ಹೆಜಮಾಡಿ: ಹೆಜಮಾಡಿ ಮಟ್ಟುಪಟ್ನ ನಿವಾಸಿ ಉದಯ ಕುಮಾರ್ (60) ಅವರು ಆಗಸ್ಟ್ 12ರಂದು ನಿಧನರಾದರು. ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಹೆಜಮಾಡಿಯ ಜೈ ಕರ್ನಾಟಕ ಸಂಸ್ಥೆಯನ್ನು 1987ರಲ್ಲಿ ಸ್ಥಾಪಿಸಿದವರಲ್ಲಿ ಒಬ್ಬರಾಗಿದ್ದ ಅವರು, ಸಂಸ್ಥೆಯ ಸಂಚಾಲಕರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ನಾಟಕ ಕ್ಷೇತ್ರದಲ್ಲಿ ಹಾಸ್ಯ ನಟರಾಗಿ ಹಾಗೂ ಯುವಜನ ಮೇಳಗಳಲ್ಲಿ ಜಾನಪದ ಕಲಾವಿದರಾಗಿ ಗುರುತಿಸಿಕೊಂಡಿದ್ದ ಅವರು, ತಮ್ಮ ಕಲಾ ಸೇವೆಗಾಗಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದರು.
ಮಟ್ಟುಪಟ್ನ ಮೊಗವೀರ ಮಹಾಸಭಾದ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದ ಉದಯ ಕುಮಾರ್ ಅವರು, ಕೊಂಕಣ ರೈಲ್ವೆಯಲ್ಲಿ ಉದ್ಯೋಗಿಯಾಗಿ ಸುಮಾರು 25 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.
ಅವರ ನಿಧನಕ್ಕೆ ಕುಟುಂಬಸ್ಥರು, ಬಂಧು-ಮಿತ್ರರು ಹಾಗೂ ಜೈ ಕರ್ನಾಟಕ ಸಂಸ್ಥೆಯ ಸದಸ್ಯರು ಸಂತಾಪ ಸೂಚಿಸಿದ್ದಾರೆ.




