30 C
Mumbai
August 21, 2026
Mumbai News Kannada
ನಿಧನ ಸುದ್ದಿ

ಚಂದ್ರಾವತಿ ಬಿ. ಅಮೀನ್ (ಚಂದ್ರಮುಖಿ) ನಿಧನ





ಹೆಜಮಾಡಿ: ಹೆಜಮಾಡಿ ಕೋಡಿಕರೆ, ಬೂಚಿಹಿತ್ಲು ನಿವಾಸಿ ಶ್ರೀಮತಿ ಚಂದ್ರಾವತಿ ಬಿ. ಅಮೀನ್ (ಚಂದ್ರಮುಖಿ) (94) ಆ.21 ರಂದು ನಿಧನರಾದರು. ಮೃತರು ನಾಲ್ವರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ದೇವರ ಪರಮ ಭಕ್ತೆಯಾಗಿದ್ದ ಚಂದ್ರಾವತಿ ಅವರು ರಾಮಾಯಣ ಹಾಗೂ ಮಹಾಭಾರತದ ಪ್ರವಚನಗಳಲ್ಲಿ ಪ್ರವೀಣರಾಗಿದ್ದರು. ಪೌರಾಣಿಕ ಕಥೆಗಳನ್ನು ಬಾಯಿಪಾಠವಾಗಿ ಹೇಳುವ ಮೂಲಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ತಮ್ಮದೇ ಆದ ಗುರುತನ್ನು ಹೊಂದಿದ್ದರು.

ಅವರ ನಿಧನಕ್ಕೆ ಹೆಜಮಾಡಿ ಬಿಲ್ಲವರ ಸಂಘದ ಅಧ್ಯಕ್ಷ ಮೋಹನ್ ದಾಸ್ ಹೆಜಮಾಡಿ ಅವರು ಸಂತಾಪ ಸೂಚಿಸಿದ್ದಾರೆ. ಅವರ ಅಗಲಿಕೆ ಕುಟುಂಬಸ್ಥರು ಹಾಗೂ ಬಂಧು-ಮಿತ್ರರಿಗೆ ತುಂಬಲಾರದ ನಷ್ಟವಾಗಿದೆ.

ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಕುಟುಂಬದವರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸಲಾಗಿದೆ.



Related posts

ಕಲಾವಿದ, ಜೈ ಕರ್ನಾಟಕ ಸಂಸ್ಥೆಯ ಸ್ಥಾಪಕ ಸದಸ್ಯ ಉದಯ ಕುಮಾರ್ ಹೆಜಮಾಡಿ ನಿಧನ

Mumbai News Desk

ಹೆಜಮಾಡಿ: ಆಶಾ ಕಾರ್ಯಕರ್ತೆ, ಧಾರ್ಮಿಕ ಮುಖಂಡೆ ಸರೋಜಿನಿ ಸಂಜೀವ ಮಾಸ್ಟರ್ ನಿಧನ

Mumbai News Desk

ಜೋಗೇಶ್ವರಿ: ಹೋಟೆಲ್ ಉದ್ಯಮಿ, ಸಂಘಟಕ ನಾರಾಯಣ ಪೂಜಾರಿ ನಿಧನ

Mumbai News Desk

ಸಂಗೀತ ಲೋಕದ ಮಹಾತಾರೆ ಅಸ್ತಂಗತ; ‘ಗಾನಕೋಗಿಲೆ’ ಎಸ್. ಜಾನಕಿ ಇನ್ನಿಲ್ಲ

Mumbai News Desk

ಹೆಜಮಾಡಿ : ಶ್ರೀಧರ್ ಸುವರ್ಣ ನಿಧನ

Mumbai News Desk

ಸಾಂತಾಕ್ರೂಜ್ ಪ್ರಭಾತ್ ಕಾಲೋನಿಯ ಸಮಾಜ ಸೇವಕ ಶ್ರೀ ಅಶೋಕ್ ಪೂಜಾರಿ ನಿಧನ

Mumbai News Desk