
ಸುದ್ದಿ ವಿವರ : ಪಿ.ಆರ್.ರವಿಶಂಕರ್
ಬೊಯಿಸರ್ :
ಇದೇ ಡಿಸೆಂಬರ್ ತಾ. 27 ನೆಯ ಶನಿವಾರದಂದು ಪಾಲ್ಘರ್ ಜಿಲ್ಲೆಯ ಬೊಯಿಸರ್ ನಲ್ಲಿಯ ಸಂತಶ್ರೇಷ್ಟ ಗುರು ನಿತ್ಯಾನಂದ ಸ್ವಾಮಿ ಮಂದಿರದಲ್ಲಿ 14 ನೆಯ ವರ್ಷದ ಪ್ರತಿಷ್ಟಾಪನಾ ಉತ್ಸವವು ಜರಗಲಿದೆ.
ಪ್ರಾತಃ ಕಾಲದ 6 ಗಂಟೆಗೆ ಸಂಕಲ್ಪ ಪೂಜೆ ಹಾಗೂ ಗಣಹೋಮದೊಂದಿಗೆ ಕಾರ್ಯಕ್ರಮ ಆರಂಭವಾಗುವುದು. 7. ಗಂಟೆಗೆ ನಿತ್ಯಾನಂದ ಬಾಬಾ ಪಂಚಾಮೃತ ಅಭಿಷೇಕ ಮತ್ತು ಪ್ರಾತಃ ಆರತಿಯು ಸರ್ವ ಭಕ್ತಾಭಿಮಾನಿಗಳ ಭಾಗವಹಿಸುವಿಕೆಯಲ್ಲಿ ಜರಗಲಿದೆ.
ಬೆಳಿಗ್ಗೆ 9 ರಿಂದ ಶ್ರೀ ಸತ್ಯನಾರಾಯಣ ಮಹಾಪೂಜೆ ಹಾಗೂ ಸದ್ಗುರು ನಿತ್ಯಾನಂದ ಭಜನಾ ಮಂಡಳಿಯವರಿಂದ ಭಕ್ತಿ ಗೀತೆ ಹಾಗೂ ಭಜನಾ ಕಾರ್ಯಕ್ರಮವಿರುತ್ತದೆ. 12 ಗಂಟೆಗೆ ಮದ್ಯಾಹ್ನದ ಆರತಿಯ ಬಳಿಕ ಅನ್ನಸಂತರ್ಪಣೆ ಜರಗಲಿದೆ.
ಸಂಜೆ 6 ಗಂಟೆಗೆ ನಿತ್ಯಾನಂದ ಬಾಬಾ ಇವರ ಪಲ್ಲಕ್ಕಿಯಲ್ಲಿ ಭವ್ಯ ಮೆರವಣಿಗೆ ಇದ್ದು ಸಂಜೆ 8 ಗಂಟೆಯ ಮಂಗಳಾರತಿಯೊಂದಿಗೆ ಕಾರ್ಯಕ್ರಮ ಪೂರ್ಣಗೊಳ್ಳಲಿದೆ.
ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವ ಈ ಪೂರ್ಣ ದಿನದ ಪ್ರತಿಷ್ಟಾಪನೋತ್ಸವಕ್ಕೆ ಭಕ್ತಾಭಿಮಾನಿಗಳೆಲ್ಲರೂ ಸಹ ಕುಟುಂಬ ಆಗಮಿಸಿ ಭಾಗವಹಿಸಬೇಕಾಗಿ ಶ್ರೀಮತಿ ಸುಹಾಸಿನಿ ದಾಮೋದರ್ ನಾಯ್ಕ್ ಹಾಗೂ ಸದ್ಗುರು ನಿತ್ಯಾನಂದ ಸೇವಾ ಟ್ರಸ್ಟ್ ವಿಶ್ವಸ್ಥ ಮಂಡಳಿಯವರು ಸಮಸ್ಥ ಭಕ್ತಮಂಡಳಿಯ ಪರವಾಗಿ ಪ್ರಕಟಣೆಯ ಮೂಲಕ ವಿನಂತಿಸಿಕೊಂಡಿದ್ದಾರೆ.
ಸುದ್ದಿ ವಿವರ : ಪಿ.ಆರ್.ರವಿಶಂಕರ್
8483980035




