July 23, 2026
Mumbai News Kannada
ಮುಂಬಯಿ

ಮುಂಬೈ : ಮೊಗವೀರ ಕೋ-ಆಪರೇಟಿವ್ ಬ್ಯಾಂಕ್ ಎಂಪ್ಲಾಯೀಸ್ ಸ್ಪೋರ್ಟ್ಸ್ ಕ್ಲಬ್ ಮತ್ತು ಪೂಜಾ ಸಮಿತಿ: 44ನೇ ವಾರ್ಷಿಕ ಶ್ರೀ ಸತ್ಯನಾರಾಯಣ ಪೂಜಾ ಮಹೋತ್ಸವ ಸಂಪನ್ನ







ಮೊಗವೀರ ಕೋ-ಆಪರೇಟಿವ್ ಬ್ಯಾಂಕ್ ಎಂಪ್ಲಾಯೀಸ್ ಸ್ಪೋರ್ಟ್ಸ್ ಕ್ಲಬ್ ಹಾಗೂ ಪೂಜಾ ಸಮಿತಿಯ ವತಿಯಿಂದ ಮಾರ್ಚ್ 28 ರಂದು 44ನೇ ವಾರ್ಷಿಕ ಶ್ರೀ ಸತ್ಯನಾರಾಯಣ ಪೂಜಾ ಮಹೋತ್ಸವವನ್ನು ಅತ್ಯಂತ ಅಂಧೇರಿ ಪೂರ್ವ ಸಾಕಿನಾಕ ಸಾಕಿ ವಿಹಾರ್ ರೋಡ್ ನಲ್ಲಿರುವ ಪ್ರಣೀಕ್ ಚೇಂಬರ್ ನ ಜಿ 18, 19ರ ಮೊಗವೀರ ಬ್ಯಾಂಕ್ ಶಾಖೆಯಲ್ಲಿ ಶ್ರದ್ಧಾ ಭಕ್ತಿಯಿಂದ ವಿಧಿ-ವಿಧಾನಗಳೊಂದಿಗೆ ಸಂಪನ್ನಗೊಂಡಿತು.
ಅಂದು ಬೆಳಿಗ್ಗೆ ಪುರೋಹಿತರಾದ ರಘುಪತಿ ಭಟ್ ಅವರ ಪೌರೋಹಿತ್ಯದಲ್ಲಿ ಶ್ರೀ ಸತ್ಯನಾರಾಯಣ ಪೂಜೆಯು ಸಮಿತಿಯ ಸದಸ್ಯೆ ದೀಕ್ಷಾ ಜಯೇಶ್ ಕೋಟ್ಯಾನ್ ಅವರ ಯಜಮಾನಿಕೆಯಲ್ಲಿ ಭಕ್ತಿಪೂರ್ವಕವಾಗಿ ಜರುಗಿತು. ಪೂಜಾ ವಿಧಿಯಾದ ಬಳಿಕ ಬ್ಯಾಂಕ್ ನ ಸಿಬ್ಬಂದಿ ವರ್ಗ ಹಾಗೂ ಮಾಜಿ ಸಿಬ್ಬಂದಿಗಳು ಭಜನಾ ಕಾರ್ಯಕ್ರಮವನ್ನು ನೆರವೇರಿಸಿದರು.


ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕ ಭಾಸ್ಕರ್ ಬಿ ಸಾಲ್ಯಾನ್, ಹರೀಶ್ಚಂದ್ರ ಕಾಂಚನ್, ಸಿ ಇ ಓ ಸ್ಮಿತಾ ಕಾಂಚನ್, ಎ ಜಿ ಎಂ ಯದುವೀರ್ ಪುತ್ರನ್, ಬ್ಯಾಂಕ್ ನ ಕಾರ್ಮಿಕ ನಾಯಕ ಮುಖೇಶ್ ಮೆಂಡನ್, ಅಧ್ಯಕ್ಷ ದಿನೇಶ್ ಕೋಟ್ಯಾನ್, ಕಾರ್ಯದರ್ಶಿ ಪ್ರಮೋದ್ ಪುತ್ರನ್, ಕೋಶಾಧಿಕಾರಿ ಅನಿಕೇತ್ ಕರ್ಕೇರ ಸೇರಿದಂತೆ ಸಮಿತಿಯ ಸದಸ್ಯರು, ಮಾಜಿ ಸಿಬ್ಬಂದಿಗಳು ಉಪಸ್ಥಿತರಿದ್ದರು. ಪೂಜಾ ಕಾರ್ಯಕ್ಕೆ ತನು -ಮನ -ಧನದ ಸಹಕಾರವನವಿತ್ತು ಸಹಕರಿಸಿದ ಬ್ಯಾಂಕಿನ ನಿರ್ದೇಶಕ ಮಂಡಳಿಯವರಿಗೂ, ಪ್ರಬಂಧಕರಿಗೂ ಮಾಜಿ ಸಿಬ್ಬಂದಿ ವರ್ಗದ ಸದಸ್ಯರಿಗೂ, ಶ್ರೀ ಮದ್ಭಾರತ ಮಂಡಳಿ, ಅಂಧೇರಿ ಶಾಖೆಯ ಪ್ರಬಂಧಕ ಸುಮನ್ ಕರ್ಕೇರ ಎಲ್ಲಾ ಭಕ್ತಾಭಿಮಾನಿಗಳಿಗೆ ಕಾರ್ಯದರ್ಶಿ ಪ್ರಮೋದ್ ಪುತ್ರನ್ ಧನ್ಯವಾದ ಸಮರ್ಪಿಸಿದರು. ಅಂತಿಮವಾಗಿ ವಾಸು ಉಪ್ಪುರೂ ಮಹಾಮಂಗಳಾರತಿ ಗೈದರು. ಹರೀಶ್ ಪುತ್ರನ್ ಪ್ರಾಥಿಸಿದರು. ಕೊನೆಗೆ ತೀರ್ಥ, ಪ್ರಸಾದ ಹಾಗೂ ಮಹಾ ಪ್ರಸಾದ ವಿನಿಯೋಗದೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು.



Related posts

ಧರ್ಮಪಾಲ ದೇವಾಡಿಗರಿಗೆ  ದೇವಾಡಿಗ ಸಂಘದ ಗೌರವ. ಸಮಾಜದ ಅಭಿವೃದ್ಧಿ ಕಾರ್ಯಕ್ಕೆ ಧರ್ಮಪಾಲರ ಕೊಡುಗೆ ಅಪಾರ: ರವಿ ದೇವಾಡಿಗ

Mumbai News Desk

ಫೋರ್ಟ್‌ನಲ್ಲಿ ವೆಸ್ಟರ್ನ್ ಇಂಡಿಯಾ ಶ್ರೀ ಶನಿ ಮಹಾತ್ಮ ಸೇವಾ ಸಮಿತಿಯ 81ನೇ ವಾರ್ಷಿಕ ಮಹಾಪೂಜೆ ಸಂಪನ್ನ

Mumbai News Desk

ಛಾಯಕಿರಣ ಮಾಸ ಪತ್ರಿಕೆಯ ದಶಮಾನೋತ್ಸವ ಅಚರಣೆ, ಗೌರವಾರ್ಪಣೆ

Mumbai News Desk

ಮುಂಬಯಿ : ಕಲ್ಯಾಣ್ ನಲ್ಲಿ ಕಟ್ಟಡದ ಸ್ಲಾಬ್ ಕುಸಿತ ಮಗು ಸೇರಿದಂತೆ ಆರು ಜನರ ಸಾವು.

Mumbai News Desk

ಮಹಾರಾಷ್ಟ್ರ : ಎಸ್ ಎಸ್ ಸಿ ಪರೀಕ್ಷೆಯಲ್ಲಿ ಅಬಿನಿ ಬಾಬು ಪೂಜಾರಿ ಗೆ ಶೇ.94.40 ಅಂಕ.

Mumbai News Desk

ಸಾಯಿಬಾಬಾ ಪೂಜಾ ಸಮಿತಿ, ಕಾಲಘೋಡ (ರಿ.): ಹೊಲಿಗೆ ತರಬೇತಿ ಪ್ರಮಾಣಪತ್ರ ವಿತರಣೆ ಹಾಗೂ 31ನೇ ವಾರ್ಷಿಕ ಮಹಾಸಭೆ

Mumbai News Desk