September 6, 2026
Mumbai News Kannada
ಪ್ರಕಟಣೆ

ಡೊಂಬಿವಿಲಿಯಲ್ಲಿನ ವರದ ಸಿದ್ಧಿವಿನಾಯಕ ಮಂದಿರದಲ್ಲಿ  ಫೆ.01 ರಂದು ಮಾಘಿ ಗಣೇಶೋತ್ಸವ ಮತ್ತು ಯಕ್ಷಗಾನ ಪ್ರದರ್ಶನ





ಸುದ್ದಿ ವಿವರ : ಪಿ.ಆರ್.ರವಿಶಂಕರ್  8483980035

        ಡೊಂಬಿವಿಲಿ : ವರ್ಷದುದ್ದಕ್ಕೂ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಜರಗಿಸುತ್ತಾ ಬಂದಿರುವ ಡೊಂಬಿವಿಲಿ ಪೂರ್ವದ ಪ್ರತಿಷ್ಟಿತ  ಶ್ರೀ ವರದ ಸಿದ್ಧಿವಿನಾಯಕ  ಸೇವಾ ಮಂಡಲವು ತಮ್ಮ ಪರಿಸರದಲ್ಲಿನ ಶ್ರೀ ಮಹಾಗಣಪತಿ ಮಂದಿರದಲ್ಲಿ ಈ ವರ್ಷದ ಮಾಘ ಮಾಸದಲ್ಲಿನ ಗಣೇಶ ಉತ್ಸವವನ್ನು ಆಚರಿಸಲಿದೆ.

ಇದೇ ಫೆಬ್ರುವರಿ ತಾ.01 ಶನಿವಾರದಂದು ಪ್ರಾತಃ ಕಾಲದ ಗಣಹೋಮದೊಂದಿಗೆ ಆರಂಭವಾಗುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮದ್ಯಾಹ್ನದ ಮಹಾ ಮಂಗಳ ಆರತಿಯೊಂದಿಗೆ ಪೂರ್ಣಗೊಳ್ಳಲಿದ್ದು , ಬಳಿಕ ಪ್ರಸಾದ ರೂಪದಲ್ಲಿ  ಅನ್ನಸಂತರ್ಪಣೆ ಜರಗಲಿದೆ.

     ಅಪರಾಹ್ನ 2.30 ರ ಬಳಿಕ ಶ್ರೀ ವರದ ಸಿದ್ಧಿವಿನಾಯಕ ಸೇವಾ ಮಂಡಲ ಹಾಗೂ ಶ್ರೀ ಸಚ್ಚಿದಾನಂದ ಸರಸ್ವತೀ ಕೃಪಾ ಪೋಷಿತ ಯಕ್ಷಗಾನ ಮಂಡಳಿ ಮುಂಬೈ  ಇವರ ಜಂಟಿ ಆಶ್ರಯದಲ್ಲಿ  ಇತ್ತೀಚೆಗೆ ಅಗಲಿದ ಯಕ್ಷಗಾನ ಕಲಾವಿದ ಹಾಗೂ ಯಕ್ಷಗುರು ದಿ.ಕುಕ್ಕೇಹಳ್ಳಿ ವಿಠಲ ಪ್ರಭು ಇವರ ಸ್ಮರಣಾರ್ಥ , ಪೌರಾಣಿಕ ಯಕ್ಷಗಾನ ಕಥಾನಕ ಭೀಷ್ಮ ವಿಜಯ         (ಬಡಗು ತಿಟ್ಟು)  ಆಡಿತೋರಿಸಲಿರುವರು.

ಯಕ್ಷಗಾನದ ಮೊದಲು  ಜರಗಲಿರುವ ಕಿರು ಸಭಾ ಕಾರ್ಯಕ್ರಮದಲ್ಲಿ ಆಮಂತ್ರಿತ ಗಣ್ಯ ಅತಿಥಿಗಳು ಭಾಗವಹಿಸಲಿರುವರು.

ಡೊಂಬಿವಿಲಿ ಪೂರ್ವದ ಭೋಪರ್ ರೋಡ್ , ನಾಂದಿವಲಿ ಯಲ್ಲಿನ ಶ್ರೀ  ವರದಸಿದ್ಧಿ ವಿನಾಯಕ ಸೇವಾಭವನದಲ್ಲಿ ಕಾರ್ಯಕ್ರಮ ಜರಗಲಿದ್ದು  ಭಕ್ತಾಭಿಮಾನಿಗಳು ಹಾಗೂ ಯಕ್ಷಕಲಾ ರಸಿಕ ಪ್ರೇಕ್ಷಕರು ಎರಡೂ ಕಾರ್ಯಕ್ರಮಗಳಿಗೆ ಬಂದು ಭಾಗವಹಿಸ ಬೇಕಾಗಿ  ಆಯೋಜಕರು ಪ್ರಕಟಣೆಯ ಮೂಲಕ ವಿನಂತಿ ಮಾಡಿಕೊಂಡಿದ್ದಾರೆ.

     ಸುದ್ದಿ ವಿವರ :ಪಿ.ಆರ್.ರವಿಶಂಕರ್



Related posts

ನ. 24 ರಂದು ಶ್ರೀ ಮಹಾದೇವಿ ಮಂತ್ರದೇವತೆ ಸನ್ನಿಧಿ (ರಿ.) ಮುಲುಂಡ್ ಪಶ್ಚಿಮ – 2ನೇ ವರ್ಷದ ಗಗ್ಗರ ಸೇವೆ

Mumbai News Desk

ಬಂಟರ ಸಂಘ ಮುಂಬಯಿ. ಗುರುಪೂರ್ಣಿಮೆ ಗೆ ಶ್ರೀ ಮಹಾವಿಷ್ಣು ಭಜನಾ ತಂಡ ಶುಭಾರಂಭ.

Mumbai News Desk

ಕೊಡ್ಯಡ್ಕ ದೇವಸ್ಥಾನಕ್ಕೆ ಹೋದಾಗ ಆದ ಪ್ರೇರಣೆಯಂತೆ ಬೆಳಗಾವಿಯಲ್ಲಿ ನೆಲೆ ನಿಂತ ಅನ್ನಪೂರ್ಣೇಶ್ವರಿ ; ದೇವಿಯ ವಾರ್ಷಿಕ ಮಹೋತ್ಸವ ಶುಕ್ರವಾರದಿಂದ ಆರಂಭ

Mumbai News Desk

ತುಳುಕೂಟ ಫೌಂಡೇಶನ್  ಮಹಿಳಾ ವಿಭಾಗ, ಜೂನ್ 21 ರಂದು ಯೋಗ ದಿನಾಚರಣೆ ,

Mumbai News Desk

ಫೆ.23(ನಾಳೆ) ಕರ್ನಾಟಕ ಸಂಘ ಡೊಂಬಿವಲಿ:ಲಲಿತ ಕಲಾ ವಿಭಾಗ: ಶ್ರೀ ಪುರಂದರದಾಸರ ಆರಾಧನಾ ಮಹೋತ್ಸವ ನಿಮಿತ್ತ ಭಜನೆ ಹಾಗೂ ಕುಣಿತ ಭಜನೆ ಸ್ಪರ್ದೆ.

Mumbai News Desk

ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿ :ಜ. 7 ರಂದು 36ನೇ ವಾರ್ಷಿಕೋತ್ಸವ

Mumbai News Desk