July 23, 2026
Mumbai News Kannada
ಪ್ರಕಟಣೆ

ಡೊಂಬಿವಿಲಿಯಲ್ಲಿನ ವರದ ಸಿದ್ಧಿವಿನಾಯಕ ಮಂದಿರದಲ್ಲಿ  ಫೆ.01 ರಂದು ಮಾಘಿ ಗಣೇಶೋತ್ಸವ ಮತ್ತು ಯಕ್ಷಗಾನ ಪ್ರದರ್ಶನ







ಸುದ್ದಿ ವಿವರ : ಪಿ.ಆರ್.ರವಿಶಂಕರ್  8483980035

        ಡೊಂಬಿವಿಲಿ : ವರ್ಷದುದ್ದಕ್ಕೂ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಜರಗಿಸುತ್ತಾ ಬಂದಿರುವ ಡೊಂಬಿವಿಲಿ ಪೂರ್ವದ ಪ್ರತಿಷ್ಟಿತ  ಶ್ರೀ ವರದ ಸಿದ್ಧಿವಿನಾಯಕ  ಸೇವಾ ಮಂಡಲವು ತಮ್ಮ ಪರಿಸರದಲ್ಲಿನ ಶ್ರೀ ಮಹಾಗಣಪತಿ ಮಂದಿರದಲ್ಲಿ ಈ ವರ್ಷದ ಮಾಘ ಮಾಸದಲ್ಲಿನ ಗಣೇಶ ಉತ್ಸವವನ್ನು ಆಚರಿಸಲಿದೆ.

ಇದೇ ಫೆಬ್ರುವರಿ ತಾ.01 ಶನಿವಾರದಂದು ಪ್ರಾತಃ ಕಾಲದ ಗಣಹೋಮದೊಂದಿಗೆ ಆರಂಭವಾಗುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮದ್ಯಾಹ್ನದ ಮಹಾ ಮಂಗಳ ಆರತಿಯೊಂದಿಗೆ ಪೂರ್ಣಗೊಳ್ಳಲಿದ್ದು , ಬಳಿಕ ಪ್ರಸಾದ ರೂಪದಲ್ಲಿ  ಅನ್ನಸಂತರ್ಪಣೆ ಜರಗಲಿದೆ.

     ಅಪರಾಹ್ನ 2.30 ರ ಬಳಿಕ ಶ್ರೀ ವರದ ಸಿದ್ಧಿವಿನಾಯಕ ಸೇವಾ ಮಂಡಲ ಹಾಗೂ ಶ್ರೀ ಸಚ್ಚಿದಾನಂದ ಸರಸ್ವತೀ ಕೃಪಾ ಪೋಷಿತ ಯಕ್ಷಗಾನ ಮಂಡಳಿ ಮುಂಬೈ  ಇವರ ಜಂಟಿ ಆಶ್ರಯದಲ್ಲಿ  ಇತ್ತೀಚೆಗೆ ಅಗಲಿದ ಯಕ್ಷಗಾನ ಕಲಾವಿದ ಹಾಗೂ ಯಕ್ಷಗುರು ದಿ.ಕುಕ್ಕೇಹಳ್ಳಿ ವಿಠಲ ಪ್ರಭು ಇವರ ಸ್ಮರಣಾರ್ಥ , ಪೌರಾಣಿಕ ಯಕ್ಷಗಾನ ಕಥಾನಕ ಭೀಷ್ಮ ವಿಜಯ         (ಬಡಗು ತಿಟ್ಟು)  ಆಡಿತೋರಿಸಲಿರುವರು.

ಯಕ್ಷಗಾನದ ಮೊದಲು  ಜರಗಲಿರುವ ಕಿರು ಸಭಾ ಕಾರ್ಯಕ್ರಮದಲ್ಲಿ ಆಮಂತ್ರಿತ ಗಣ್ಯ ಅತಿಥಿಗಳು ಭಾಗವಹಿಸಲಿರುವರು.

ಡೊಂಬಿವಿಲಿ ಪೂರ್ವದ ಭೋಪರ್ ರೋಡ್ , ನಾಂದಿವಲಿ ಯಲ್ಲಿನ ಶ್ರೀ  ವರದಸಿದ್ಧಿ ವಿನಾಯಕ ಸೇವಾಭವನದಲ್ಲಿ ಕಾರ್ಯಕ್ರಮ ಜರಗಲಿದ್ದು  ಭಕ್ತಾಭಿಮಾನಿಗಳು ಹಾಗೂ ಯಕ್ಷಕಲಾ ರಸಿಕ ಪ್ರೇಕ್ಷಕರು ಎರಡೂ ಕಾರ್ಯಕ್ರಮಗಳಿಗೆ ಬಂದು ಭಾಗವಹಿಸ ಬೇಕಾಗಿ  ಆಯೋಜಕರು ಪ್ರಕಟಣೆಯ ಮೂಲಕ ವಿನಂತಿ ಮಾಡಿಕೊಂಡಿದ್ದಾರೆ.

     ಸುದ್ದಿ ವಿವರ :ಪಿ.ಆರ್.ರವಿಶಂಕರ್



Related posts

ಮೇ 12 :ರವಿನಾಥ್ ಶೆಟ್ಟಿ ತೋನ್ಸೆ ನೇತೃತ್ವದಲ್ಲಿ ಗುಜರಾತ್ ಭರೂಚ್ ಶ್ರೀ ಗುಮನ್ ದೇವ್ ಮಂದಿರದಲ್ಲಿ ಶ್ರೀ ಬಾಲಾಜಿ ವೆಂಕಟೇಶ್ವರ ಸ್ವಾಮಿ ಪ್ರಾಣಪ್ರತಿಷ್ಠೆ , ಬ್ರಹ್ಮಕಲಶೋತ್ಸವ , ಶ್ರೀನಿವಾಸ ಕಲ್ಯಾಣ. 

Mumbai News Desk

ಎ. 14 ರಂದು ಗೋರೆಗಾಂವ್ ಕರ್ನಾಟಕ ಸಂಘದ ತುಳು ಪರ್ಬ ದತ್ತಿ ನಿಧಿ ಕಾರ್ಯಕ್ರಮ  

Mumbai News Desk

ಶಹಾಡ್‌ನ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ 64ನೇ ವಾರ್ಷಿಕೋತ್ಸವ: ಏ. 12ರಿಂದ ಧಾರ್ಮಿಕ ಸಂಭ್ರಮ

Mumbai News Desk

ನಾಳೆ (ಫೆ. 23) ಶ್ರೀಮದ್ಭಾರತ ಮಂಡಳಿಯ 147ನೇ ವಾರ್ಷಿಕ ಮಂಗಳೋತ್ಸವ ಹಾಗೂ 23ನೇ ವಾರ್ಷಿಕ ಪ್ರತಿಷ್ಠಾ ಮಹೋತ್ಸವ

Mumbai News Desk

ಜ. 24/25/26 : ಬಿಲ್ಲವರ ಎಸೋಸಿಯೇಷನ್ ಮುಂಬಯಿ ಇದರ ಸಾಂಸ್ಕೃತಿಕ ಉಪ ಸಮಿತಿಯ ಆಶ್ರಯದಲ್ಲಿ ‘ ಶ್ರೀ ಗುರು ನಾರಾಯಣ ತುಳು ನಾಟಕ ಸ್ಪರ್ಧೆ ‘

Mumbai News Desk

ಶ್ರೀ ಮಹಾಕಾಳಿ ಮಂದಿರ ಜೋಗೇಶ್ವರಿ ಪೂರ್ವ : ಸೆ. 22ರಿಂದ ಅ. 2ರ ತನಕ 61ನೇ ವರ್ಷದ ನವರಾತ್ರಿ ಉತ್ಸವ

Mumbai News Desk