June 23, 2026
Mumbai News Kannada
ಮುಂಬಯಿ

ಮುಂಬಯಿ: ಮಾಟುಂಗದ ಮೈಸೂರು ಅಸೋಸಿಯೇಷನ್‌ನಲ್ಲಿ ‘ಕನ್ನಡ ಕಂಪು ಸರಣಿ-10’ ಸಂಭ್ರಮ; ಸತೀಶ್ ಎನ್. ಬಂಗೇರ ಕುರಿತ ಕೃತಿ ಲೋಕಾರ್ಪಣೆ





ಸಾಹಿತ್ಯ ಮತ್ತು ಸಂಸ್ಕೃತಿಯ ತವರೂರಾದ ಮಾಟುಂಗದ ಮೈಸೂರು ಅಸೋಸಿಯೇಷನ್ ಸಭಾಂಗಣದಲ್ಲಿ ಇತ್ತೀಚೆಗೆ ಕಥಾಬಿಂದು ಪ್ರಕಾಶನದ ‘ಕನ್ನಡ ಕಂಪು ಸರಣಿ-10’ ಕಾರ್ಯಕ್ರಮವು ಅತ್ಯಂತ ಸಡಗರದಿಂದ ಜರುಗಿತು. ಈ ಶುಭ ಸಂದರ್ಭದಲ್ಲಿ ಲೇಖಕ, ಸಾಹಿತಿ, ಡಾ. ಕೊಳ್ಚಪ್ಪೆ ಗೋವಿಂದ ಭಟ್ ಅವರು ರಚಿಸಿದ ಹಾಗೂ ಬ್ಯಾಂಕೋ ಪಬ್ಲಿಕೇಶನ್ ಮೂಡಬಿದಿರೆ ಪ್ರಕಾಶಿಸಿದ ‘ಸಾಟಿಯಿಲ್ಲದ ಸಾಧಕ ಡಾ. ಸತೀಶ್ ಎನ್. ಬಂಗೇರ’ ಎಂಬ ವ್ಯಕ್ತಿಚಿತ್ರಣದ ಕೃತಿಯನ್ನು 2025ರ ಆರ್ಯಭಟ ಪ್ರಶಸ್ತಿ ವಿಜೇತರಾದ ಶಂಭು ಸನಿಲ್ ಅವರು ಲೋಕಾರ್ಪಣೆಗೊಳಿಸಿದರು.

ಈ ಕೃತಿಯ ಕಥಾನಾಯಕರಾದ ಡಾ. ಸತೀಶ್ ಎನ್. ಬಂಗೇರ ಅವರು ಮೂಲತಃ ಮೂಡಬಿದಿರೆಯವರಾಗಿದ್ದು, ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಮುಂಬಯಿಯ ನಿವೃತ್ತ ಪ್ರಬಂಧಕರಾಗಿದ್ದಾರೆ. ವೃತ್ತಿಯ ಜೊತೆಗೆ ಪ್ರವೃತ್ತಿಯಾಗಿ ಚಿತ್ರನಿರ್ಮಾಣ, ರಂಗಭೂಮಿ, ಸಾಹಿತ್ಯ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸಿರುವ ಅವರ ಜೀವನ ಹಾದಿಯನ್ನು ಈ ಪುಸ್ತಕವು ಮನೋಜ್ಞವಾಗಿ ಕಟ್ಟಿಕೊಟ್ಟಿದೆ. ವೇದಿಕೆಯಲ್ಲಿ ಮುಂಬಯಿ ಬಂಟ್ಸ್ ಸಂಘದ ಅಧ್ಯಕ್ಷ ಪ್ರವೀಣ್ ಬಿ. ಶೆಟ್ಟಿ, ಬಾಂಬೆ ಬಂಟ್ಸ್‌ನ ನಿಕಟಪೂರ್ವ ಅಧ್ಯಕ್ಷ ಸಿಎ ಸುರೇಂದ್ರ ಕೆ. ಶೆಟ್ಟಿ, ಕನ್ನಡ ಕಲಾಕೇಂದ್ರದ ಅಧ್ಯಕ್ಷ ಮಧುಸೂಧನ ಟಿ.ಆರ್., ದಿ. ಚಂದ್ರಶೇಖರ ರಾವ್ ಮೆಮೋರಿಯಲ್ ಟ್ರಸ್ಟ್ ನ ಮುಖ್ಯಸ್ತೆ ಶ್ರೀದೇವಿ ಸಿ. ರಾವ್, ಕವಯಿತ್ರಿ ವಾಣಿ ಶೆಟ್ಟಿ ಮೂಡಬಿದಿರೆ ಹಾಗೂ ಕಥಾಬಿಂದು ಪ್ರಕಾಶನದ ಟಿ.ವಿ. ಪ್ರದೀಪ್ ಕುಮಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಕಳೆ ನೀಡಿದರು.ಕನ್ನಡ ನಾಡು-ನುಡಿಯ ಸೇವೆಯಲ್ಲಿ ನಿರತವಾಗಿರುವ ಮಂಗಳೂರಿನ ಕಥಾಬಿಂದು ಪ್ರಕಾಶನವು ಮುಂಬಯಿಯ ನೆಲದಲ್ಲೂ ಕನ್ನಡದ ಕಂಪನ್ನು ಪಸರಿಸುತ್ತಿದ್ದು, ಅಂದಿನ ಸಮಾರಂಭದಲ್ಲಿ ಗೀತಾ ಕೊಂಕೋಡಿ ಅವರ ‘ಭಾವವೀಚಿ” ‘, ವಿ . ಲಕ್ಷ್ಮಣ ಮೂರ್ತಿ ಅವರ ‘ಮಕರಂದ’, ಗಾಯತ್ರಿ ನಾಗೇಶ್ ಅವರ ‘ಗೊಂಚಲು’ ಹಾಗೂ ಶಂಕರಪುರ ನಿಮಾಲೋಬೋ ಅವರ ‘ಮನಸ್ಸೇ ಜೋಪಾನ’ ಎಂಬ ನಾಲ್ಕು ನೂತನ ಕೃತಿಗಳೂ ಸಹ ಅನಾವರಣಗೊಂಡವು.

ಇದೇ ವೇದಿಕೆಯಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ಡಾ. ಜೋಸೆಫ್ ಲೋಬೋ, ರಕ್ತದಾನಿ ಮಂಜು, ಸತೀಶ್ ಆಚಾರ್ಯ ಹಾಗೂ ಉದಯೋನ್ಮುಖ ಪ್ರತಿಭೆಗಳಾದ ಕುಮಾರಿ ರಿಶಾಲ್ ಮೆಲ್ಬಾ ಕ್ಯಾಸ್ಟ್ರಾ ಮತ್ತು ಕುಮಾರ್ ಆಯುಷ್ ರೇಗನ್ ಮನೇಜಸ್ ಅವರಿಗೆ ‘ಸಾಧನಶ್ರೀ’ ರಾಷ್ಟ್ರಪ್ರಶಸ್ತಿ ನೀಡಿ ಗೌರವಿಸಲಾಯಿತು. ನಂತರ ನಡೆದ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಾಣಿ ಶೆಟ್ಟಿ ವಹಿಸಿದ್ದರು. ಪಿ .ವಿ. ಪ್ರದೀಪ್ ಕುಮಾರ್ ಅವರ ಸ್ವಾಗತ ಭಾಷಣದೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಗೀತಾ ಕೊಂಕೋಡಿ ಅಚ್ಚುಕಟ್ಟಾಗಿ ನಿರೂಪಿಸಿದರೆ, ಅನಿತಾ ಶೆಟ್ಟಿ ಧನ್ಯವಾದ ಸಮರ್ಪಿಸಿದರು.



Related posts

ಕುಲಾಲ ಸಂಘ ಮುಂಬಯಿ, ಚರ್ಚ್ ಗೇಟ್ – ದಹಿಸರ್  ಸ್ಥಳೀಯ ಸಮಿತಿ, ವಾರ್ಷಿಕ ಸ್ನೇಹ ಮಿಲನ.

Mumbai News Desk

ತೋನ್ಸೆ ಶ್ರೀ ಬ್ರಹ್ಮ ಬೈದರ್ಕಳ ಪಂಚಧೂಮಾವತಿ ಗರಡಿಯ ಪುನರ್ ನಿರ್ಮಾಣ ನಿಮಿತ್ತ ಸಮಾಲೋಚನಾ ಸಭೆ ಹಾಗೂ ಮನವಿ ಪತ್ರ ಬಿಡುಗಡೆ

Mumbai News Desk

ವಸಾಯಿ ಕರ್ನಾಟಕ ಸಂಘ ಮಹಿಳಾ ವಿಭಾಗದ ನವರಾತ್ರಿ ಉತ್ಸವ: ಸಂಸ್ಕೃತಿ ಮತ್ತು ಸಾಧನೆಗಳ ಸಮಾಗಮ

Mumbai News Desk

ಭಂಡಾರಿ ಸೇವಾ ಸಮಿತಿ ಮುಂಬಯಿ – 70ನೇ ವಾರ್ಷಿಕ ಕೌಟುಂಬಿಕ ಸ್ನೇಹ ಸಮ್ಮಿಲನ

Mumbai News Desk

ಮುಂಬಯಿಯ  ಕುಲಾಲ ಸಂಘದ ಯುವ ವಿಭಾಗದವತಿಯಿಂದ ಕ್ರೀಡೋತ್ಸವ, ಬಹುಮಾನ ವಿತರಣೆ

Mumbai News Desk

ಶ್ರೀ ಹನುಮಾನ್ ಭಜನಾ ಮಂಡಳಿ ಭಾಯಂದರ್ ಪೂರ್ವ – ಸಾವಿರಾರು ಭಕ್ತರ ಪಾಲ್ಗೊಳ್ಳುವಿಕೆಯಲ್ಲಿ 26ನೇ ವಾರ್ಷಿಕ ಅಯ್ಯಪ್ಪ ಪೂಜೆ ಸಂಪನ್ನ.

Mumbai News Desk