
ಬಜೆ ಮೊಗವೀರ ಸುವರ್ಣ ಮೂಲಸ್ಥಾನ, ಬಜೆ, ಕುಕ್ಕೆ ಹಳ್ಳಿ, ಉಡುಪಿ ಇದರ ಮುಂಬಾಯಿ ಶಾಖೆಯ ಶತಮಾನೋತ್ಸವ ಆಚರಣೆ ನಿಮಿತ್ತ ಮನವಿ ಪತ್ರವನ್ನು ಜೂ 7 ರಂದು ರವಿವಾರ ಅಂಧೇರಿಯ ಮೊಗವೀರ ಭವನದಲ್ಲಿ ಶತಮಾನೋತ್ಸವ ಸಮಿತಿಯ ಕಾರ್ಯಧ್ಯಕ್ಷ ಮಾನಂಪಾಡಿ ಹರೀಶ್ ಕೋಟ್ಯಾನ್ ಅವರು ಬಿಡು ಗಡೆ ಮಾಡಿದರು. ಈ ಸಂದರ್ಭದಲ್ಲಿ ಶಾಖೆಯ ಅಧ್ಯಕ್ಷರಾದ ಗೋವರ್ಧನ್ ಸುವರ್ಣ ಅವರು ನವಂಬರ್ 15ರಂದು ನಡೆಯಲಿರುವ ಕಾರ್ಯಕ್ರಮದ ಯಶಸ್ವಿಗೆ ಸರ್ವ ಸುವರ್ಣ ಬಂಧುಗಳು ಸಹಕರಿಸಬೇಕೆಂದು ವಿನಂತಿಸಿದರು.
ಪ್ರಧಾನ ಕಾರ್ಯದರ್ಶಿ ಅಶೋಕ ಸುವರ್ಣ ಅವರು ಕಾರ್ಯಕ್ರಮದ ವಿವರವನ್ನು ನೀಡಿದರು.
ಶತಮಾನೋತ್ಸವ ಸಮಿತಿಯ ಉಪ ಕಾರ್ಯಧ್ಯಕ್ಷ ಓಂದಾಸ್ ಕಣ್ಣಂಗಾರ್, ದೊಡ್ಡ ಕೊಪ್ಪಲ ಚಂದ್ರಹಾಸ್ ಸಾಲ್ಯಾನ್, ಪೊಲಿಪು ಉಮೇಶ್ ಮೆಂಡನ್, ಕೋಶಾಧಿಕಾರಿ ಧನರಾಜ್ ಕುಂದರ್, ಕಾರ್ಯಕಾರಿ ಸಮಿತಿಯ ಉಪಾಧ್ಯಕ್ಷ ಗಿರಿಧರ್ ಸುವರ್ಣ, ಶ್ರೀಮತಿ ಇಂದಿರಾ ಮೆಂಡನ್, ಜತೆ ಕೋಶಾಧಿಕಾರಿ ವಾಮನ್ ಸುವರ್ಣ, ಜತೆ ಕಾರ್ಯದರ್ಶಿ ಸದಾಶಿವ ಸುವರ್ಣ, ಕಾರ್ಯಕರ್ತರಾದ ನರೇಶ್ ಕರ್ಕೇರ, ಭೂಪತಿ ಕೋಟ್ಯಾನ್, ಮನೋಜ್ ಕರ್ಕೇರ, ಹೇಮಾ ಪುತ್ರನ್, ಸುಮತಿ ಕುಂದರ್, ಸುರೇಖಾ ಕೋಟ್ಯಾನ್, ಕುಸುಮಾ ರಾಜ್ ಸುವರ್ಣ,ಸತೀಶ್ ಕುಂದರ್, ಸೋಮನಾಥ್ ಸುವರ್ಣ, ಸರೋಜಿನಿ ಸುವರ್ಣ,ದಾಮೋದರ ಕುಂದರ್,ಸತೀಶ್ ಕುಂದರ್, ನಾರಾಯಣ ಪುತ್ರನ್ ಉಪಸ್ಥಿತರಿದ್ದರು.




