ಶ್ರೀಧರ್ ಸುವರ್ಣ ಹೆಜಮಾಡಿ (57) ಅವರು ಆಗಸ್ಟ್ 20ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ತೇಜಸ್ ಕೇಟರ್ಸ್ನ ಮಾಲಕರಾಗಿದ್ದ ಅವರು, ಬಿರ್ವೆರ್ ಬ್ರದರ್ಸ್ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾಗಿ ಹಾಗೂ ಪಡುಕರೆ ಬಿಲ್ಲವ ಸಮಿತಿಯ ಅಧ್ಯಕ್ಷರಾಗಿ ಸಮಾಜ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಕೊಡುಗೈ ದಾನಿಯಾಗಿ, ಸಮಾಜಮುಖಿ ಚಿಂತನೆಯೊಂದಿಗೆ ಅನೇಕ ಜನರಿಗೆ ನೆರವಾಗುತ್ತಿದ್ದ ಅವರು, ಸರಳತೆ, ಸ್ನೇಹಪರತೆ ಹಾಗೂ ಮಾನವೀಯ ಗುಣಗಳಿಂದ ಎಲ್ಲರ ಪ್ರೀತಿ–ವಿಶ್ವಾಸ ಗಳಿಸಿದ್ದರು.
ಸಮಾಜದ ಒಳಿತಿಗಾಗಿ ಅವರು ಸಲ್ಲಿಸಿದ ಸೇವೆ ಹಾಗೂ ನೀಡಿದ ಕೊಡುಗೆ ಸದಾ ಸ್ಮರಣೀಯ. ಅವರ ಅಗಲಿಕೆ ಕುಟುಂಬದವರಿಗೆ ಮಾತ್ರವಲ್ಲದೆ, ಬಂಧು-ಮಿತ್ರರು ಹಾಗೂ ಸಮಾಜದವರಿಗೆ ತುಂಬಲಾರದ ನಷ್ಟ ಆಗಿದೆ.




