28.4 C
Mumbai
March 7, 2026
Mumbai News Kannada
ತುಳುನಾಡು

ಪೊಲಿಪು ಕಾಂಚನ್ ಮೂಲಸ್ಥಾನ – ನಾಗರ ಪಂಚಮಿ ಆಚರಣೆ, ವಾರ್ಷಿಕ ಮಹಾಸಭೆ,ಪ್ರತಿಭಾ ಪುರಸ್ಕಾರ, ಸನ್ಮಾನ ಸಮಾರಂಭ






ಕಾಪು – ಪೊಲಿಪು : ಕಾಂಚನ್ ಮೂಲಸ್ಥಾನದ ವಾರ್ಷಿಕ ಮಹಾಸಭೆಯು ನಾಗರ ಪಂಚಮಿಯ ಶುಭ ದಿನದಂದು ದಿನಾಂಕ 09.08.24ರಂದು ಕಾಂಚನ್ ಮೂಲಸ್ಥಾನದ ಸಮುದಾಯ ಭವನದಲ್ಲಿ ಅಧ್ಯಕ್ಷರಾದ ಗಣೇಶ್ ಕಾಂಚನ್
ಅವರ ಅಧ್ಯಕ್ಷತೆಯಲ್ಲಿ ಜರಗಿತು.
ವೇದಿಕೆಯಲ್ಲಿದ್ದ ಅತಿಥಿ ಗಣ್ಯರಾದ ಉಡುಪಿಯ ಡಿ ಎಸ್ ಪಿ ಜೈ ಶಂಕರ್, ಉಡುಪಿ ಬ್ಲಾಕ್ ಕಾಂಗ್ರೇಸ್ ಪಕ್ಷದ ಅಧ್ಯಕ್ಷ ರಮೇಶ್ ಕಾಂಚನ್, ಸಿ ಎ. ಗಣೇಶ್ ಕಾಂಚನ್ ಉಡುಪಿ ಇವರನ್ನು ಗೌರವಿಸಲಾಯಿತು.
ಗೌರವ ಕಾರ್ಯದರ್ಶಿ ಶ್ರೀಧರ್ ಕಾಂಚನ್ ಪೊಲಿಪು,ಗತ ವರ್ಷದ ವರದಿ ವಾಚಿಸಿದರು.
ರಾಜೇಶ್ ಕಾಂಚನ್ ವಾರ್ಷಿಕ ಆಯಾ -ವ್ಯಯ ಪಟ್ಟಿಯನ್ನು ಸಭೆಯ ಮುಂದಿಟ್ಟರು.
ಇದೇ ಸಂಧರ್ಭ 18ನೆ ವರ್ಷದ ಪ್ರತಿಭಾ ಪುರಸ್ಕಾರದಲ್ಲಿ ಸುಮಾರು 38 ಮಕ್ಕಳಿಗೆ ಸುಮಾರು 55 ಸಾವಿರ ರೂಪಾಯಿ ನಗದು ನೀಡಿ ಅಭಿನಂದಿಸಲಾಯಿತು.


ಇದೇ ವೇಳೆ ಕಾಂಚನ್ ಮೂಲಸ್ಥಾನದಲ್ಲಿ ಸುಮಾರು 35 ವರ್ಷಗಳಿಂದ ಸಮಿತಿ ಸದಸ್ಯರಾಗಿ, 20 ವರ್ಷ ಮಹಿಳಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಪದ್ಮಾವತಿ ಎಂ ಪುತ್ರನ್, ಹಾಗೂ ಸಮಿತಿಯ ಸದಸ್ಯರಾಗಿ 20 ವರ್ಷ ಸೇವೆ ಮಾಡಿದ ಗಿರೀಶ್ ಎಂ ಕಾಂಚನ್, ಇವರನ್ನು ವೇದಿಕೆಯ ಗಣ್ಯರು ಶಾಲು, ಫಲ ಪುಷ್ಪ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಉಪಾಧ್ಯಕ್ಷರಾದ ಮಧುಕರ್ ಕಾಂಚನ್ ತಣ್ಣೀರುಭಾವಿ, ಗೌರವ ಅಧ್ಯಕ್ಷ ಭಾಸ್ಕರ ಕಾಂಚನ್ ತಣ್ಣೀರುಭಾವಿ, ಮುಂಬೈ ಸಮಿತಿಯ ಪ್ರತಿನಿಧಿ ಪ್ರಭಾಕರ್ ಕಾಂಚನ್, ಸುಂದರ ಕಾಂಚನ್, ಗಣೇಶ್ ಕಾಂಚನ್ ಹಿರಿಯಡ್ಕ, ಸತೀಶ್ ಕಾಂಚನ್ ಪೊಲಿಪು, ದಿನೇಶ್ ಕಾಂಚನ್ ಉಡುಪಿ ಉಪಸ್ಥಿತರಿದ್ದರು.
ಶ್ರೀಧರ್ ಕಾಂಚನ್ ಕಾರ್ಯಕ್ರಮ ನಿರೂಪಿಸಿದರೆ, ಮಧುಕರ್ ಕಾಂಚನ್ ವಂದಿಸಿದರು.
ಮಾಧವ ಉಪಾದ್ಯಾಯರ ಪಾರೋಹಿತ್ಯದಲ್ಲಿ ನಾಗರ ಪಂಚಮಿಯ ವಿಶೇಷ ಮಹಾಪೂಜೆ ನಡೆದು, ಕೊನೆಗೆ ಸೇರಿದ್ದ ಎಲ್ಲರೂ ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ ಭಾಗಿಯಾದರು.



Related posts

ಮೂಲ್ಕಿ: “ಅಮ್ಮನ ಆಸರೆ” ಕಾರ್ಯಕ್ರಮಕ್ಕೆ ಚಾಲನೆ

Mumbai News Desk

ಮುಲ್ಕಿ ಅರಸು ಕಂಬಳದಲ್ಲಿ ಗುತ್ತಿನಾರ್ ರವೀಂದ್ರ ಶೆಟ್ಟಿಯವರಿಗೆ ಸನ್ಮಾನ :

Mumbai News Desk

ಮೂಲ್ಕಿ ಕಾಂತು ಸೇವೆಗಾರ ಧರ್ಮ ಚಾವಡಿ ಟ್ರಸ್ಟ್ ಉದ್ಘಾಟನೆ

Mumbai News Desk

ಪುನರೂರು ಪ್ರತಿಷ್ಠಾನದ ವತಿಯಿಂದ ಪುನರೂರು ಸಂಭ್ರಮ.

Mumbai News Desk

ಮೂಲ್ಕಿ ಹೊಸ ಅಂಗಣ ಮಾಸ ಪತ್ರಿಕೆಯ ತಿಂಗಳ ಬೆಳಕು ಕಾರ್ಯಕ್ರಮದಲ್ಲಿ ಆದಿಕಿಲ್ಲಾಡಿ ಶ್ರೀ ಕೊಡ್ದಬ್ಬು ದೈವಸ್ಥಾನದ ಗುರಿಕಾರರಾದ ವಿ ಎಸ್ ವಸಂತ್ ಗುರಿಕಾರಯವರಿಗೆ ಸನ್ಮಾನ

Mumbai News Desk

ಶ್ರೀ ಚಕ್ರ ಪೀಠ  ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣ್ಣಗುಡ್ಡೆ ಮಹಾ ಚಂಡಿಕಾಯಾಗ ಮಹಾ ಮಂತ್ರಕ್ಷತೆ ಸಂಪನ್ನ

Mumbai News Desk