30.9 C
Mumbai
June 8, 2026
Mumbai News Kannada
ಪ್ರಕಟಣೆ

ಜ 22: ಯಕ್ಷ ಪ್ರಿಯ ಬಳಗ ಮೀರಾ ಭಯಂದರ್ ಇದರ ವತಿಯಿಂದ* ಶ್ರೀ ರಾಮ*  ಯಕ್ಷಗಾನ





 ಮೀರಾ ರೋಡ್  ಜ19. ಯಕ್ಷ ಪ್ರಿಯ ಬಳಗ ಮೀರಾ ಭಯಂದರ್ ಇದರ ವತಿಯಿಂದ ಅಯೋಧ್ಯ ರಾಮ ಮಂದಿರ ಉದ್ಘಾಟನಾ ಪ್ರಯುಕ್ತ  ಯಕ್ಷ ಪ್ರಿಯ ಬಳಗ ತಂಡದ ಕಲಾವಿದರಿಂದ ಶ್ರೀ ರಾಮ* ಎನ್ನುವ  ಯಕ್ಷಗಾನ ಕಥಾ ಭಾಗವನ್ನು ಜ 22 ರಂದು ಸಂಜೆ 4ಗಂಟೆಗೆ ಬಾಲಾಜಿ ಇಂಟರ್ನ್ಯಾಷನಲ್ ಹಾಲ್  ಭಾರತಿ ಪಾರ್ಕ್ ಮೀರಾ ರೋಡ್ ಇಲ್ಲಿ ಆಯೋಜಿಸಿಕೊಂಡಿದ್ದಾರೆ.

ಯಕ್ಷಗಾನದ ಮಧ್ಯಾಂತರದಲ್ಲಿ   ಬಿಜೆಪಿ ಪಕ್ಷದ  ಮೀರಾ ಭಯಂದರ್ ನ ದಕ್ಷಿಣ ಭಾರತೀಯ ಘಟಕದ  ಅಧ್ಯಕ್ಷ..ಮುಂಬೈ ಬಂಟರ ಸಂಘದ ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಬಲ್ಕುಂಜೆ ಗುತ್ತು ಗುತ್ತಿನಾರ್ ರವೀಂದ್ರ  ದೇಜು ಶೆಟ್ಟಿ ಕೊಟ್ರಪಾಡಿ ಗುತ್ತು , ಮತ್ತು   ಬಂಟರ ಸಂಘದ ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆಯಾಗಿ ಆಯ್ಕೆಯಾದ ವಸಂತಿ ಶಿವ ಶೆಟ್ಟಿ  ಇವರನ್ನು ಯಕ್ಷ ಪ್ರಿಯ ಬಳಗದವತಿಯಿಂದ ಯಕ್ಷ ರತ್ನ ಪ್ರಶಸ್ತಿಯನ್ನು ಕೊಟ್ಟು ಸನ್ಮಾನಿಸಲಾಗುವುದು.

  ಯಕ್ಷಗಾನದಲ್ಲಿ ಹಿಮ್ಮೇಳದಲ್ಲಿ ಭಾಗವತರಾಗಿ ಸಾಯಿ  ಎ ಶೆಟ್ಟಿ ಮುಂಡ್ಕೂರು,ಚೆಂಡೆ ಮದ್ದಳೆ ,ಸುಬ್ರಮಣ್ಯ ಶಾಸ್ತ್ರಿ ಮಣಿಮುಂಡ , ಶ್ರೀಧರ ಎಡಮಲೆ,

ಚಕ್ರತಾಳ , ಪ್ರೀತೇಶ್ ಬಿ ಮೂಲ್ಯ,

ಹಾಸ್ಯ : ಸುರೇಶ್ ಪೂಜಾರಿ ಕಿನ್ಯ 

 ಬಾಲ ಕಲಾವಿದರು ಕೀರ್ತಿಶ್ರಿ ಬಿ ಮೂಲ್ಯ ,ಕೃಷ ಎಂ ಪೂಜಾರಿ ,ಮನ್ವಿತ ಎಂ ಪೂಜಾರಿ , ಮಿತಾಲಿ ಎಂ ಪೂಜಾರಿ ,ನಾಗೇಶ್ ಶೆಟ್ಟಿ ತಾಳಿಪಾಡಿ ,ವಸಂತಿ ಶಿವ ಶೆಟ್ಟಿ

ಶುಭಲತ ವಿ ಶೆಟ್ಟಿ, ರೇಷ್ಮಾ ಎಸ್ ಶೆಟ್ಟಿ , ಐಶಾನಿ  ಎಸ್ ಶೆಟ್ಟಿ ,ಸಾನ್ವಿ ಎನ್ ಶೆಟ್ಟಿ ,ತ್ರಿಷಾ  ಡಿ ಶೆಟ್ಟಿ,ಆರಾಧ್ಯ ಸಿ ಕೋಟ್ಯಾನ್,ಗೀತ್ ಆರ್ ಶೆಟ್ಟಿ ,ಪ್ರೀತಮ್ ಪಿ ಹೆಗ್ಡೆ ,ಆರ್ಯ ಎಸ್ ಶೆಟ್ಟಿ,ಕೀಯನ್ ಪಿ ಅಮೀನ್, ಪ್ರಜ್ಞಾ. ಪಿ ಶೆಟ್ಟಿ,ಭಾನ್ವಿ  ವಿ ಭಂಡಾರಿ.  ಪಾಲ್ಗೊಳ್ಳಲಿದ್ದಾರೆ.

ಅಯೋಧ್ಯೆಯಲ್ಲಿ ಶ್ರೀ ರಾಮನ ದೇವರು  ಪ್ರತಿಷ್ಠೆಯಾಗುವ  ಸುಸಂದರ್ಭವನ್ನು ಭಕ್ತಿ ಸಂಭ್ರಮದಲ್ಲಿ ಆಚರಿಸುವ  ನಿಟ್ಟಿನಲ್ಲಿ ಯಕ್ಷಗಾನವನ್ನು  ಆಯೋಜಿಸಲಾಗಿದೆ. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು   ಯಕ್ಷಗಾನ ಕಾರ್ಯಕ್ರಮವನ್ನು ಚಂದಗಾಣಿಸಿ ಕೊಡಬೇಕಾಗಿ

ಯಕ್ಷಪ್ರಿಯ ಬಳಗದ ಸಂಸ್ಥಾಪಕ ನಾಗೇಶ್ ಕುಮಾರ್ ಪೊಳಲಿ ಮತ್ತು ಸರ್ವ ವಿಧ್ಯಾರ್ಥಿಗಳು ವಿನಂತಿಸಿಕೊಂಡಿದ್ದಾರೆ



Related posts

ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ, ಡೊಂಬಿವಲಿ ಸಮಿತಿಯ ವತಿಯಿಂದ ಪೆ. 2 ರಂದು ಅರಿಶಿಣ ಕುಂಕುಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ

Mumbai News Desk

ಜಯ ಸುವರ್ಣ ಅಭಿಮಾನಿಗಳು ಮತ್ತು ಮುಂಬಯಿ ಬಿಲ್ಲವರು : ಮಾ. 8ರಂದು ಜಾಗತಿಕ ಮಹಿಳಾ ದಿನಾಚರಣೆ

Mumbai News Desk

ಮೀರಾ ರೋಡ್ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಜ1 ರಂದು, ಶ್ರೀ  ಸಾರ್ವಜನಿಕ ಸತ್ಯ ನಾರಾಯಣ ಮಹಾಪೂಜೆ.

Mumbai News Desk

ಪೇಜಾವರ  ಮಠದ   ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು  ಫೆ 1 ರಿಂದ   ಫೆ 6  ರವರೆಗೆ ಶ್ರೀ ಪೇಜಾವರ ಮಠ ಸಾಂತಾಕ್ರೂಜ್ ಮುಂಬಯಿ ಇಲ್ಲಿ ಮುಕ್ಕಂ,

Mumbai News Desk

ಶ್ರೀ ಜಗದಂಬಾ ಮಂದಿರ, ಡೊಂಬಿವಲಿ (ಪ.): ಸೆ. 28ಕ್ಕೆ ದಶಮಾನೋತ್ಸವ ಸಂಭ್ರಮದ ಅಂಗವಾಗಿ ಯಕ್ಷಗಾನ.

Mumbai News Desk

ಸಾಫಲ್ಯ ಸೇವಾ ಸಂಘ, ಮುಂಬಯಿ ಇದರ ದೀಪಾವಳಿ ಸಾಹಿತ್ಯ ಸ್ಪರ್ಧೆ 2024 : ಸಣ್ಣ ಕಥೆ ಮತ್ತು ಲೇಖನಗಳ ಸ್ಪರ್ಧೆ

Mumbai News Desk