ಪರಿಯಾಳ ಸಮಾಜ ಮಹಾ ಸಭಾ ದ ಅಧ್ಯಕ್ಷರಾಗಿ ಸುನೀಲ್ ಕುಮಾರ್ ಹೆಜ್ಮಾಡಿ ಆಯ್ಕೆಯಾಗಿದ್ದಾರೆ. ಈ ಸಂಘಟನೆಯು ರಾಷ್ಟ್ರಮಟ್ಟದ ವ್ಯಾಪ್ತಿಯನ್ನು ಹೊಂದಿರುತ್ತದೆ.
ಇತ್ತೀಚಿಗೆ ಪರಿಯಾಳ ಸಮುದಾಯ ಭವನ, ಕೃಷ್ಣ ನಗರ, ಬೋಂದೆಲ್, ಮಂಗಳೂರು ಇಲ್ಲಿ ದಿನಾಂಕ 25.12.2025ರಂದು ಜರಗಿದ ವಾರ್ಷಿಕ ಮಹಾ ಸಭೆ ಯಲ್ಲಿ ಈ ಆಯ್ಕೆ ಜರಗಿತು. ಸುನೀಲ್ ಕುಮಾರ್ ಹೆಜ್ಮಾಡಿ ಇವರು ದ. ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಪ್ರಧಾನ ಕಚೇರಿಯಲ್ಲಿ ಐ. ಟಿ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದು, ಹೆಜಮಾಡಿ ಜೈ ಕರ್ನಾಟಕ ಯುವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿರುತಾರೆ.
ಸುನೀಲ್ ಕುಮಾರ್ ಅವರು, ಬಂಗೇರ ನಾಗ ಬ್ರಹ್ಮ ಮೂಲಸ್ಥಾನ ಎರ್ಮಾಳ್ ಇದರ ಪ್ರಧಾನ ಕಾರ್ಯದರ್ಶಿ ಯಾಗಿ, ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕಣ್ಣಂಗಾರ್, ಹಾಗೂ ಹೆಜಮಾಡಿ ಪರಿಸರದ ದೈವ ಸ್ಥಾನಗಳಲ್ಲಿ ತಮ್ಮ ಹಿರಿಯರಿಂದ ಬಂದ ಸಂಪ್ರದಾಯಿಕ ಸೇವೆ ಮಾಡುತಿದ್ದಾರೆ.




