ಭಾರತ್ ಬ್ಯಾಂಕ್ ನ ಭೊಯಿಸರ್ ಶಾಖೆಗೆ ಶುಭ ಕೋರಿದರು.
ಶಾಖಾ ಪ್ರಮುಖರಾದ ಶ್ರೀಮತಿ ಜೆನಿಫರ್ ಸಿಕ್ವೇರಾ, ಸಹಾಯಕ ದಿನೇಶ್ ಎಸ್ ಪೂಜಾರಿ, ಸಿಬ್ಬಂದಿಗಳು, ಭಾಸ್ಕರ್ ಶೆಟ್ಟಿ, ಹರ್ಷಲ್ ಜಾಧವ್, ರಾಜೀವ್ ಮೊಗವೀರ, ಪ್ರಕಾಶ್ ಶೆಟ್ಟಿ, ಯೋಗೇಶ್ ಶೆಟ್ಟಿ, ವಿನಯ ಅಡಪಾ, ಮನೀಷ್ ಪ್ರಜಾಪತಿ ಮೊದಲಾದವರು ಉಪಸ್ಥಿತರಿದ್ದರು.




