28.5 C
Mumbai
August 6, 2026
Mumbai News Kannada
ಮುಂಬಯಿ

ಚಿಣ್ಣರ ಬಿಂಬ ಸಾಕಿನಾಕ ಶಿಬಿರ : ಕನ್ನಡ ತರಗತಿ ಪ್ರಾರಂಭೋತ್ಸವ ಮತ್ತು ವನ ಮಹೋತ್ಸವ ಕಾರ್ಯಕ್ರಮ





ಸಾಕಿನಾಕ ಚಿಣ್ಣರಬಿಂಬದ 2026- 27ನೇ ಸಾಲಿನ ಕನ್ನಡ ತರಗತಿಯನ್ನು ಜೂನ್ 14ರಂದು ಆರಂಭಿಸಲಾಯಿತು. ಕನ್ನಡ ತರಗತಿಯ ಉದ್ಘಾಟನೆಗೆ ಸ್ಥಳೀಯ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಮಹಿಳಾ ಮಂಡಳಿಯ ಅಧ್ಯಕ್ಷೆಯಾಗಿರುವ ಹೇಮಾ ಕೋಟ್ಯಾನ್ ರವರು ಆಗಮಿಸಿದ್ದರು ಜೊತೆಗೆ ಕೇಂದ್ರೀಯ ಸಮಿತಿಯ ಸದಸ್ಯರಾದ ರಮೇಶ್ ರೈ , ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಪೂರ್ಣಿಮಾ ಶೆಟ್ಟಿ, ಚಿಣ್ಣರಬಿಂಬದ ಮಾಜಿ ಶಿಬಿರ ಮುಖ್ಯಸ್ಥ ರಾಜವರ್ಮಾ ಜೈನ್, ಎಸ್ ಎಂ ಶೆಟ್ಟಿ ಚಿಣ್ಣರ ಬಿಂಬ ಶಿಬಿರದ ಕನ್ನಡ ಶಿಕ್ಷಕಿ ಅನಿತಾ ಶೆಟ್ಟಿ, ವಲಯ ಮುಖ್ಯಸ್ಥೆ ಉಷಾ ಶೇರುಗಾರ್, ಶಿಬಿರ ಮುಖ್ಯಸ್ಥೆ ಶೋಭಾ ಅಮೀನ್, ಸಾಂಸ್ಕೃತಿಕ ಮುಖ್ಯಸ್ಥೆ ಲತಾ ಶೆಟ್ಟಿ, ಕನ್ನಡ ಶಿಕ್ಷಕಿ ಹರಿಣಿ ಶೆಟ್ಟಿ, ಭಜನೆ ಶಿಕ್ಷಕಿ ಶಶಿ ಶೆಟ್ಟಿ, ಮಕ್ಕಳ ಪಾಲಕರು ಹಾಗೂ ಮುದ್ದು ಚಿಣ್ಣರ ಸಮ್ಮುಖದಲ್ಲಿ ಹೇಮಾ ಕೋಟ್ಯಾನ್ ರವರು ದೇವರಿಗೆ ದೀಪ ಬೆಳಗಿ ಮಕ್ಕಳು ಒಟ್ಟಾಗಿ ಭಜನೆ ಹಾಡುವುದರ ಮೂಲಕ ಆರಂಭಿಸಲಾಯಿತು.

ಹೇಮಾ ಕೋಟ್ಯಾನ್ ರವರು ಮಾತನಾಡುತ್ತ
ಸಂಸ್ಥೆಯ ಕಾರ್ಯವೈಖರಿಯನ್ನು ನಾವು ನೋಡುತ್ತ ಬಂದಿದ್ದೇವೆ. ಈ ಸಂಸ್ಥೆಯು ಇನ್ನಷ್ಟೂ ಚೆನ್ನಾಗಿ ಬೆಳೆಯಲಿ. ನಮ್ಮ ಸಹಕಾರ ಸದಾ ಇದೆ ಎಂದರು.

ಬಳಿಕ ಡಾ. ಪೂರ್ಣಿಮ ಶೆಟ್ಟಿ ಚಿಣ್ಣರು ಮತ್ತು ಪಾಲಕರನ್ನು ಉದ್ದೇಶಿಸಿ ಕೆಲವು ಹಿತನುಡಿಗಳನ್ನು ಆಡಿದರು. ಚಿಣ್ಣರಬಿಂಬ ಒಂದು ಕುಟುಂಬ ಇಲ್ಲಿ ಎಲ್ಲಾರೂ ಒಂದಾಗಿ ಜೊತೆಯಾಗಿ ಕೆಲಸ ಮಾಡಬೇಕು ಎಂಬ ಹಿತನುಡಿಗಳು ಎಲ್ಲರಿಗೂ ಮನ ಮುಟ್ಟುವಂತೆ ತಿಳಿಸಿದರು.

ಇಂದು ಹೊಸದಾಗಿ ಸಮಿತಿಯನ್ನು ರಚಿಸಲಾಯಿತು.
ಎಲ್ಲಾ ಪಾಲಕರನ್ನು ಸಮಿತಿಯಲ್ಲಿ ಸೇರಿಸಿ ಎಲ್ಲರಿಗೂ ಸಂಸ್ಥೆಯ ಬಗೆಗೆ ಅಭಿಮಾನದಿಂದ ತೊಡಗಿಸಿಕೊಳ್ಳುವಂತೆ ತಿಳಿಸಲಾಯಿತು. ಯಾವುದೇ ಮನಸ್ತಾಪಗಳು ಇದ್ದರೂ ಕೂಡ ಅದನ್ನೆಲ್ಲ ಮರೆತು ಒಂದಾಗಿ ಸೇರಿ ಎಲ್ಲರೂ ಒಂದೇ ಕುಟುಂಬವೆಂದು ಸೇರಿ ಕೆಲಸ ಮಾಡಬೇಕು ಎಂಬ ಮಾತನ್ನು ಒತ್ತಿ ಹೇಳಿದರು.

ತರಗತಿಯ ಉದ್ಘಾಟನಾ ಸಮಾರಂಭದ ಜೊತೆ ಜೊತೆಗೆ ಇಂದು ಸಾಕಿನಾಕ ಚಿಣ್ಣರಬಿಂಬ ಶಿಬಿರದಲ್ಲಿ ವನ ಮಹೋತ್ಸವ ಕಾರ್ಯಕ್ರಮವನ್ನು ನಡೆಸಲಾಯಿತು.

ಗಿಡಗಳನ್ನು ಎಲ್ಲರೂ ಸೇರಿ ನೆಡುವ ಮೂಲಕ ಮಕ್ಕಳಿಗೆ ವನಮಹೊತ್ಸವದ ಬಗ್ಗೆ ಸರಿಯಾದ ಮಾಹಿತಿಯನ್ನು ತಿಳಿಸಲಾಯಿತು.
ಡಾ. ಪೂರ್ಣಿಮಾ ಶೆಟ್ಟಿ ಚಿಣ್ಣರ ಬಿಂಬ ಯಾವುದೇ ಭೇದ ಭಾವವಿಲ್ಲದ ನಿಸ್ವಾರ್ಥ ಸಂಸ್ಥೆಯಾಗಿದ್ದು, ಇದರ ಪ್ರಯೋಜನವನ್ನು ಎಲ್ಲರೂ ಪಡೆಕೊಳ್ಳಬೇಕು. ಆ ಮೂಲಕ ಇಂತಹ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಪರಿಸರದ ರಕ್ಷಣೆ ಸಾಧ್ಯ ಎಂಬುದಾಗಿ ಎಲ್ಲರಿಗೂ ಮನಮುಟ್ಟುವಂತೆ ತಿಳಿಸಿದರು.

ವಲಯ ಮುಖ್ಯಸ್ಥೆ ಉಷಾ ಷೇರುಗಾರ್ ರವರು ವಂದನಾರ್ಪಣೆ ಮಾಡಿದರು.

ಮಕ್ಕಳಿಗೆ ಸಿಹಿ ತಿಂಡಿ ನೀಡಿ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.



Related posts

ಎಲ್ಲರ ಬದುಕಲ್ಲಿ ಧರ್ಮ ಕಾರ್ಯಗಳು ನಡೆಯಲಿ: ಸಾಣೂರು ಸಾಂತಿಂಜ ಜನಾರ್ದನ ಭಟ್‌

Mumbai News Desk

ಬಂಟರ ಸಂಘ, ಮುಂಬಯಿ: ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿ: ಮಾತಾ ಕಿ ಚೌಕಿ ಭಕ್ತಿ ಪ್ರಧಾನ ಕಾರ್ಯಕ್ರಮ

Mumbai News Desk

ನವಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಉದ್ಘಾಟನೆ: ಐತಿಹಾಸಿಕ ಕ್ಷಣದಲ್ಲಿ ಪಾಲ್ಗೊಂಡಿದ್ದ ನ್ಯೂ ಪನ್ವೇಲ್‌ನ ಮಾಜಿ ಕಾರ್ಪೊರೇಟರ್ ಸಂತೋಷ್ ಜಿ ಶೆಟ್ಟಿ

Mumbai News Desk

ಭಜನೆಯಿಂದ ಭಾವನಾತ್ಮಕ ಸಮಸ್ಯೆಗೆ ಪರಿಹಾರ: ಶ್ರೀ ನಾರಾಯಣಗುರು ಭಜನ ಮಂಡಳಿ ಮಲಾಡ್ ವಲಯಕ್ಕೆ ಸೂರ್ಯಕಾಂತ್ ಜೆ. ಸುವರ್ಣ ಚಾಲನೆ

Mumbai News Desk

ಮುಂಬೈ : ಬ್ರೇಕ್ ಫೇಲ್ ಆಗಿ ಎದುರಿದ್ದ ವಾಹನಗಳು, ಜನರ ಮೇಲೆ ಹರಿದ ಬಸ್, 7 ಸಾವು, 49 ಮಂದಿಗೆ ಗಂಭೀರ ಗಾಯ

Mumbai News Desk

ಮುಂಬಯಿ: ಮಾಟುಂಗದ ಮೈಸೂರು ಅಸೋಸಿಯೇಷನ್‌ನಲ್ಲಿ ‘ಕನ್ನಡ ಕಂಪು ಸರಣಿ-10’ ಸಂಭ್ರಮ; ಸತೀಶ್ ಎನ್. ಬಂಗೇರ ಕುರಿತ ಕೃತಿ ಲೋಕಾರ್ಪಣೆ

Mumbai News Desk