30.9 C
Mumbai
June 8, 2026
Mumbai News Kannada
ಪ್ರಕಟಣೆ

ಶ್ರೀ ಧರ್ಮ ಜಾರಂದಾಯ ದೈವಸ್ಥಾನ, ಹೆಜಮಾಡಿ : ಜ. 25ಕ್ಕೆ ವಾರ್ಷಿಕ ಬಂಡಿ ನೇಮೋತ್ಸವದ





ಉಡುಪಿ ಜಿಲ್ಲೆ, ಹೆಜಮಾಡಿ ರಾಷ್ಟ್ರೀಯ ಹೆದ್ದಾರಿ-66ರ ಬಳಿಯ ಶ್ರೀ ಧರ್ಮ ಜಾರಂದಾಯ ದೈವಸ್ಥಾನ(ಕುದುರೆ ಜಾರಂದಾಯ ದೈವಸ್ಥಾನ) ಇದರ ವಾರ್ಷಿಕ ಬಂಡಿ ನೇಮೋತ್ಸವವು ಜನವರಿ 25ರ ಆದಿತ್ಯವಾರ ಜರುಗಲಿರುವುದು.
ಈ ಪುಣ್ಯ ಕಾರ್ಯದಲ್ಲಿ ಭಕ್ತಾದಿಗಳೆಲ್ಲರೂ ಭಾಗವಹಿಸಿ, ದೈವದ ಸಿರಿಮುಡಿ ಗಂಧಪ್ರಸಾದವನ್ನು ಸ್ವೀಕರಿಸಿ, ಶ್ರೀ ದೈವದ ಕೃಪಾನುಗ್ರಹಕ್ಕೆ ಪಾತ್ರರಾಗುವಂತೆ ನಾರಾಯಣ ಪಿ. ಅಮೀನ್ (ಪ್ರಧಾನ ಅರ್ಚಕರು/ಗೌರವ ಅಧ್ಯಕ್ಷರು), ಹೆಚ್. ದಾಮೋದರ ಬಂಗೇರ (ಗೌರವ ಅಧ್ಯಕ್ಷರು), ಮಾಧವ ಸನಿಲ್ (ಗೌರವ ಅಧ್ಯಕ್ಷರು), ಪ್ರಮೋದ್ ಚಂದ್ರ ಹೆಜಮಾಡಿ (ಅಧ್ಯಕ್ಷರು), ಮನೋಹರ ಹೆಜಮಾಡಿ (ಗೌ. ಪ್ರ. ಕಾರ್ಯದರ್ಶಿ), ದಿನೇಶ್ ಸಾಲ್ಯಾನ್ (ಕೋಶಾಧಿಕಾರಿ), ಹರಿದಾಸ ಭಟ್ (ಧಾರ್ಮಿಕ ಸಲಹೆಗಾರರು), ಗಣೇಶ್ ಎ. ಮೆಂಡನ್ (ಸಂಚಾಲಕರು, ಶ್ರೀ ಧರ್ಮ ಜಾರಂದಾಯ ಯುವ ಸಮಿತಿ) ಹಾಗೂ ಮುಂಬಯಿ ಸಮಿತಿಯ
ಭಾಸ್ಕರ ಕಾಂಚನ್ (ಗೌರವಾಧ್ಯಕ್ಷರು), ಹರೀಶ್ ಶಾಂತಿ (ಅಧ್ಯಕ್ಷರು), ರಘುರಾಮ ಪೂಜಾರಿ (ಗೌ. ಪ್ರ. ಕಾರ್ಯದರ್ಶಿ), ಚಂದಯ್ಯ ಹೆಜಮಾಡಿ (ಕೋಶಾಧಿಕಾರಿ).
ಶ್ರೀ ಧರ್ಮ ಜಾರಂದಾಯ ಯುವ ಸೇವಾ ಸಮಿತಿ, ಮಹಿಳಾ ಮಂಡಳಿ ಹೆಜಮಾಡಿ, ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ಹೆಜಮಾಡಿ ಗ್ರಾಮದ ಸಮಸ್ತರು ಪ್ರಕಟಣೆ ಮೂಲಕ ವಿನಂತಿಸಿದ್ದಾರೆ.

ಕಾರ್ಯಕ್ರಮಗಳ ವಿವರ : 25-01-26 ರವಿವಾರ

ಬೆಳಿಗ್ಗೆ ಗಂಟೆ 7.00ರಿಂದ ಶ್ರೀ ದೈವಗಳಿಗೆ ನವಕ ಪ್ರಧಾನ ಕಲಶ ಅಭಿಷೇಕ
ಮಧ್ಯಾಹ್ನ 12:30 ರಿಂದ ಸಾರ್ವಜನಿಕ ಅನ್ನ ಸಂತರ್ಪಣೆ, (ಸತೀಶ್ ವಿಠಲ್ ಬಿಜೈ, ಹೈಕೋರ್ಟ್ ವಕೀಲರು, ಮುಂಬಯಿ ಇವರ ಸೇವೆ )
ಸಾಯಂಕಾಲ ಗಂಟೆ 7.00ಕ್ಕೆ ದೈವದ ಬಂಡಾರ ಇಳಿಯುವುದು
ರಾತ್ರಿ ಗಂಟೆ 9:30ರಿಂದ ಜಾರಂದಾಯ ಮತ್ತು ಬಂಟ ದೈವದ ನೇಮೋತ್ಸವ

ಭಕ್ತಾದಿಗಳು ತನುಮನ ದನಗಳಿಂದ ಸಹಕರಿಸಿ ಶ್ರೀ ದೈವದ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.



Related posts

ಮುಂಬೈ ನ್ಯೂಸ್ ನಡೆದು ಬಂದ ದಾರಿ…..

Chandrahas

ಮಾ 9 ರಿಂದ 11 ರ ವರಗೆ ಶ್ರೀ ಜಗದಂಬಾ ಮಂದಿರ, ಡೊಂಬಿವಲಿಯ 9ನೇ ವಾರ್ಷಿಕೋತ್ಸವ.

Mumbai News Desk

ಮೇ. 31 ರಂದು ಮಲಾಡ್ ಪೂರ್ವ ದ  ಉತ್ಕರ್ಷ ಶಾಲೆಯ ಮೈದಾನದಲ್ಲಿ ಸ್ವಾಮೀ ಕೊರಗಜ್ಜ ನೇಮೋತ್ಸವ.

Mumbai News Desk

 ಆ. 8 ರಂದು ಶ್ರೀ ರಜಕ ಸಂಘ ಮುಂಬಯಿಯ ಮಹಿಳಾ ವಿಭಾಗದಿಂದ ಶ್ರೀ ವರ ಮಹಾಲಕ್ಷ್ಮಿ ಪೂಜೆ

Mumbai News Desk

ಅಗಸ್ಟ್ 23, ತುಲುವೆರ ಕಲ(ರಿ), ಸಂಸ್ಥೆಯ ಊರು ಮತ್ತು ಮುಂಬೈಯ ಜಂಟಿ ಆಯೋಜನೆಯಲ್ಲಿ ಬಂಟರ ಸಂಘ ಕುರ್ಲಾದ ಎನೆಕ್ಸ್ ಹಾಲ್‌ನಲ್ಲಿ ‘ತುಲುವೆರ ಮಿನದನ’ ಕಾರ್ಯಕ್ರಮ

Mumbai News Desk

ಯಕ್ಷ ವೈಭವ 2025ರ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ

Mumbai News Desk