September 6, 2026
Mumbai News Kannada
ಸುದ್ದಿ

ಬೊಯಿಸರ್ ಸೋಮೇಶ್ವರ ಮಂದಿರ :17ನೇ ವರ್ಧಂತ್ಯುತ್ಸವ ಸಂಪನ್ನ  





ಪೂಜೆ, ಪುನಸ್ಕಾರಗಳು ನಮ್ಮೊಳಗಿನ ಆತ್ಮಲಿಂಗಕ್ಕೆ ಸಲ್ಲುವ ಸೇವೆ – ಪ್ರವೀಣ್ ಭಟ್

  ಪಾಲ್ಘರ್- ಬೊಯಿಸರ್ ಪರಿಸರದಲ್ಲಿ 2008ರಲ್ಲಿ ಮುಂಬೈಯ ಖ್ಯಾತ ಜ್ಯೋತಿಷಿ, ಪುರೋಹಿತರಾದ ಎಂ. ಜೆ. ಪ್ರವೀಣ್ ಭಟ್ ಅವರ ಮಾರ್ಗದರ್ಶನದಲ್ಲಿ,   ಧಾರ್ಮಿಕ ಮುಂದಾಳು  ವಿಜಯ್ ಶೆಟ್ಟಿಯವರ ನೇತೃತ್ವದಲ್ಲಿ ಸ್ಥಾಪನೆಯಾದ ಸೋಮೇಶ್ವರ ಮಂದಿರದ 17ನೇ ವರ್ದಂತಿ ಮಹೋತ್ಸವ ಮಾರ್ಚ್ 1ರಂದು ಭಾನುವಾರ ಅಪಾರ ಸಂಖ್ಯೆಯ ಭಕ್ತರ ಕೂಡುವಿಕೆಯಿಂದ ವಿಜೃಂಭಣೆಯಿಂದ ಜರಗಿತು.

ಅಂದು ಬೆಳಗ್ಗೆ 06.00 ರಿಂದ ಸಂಜೆ 06.30 : ತೋರಣ ಮುಹೂರ್ತ ನಡೆದು ಬೆಳಗ್ಗೆ 06.30 ರಿಂದ 07.30 : ಗಣ ಹೋಮ, ಗಣೇಶ ಪೂಜೆ, 07.30  ರಿಂದ 09.00 AM : ನವಕಲಶಾಭಿಷೇಕ, ನಾಗಪೂಜೆ ನಡೆಯಿತು.
ನಂತರ ಬೆಳಗ್ಗೆ 09.00 ರಿಂದ 10.30 : ಶ್ರೀ ಸತ್ಯನಾರಾಯಣ ಪೂಜೆ,10.30  ರಿಂದ 12.00  ಭಜನೆಯಾದ ಬಳಿಕ ಶ್ರೀ ದೇವರಿಗೆ ಬೆಳಗಲಾಯಿತು.

ಧಾರ್ಮಿಕ ಪೂಜಾ ಕಾರ್ಯಗಳನ್ನು ನೆರವೇರಿಸಿದ ಮುಂಬೈ ನಗರದ ಪ್ರಸಿದ್ಧ ಪುರೋಹಿತರಾಗಿರುವ ಎಂ ಜೆ ಪ್ರವೀಣ್ ಭಟ್ ಅವರು ಪ್ರಾಥನೆಗೈಯುತ್ತಾ “​ಈ ಪವಿತ್ರ ಕ್ಷೇತ್ರದಲ್ಲಿ, ಲಯಕರ್ತನಾದ ಆ ಪರಮೇಶ್ವರನ ವಾರ್ಷಿಕ ಮಹಾಪೂಜೆಯು ಅತ್ಯಂತ ಶ್ರದ್ಧಾಭಕ್ತಿಗಳಿಂದ ನೆರವೇರಿದೆ. ಜಗತ್ತಿನ ಕಣಕಣದಲ್ಲೂ ಶಿವನಿದ್ದಾನೆ. ಶಿವ ಎಂದರೆ ಮಂಗಳ ಎಂದರ್ಥ. ಇಂದು ನಾವೆಲ್ಲರೂ ಸೇರಿ ಮಾಡಿದ ಈ ಅಭಿಷೇಕ, ಅರ್ಚನೆಗಳು ಕೇವಲ ದೇವಸ್ಥಾನದ ವಿಗ್ರಹಕ್ಕಲ್ಲ, ಅದು ನಮ್ಮೊಳಗಿನ ಆತ್ಮಲಿಂಗಕ್ಕೆ ಸಲ್ಲುವ ಸೇವೆಯಾಗಿದೆ.​ಸಂಸಾರವೆಂಬ ಈ ಸಾಗರದಲ್ಲಿ ನಮಗೆ ಶಾಂತಿ ಮತ್ತು ಸಮಾಧಾನ ಸಿಗುವುದು ಶಿವನ ಪಾದಕಮಲಗಳಲ್ಲಿ ಮಾತ್ರ. ಭೋಲೆನಾಥನು ಅಲ್ಪ ಸಂತೋಷಿ; ಭಕ್ತರು ಅರ್ಪಿಸುವ ಒಂದು ಬಿಲ್ವಪತ್ರೆ ಅಥವಾ ಒಂದು ಬೊಗಸೆ ನೀರಿಗೂ ಆತ ಪ್ರಸನ್ನನಾಗುತ್ತಾನೆ. ಅಂತಹ ಕರುಣಾಮಯಿ ಈಶ್ವರನು ಈ ಊರಿನ ಸಮಸ್ತ ಜನರಿಗೂ ಆಯುಷ್ಯ, ಆರೋಗ್ಯ ಮತ್ತು ಐಶ್ವರ್ಯವನ್ನು ಕರುಣಿಸಲಿ. ನಿಮ್ಮ ಸಂಸಾರದಲ್ಲಿ ಸುಖ-ಶಾಂತಿ ನೆಲೆಸಲಿ, ಕಷ್ಟ ಕಾರ್ಪಣ್ಯಗಳು ದೂರವಾಗಲಿ ಎಂದು ಆ ಶಿವನಲ್ಲಿ ಪ್ರಾರ್ಥಿಸುತ್ತೇನೆ” ಎಂದರು.

2008ರಲ್ಲಿ ಮಂದಿರದ ಪ್ರತಿಷ್ಟಾಪನೆ ನೆರವೇರಿಸಿದ ಪ್ರವೀಣ್ ಭಟ್

ಸಾವಿರ ಸಂಖ್ಯೆಯಲ್ಲಿ ಪರಿಸರದ ಭಕ್ತಾದಿಗಳು ವಾರ್ಷಿಕ ವರ್ದಂತಿಯಲ್ಲಿ ಪಾಲ್ಗೊಂಡು ಈ ದೇವರ ಪ್ರಸಾದ, ಅನ್ನ ಪ್ರಸಾದ ಸ್ವೀಕರಿಸಿದರು.

ಶ್ರೀ ಸೋಮೇಶ್ವರ ದೇವಸ್ಥಾನ ದ ವಿಜಯ್ ಶೆಟ್ಟಿ, ಅರ್ಚಕರಾದ ಪ್ರಮೋದ್ ಅಗ್ನಿಹೋತ್ರಿ ಮತ್ತು ಸದಸ್ಯರು ಮಹಾಪೂಜೆ ಸಾಂಗವಾಗಿ ಜರಾಗುವಲ್ಲಿ ಶ್ರಮಿಸಿದರು.



Related posts

ಉಡುಪಿ : ಉದ್ಯಮಿ, ರೌಡಿ ಶೀಟರ್ ಸೈಪುದ್ದೀನ್ ಭೀಕರ ಹತ್ಯೆ

Mumbai News Desk

ಪಡುಬಿದ್ರೆ-ಪಣಿಯೂರು ರೈಲ್ವೆ ನಿಲ್ದಾಣದಲ್ಲಿ ಮಂಗಳೂರು-ಕುರ್ಲಾ(ಬಾಂಬೆ) ಮತ್ತ್ವಗಂಧ ರೈಲ್ವೆ ನಿಲುಗಡೆಗೆ ಅವಕಾಶ ಕಲ್ಪಿಸುವಂತೆ ರಾಜ್ಯ ರೈಲ್ವೆ ಖಾತೆ ಸಚಿವ ವಿ ಸೋಮಣ್ಣಗೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮನವಿ

Mumbai News Desk

ರೇಣುಕಾ ಸ್ವಾಮಿ ಪ್ರಕರಣ – ದರ್ಶನ್ ಸೇರಿ ಏಳು ಆರೋಪಿಗಳಿಗೆ ಜಾಮೀನು

Mumbai News Desk

ಇನ್ನಂಜೆ ಹಾಲು ಉತ್ಪಾದಕರ ಸಂಘ ದ ನೂತನ ಅಧ್ಯಕ್ಷರಾಗಿ ಶಿವರಾಮ್ ಜೆ ಶೆಟ್ಟಿ ಮಂಡೇಡಿ ಆಯ್ಕೆ,

Mumbai News Desk

ಬೆಂಗಳೂರು – ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಸೇವೆಗೆ ಅಧಿಕೃತ ಚಾಲನೆ

Mumbai News Desk

ಅಂತಾರಾಷ್ಟ್ರೀಯ ಮಾನವಾಧಿಕಾರ ಫೆಡರೇಶನ್ ಮಹಾರಾಷ್ಟ್ರ : ಪಾಲ್ಘರ್ ಜಿಲ್ಲಾ ಉಪಾಧ್ಯಕ್ಷರಾಗಿ ಪತ್ರಕರ್ತ ಯೋಗೇಶ್ ಪುತ್ರನ್ ನಿಯುಕ್ತಿ.

Mumbai News Desk