34 C
Mumbai
March 6, 2026
Mumbai News Kannada
ಮುಂಬಯಿ

ಪೌರಾಣಿಕ ವಾಚಕ ಸಮಿತಿ ಮುಂಬಯಿ: ಸುವರ್ಣ ಮಹೋತ್ಸವ ಸಮಾರಂಭಕ್ಕೆ ಚಾಲನೆ.





ಚಿತ್ರ ವರದಿ : ದಿನೇಶ್ ಕುಲಾಲ್

ಪೌರಾಣಿಕ ವಾಚಕ ಸಮಿತಿ ಮುಂಬಯಿ ಇದರ ಸುವರ್ಣ ಮಹೋತ್ಸವ ಸಮಾರಂಭವು ಫೆ.28 ಶನಿವಾರ ದಿಂದ ಮಾರ್ಚ್ 1ರ ವರೆಗೆ ಅಂಧೇರಿಯ ವೀರದೇಸಾಯಿ ರಸ್ತೆ ಸಮೀಪದ ಶ್ರೀಮದ್ಭಾರತ ಮಂಡಳಿಯ ಶ್ರೀ ಲಕ್ಷ್ಮಿ ನಾರಾಯಣ ಮಂದಿರದಲ್ಲಿ ನಡೆಯಿತು.

ತಾ.28ರಂದು ಬೆಳಿಗ್ಗೆ 10ಕ್ಕೆ ಕಲಶ ಮಹೂರ್ತದೊಂದಿಗೆ 50ನೇ ವಾರ್ಷಿಕ ಶ್ರೀ ಶನಿ ಮಹಾ ಪೂಜೆ ಪ್ರಾರಂಭವಾಗಿ ಅಪರಾನ್ಹ ಗ್ರಂಥ ಪಾರಾಯಣ,.ಬಳಿಕ ಭಜನೆ ನಂತರ ಮಂಗಳರಾತಿ ಹಾಗೂ ಪ್ರಸಾದ ವಿತರಣೆ ನಡೆಯಿತು.

ಮಾರ್ಚ್ 1ರಂದು ಬೆಳಿಗ್ಗೆ ವಿವಿಧ ಆಮಂತ್ರಿತ ಭಜನಾ ಮಂಡಳಿ ಯವರಿಂದ ಭಜನಾ ಕಾರ್ಯಕ್ರಮಕ್ಕೆ ಶ್ರೀ ಲಕ್ಷ್ಮಿ ನಾರಾಯಣ ಮಂದಿರದ ಪ್ರಧಾನ ಅರ್ಚಕರಾದ ಗುರು ಪ್ರಸಾದ್ ಭಟ್ ದೀಪ ಬೆಳಗಿಸಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮೊಗವೀರ ವ್ಯವಸ್ಥಾಪಕ ಮಂಡಳಿಯ ಉಪಾಧ್ಯಕ್ಷೆ ದಯಾವತಿ ಸುವರ್ಣ, ಶ್ರೀ ಮದ್ಭಾರತ ಮಂಡಳಿಯ ಅಧ್ಯಕ್ಷ ಜಗನ್ನಾಥ ಪುತ್ರನ್, ಶ್ರೀ ಮಹಾಲಕ್ಷ್ಮಿ ಭಜನಾ ಮಂಡಳಿ ಅಂಧೇರಿ ಇದರ ಟ್ರಸ್ಟಿ ಚಂದ್ರಶೇಖರ್ ಆರ್. ಸಾಲ್ಯಾನ್, ವಾಚಕ ಸಮಿತಿಯ ಅಧ್ಯಕ್ಷ ರತ್ನಾಕರ್ ಬಿ. ಬಂಗೇರ ಉಪಸ್ಥಿತಿರಿದ್ದರು.


ಬಳಿಕ ಪೌರಾಣಿಕ ವಾಚಕ ಸಮಿತಿ,ಮಹಾವಿಷ್ಣು ಮುಂಬ್ರಾ ಮಿತ್ರ ಭಜನಾ ಮಂಡಳಿ ಡೊಂಬಿವಲಿ,ಶ್ರೀ ಮದ್ಭಾರತ ಮಂಡಳಿ,ಮುಕಾಂಬಿಕ ಬಾಲ ಭಜನಾ ಮಂಡಳಿ ಘನ್ಸೋಲಿ,ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಫೋರ್ಟ್,ಮಹಿಷಾ ಮರ್ದಿನಿ ಭಜನಾ ಮಂಡಳಿ ಬೋರಿವಲಿ,
ಮಹಾಲಕ್ಷ್ಮಿ ಭಜನಾ ಮಂಡಳಿ ಅಂಧೇರಿ ಇವರಿಂದ ಭಜನೆ ನಡೆಯಿತು.

ಆನಂತರ ಮಹಿಷಾ ಮರ್ದಿನಿ ಭಜನಾ ಮಂಡಳಿ ಬೊರಿವಲಿ, ಮಹಾಲಕ್ಷ್ಮೀ
ಭಜನಾ ಮಂಡಳಿ ಅಂಧೇರಿ, ಶನಿಶ್ವರ ಸೇವಾ ಚಾರಿಟೇಬಲ್ ಟ್ರಸ್ಟ್ ಮೀರಾ ರೋಡ್ ನ ಮಕ್ಕಳ ಭಜನಾ ಮಂಡಳಿ ಅವರಿಂದ ಕುಣಿತ ನಡೆಯಿತು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಲೋಕನಾಥ ಪಿ. ಕಾಂಚನ್,ಕೋಶಾಧಿಕಾರಿ ಸದಾಶಿವ ಎನ್. ಸುವರ್ಣ, ಸಮಿತಿ ಸದಸ್ಯರಾದ ಕಮಲಾಕರ್ ಕೋಟ್ಯಾನ್, ಆನಂದ ಅಮೀನ್, ಸಂಜೀವ ಸಿ. ಬಂಗೇರ, ಹರಿಶ್ಚಂದ್ರ ಸಿ. ಕಾಂಚನ್,
ಕೇಶವ ಎಸ್.ಬಂಗೇರ,ಸುರೇಂದ್ರ ನಾಥ್ ಹಳೆಯಂಗಡಿ, ಚಂದ್ರ ಶೇಕರ ಬಿ. ಬಂಗೇರ ಸಹಕರಿಸಿದರು.



Related posts

ಪದ್ಮನಾಭ ಕಟೀಲುರವರು ಆಯೋಜನೆಯಲ್ಲಿ  ಕೀರ್ತಿಶೇಷ ಕಟೀಲು ಗೋಪಾಲಕೃಷ್ಣ ಆಸ್ರಣ್ಣರ 25ನೇ ಸಂಸ್ಮಯಣೆಯಲಿ ಗಲ್ಫ್ ರಾಷ್ಟ್ರದ ಸಾಧಕರಿಗೆ ಗೌರವಾರ್ಥನೆ

Mumbai News Desk

ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಟ್ರಸ್ಟ್ ಮೀರಾಗಾಂವ್ 33ನೇ ವಾರ್ಷಿಕ ಅಯ್ಯಪ್ಪ ಸ್ವಾಮಿ ಮಹಾಪೂಜೆ, ದೀಪೋತ್ಸವ, ಅನ್ನದಾನ

Mumbai News Desk

ಕುಲಾಲ ಸಂಘ ಮುಂಬೈ ಮೀರಾರೋಡ್-ವಿರಾರ್ ಸ್ಥಳೀಯ ಸಮಿತಿಯಿಂದ ಮಂಗಳೂರು ಕುಲಾಲ ಭವನದ ಉದ್ಘಾಟನಾ ಆಹ್ವಾನ ಪತ್ರಿಕೆ ವಿತರಣೆ.

Mumbai News Desk

ಮುಂಬೈ : ಗೋರೆಗಾಂವ್ ಅಗ್ನಿ ಅವಘಡ: ಒಂದೇ ಕುಟುಂಬದ ಮೂವರು ಸಾವು.

Mumbai News Desk

ಗೋರೆಗಾಂವ್ ಶ್ರೀ ಶಾಂತ ದುರ್ಗಾ ದೇವಿ ದೇವಸ್ಥಾನ, ಬ್ರಹ್ಮಕಲಶೋತ್ಸವ ವೈದಿಕ ವಿಧಿ ವಿಧಾನಗಳಿಗೆ ಚಾಲನೆ 

Mumbai News Desk

ಮಲಾಡ್ ಕನ್ನಡ ಸಂಘ ವಾರ್ಷಿಕ ಶ್ರೀ ಸತ್ಯ ನಾರಾಯಣ ಮಹಾಪೂಜೆ, ಭಜನೆ

Mumbai News Desk