32 C
Mumbai
April 24, 2026
Mumbai News Kannada
ತುಳುನಾಡು

ಕೆ ಎನ್ ಚಂದ್ರಶೇಖರ್ ಅವರ ಬೀಸು ಬಲೆಗೆ ಭಾರಿ ಗಾತ್ರದ ತೊರಕೆ ಮೀನು (STING RAY FISH)





ಮುಂಬೈಯಲ್ಲಿ ಬ್ಯಾಂಕ್ ಉದ್ಯೋಗಿಯಾಗಿ ಸಮಾಜ ಸೇವೆಯಲ್ಲಿ ತಮ್ಮ ಜೀವನವನ್ನು ಸಮರ್ಪಿಸಿಕೊಂಡ ಕೆ ಎನ್ ಚಂದ್ರಶೇಖರ್ ಅವರು ತನ್ನ ಹುಟ್ಟುರಾದ ಪಡುಬಿದ್ರಿ ನಡಿಪಟ್ಣ ದಲ್ಲಿ ವಿಶ್ರಾಂತ ಜೀವನವನ್ನು ನಡೆಸುತ್ತಿದ್ದಾರೆ. ಸದಾ ಚುರುಕಾಗಿ ಕ್ರಿಯಾಶೀಲರಾಗಿರುವ ಅವರು ತನ್ನ ಸಮಾಜದ ಮುಖ್ಯ ಕುಲಕಸಬು ಮೀನುಗಾರಿಕೆಯಲ್ಲೂ ತೊಡಗಿಕೊಂಡಿರುವರು .
ಮಳೆಗಾಲದ ಸಮುದ್ರ ತುಸು ಜೋರಾಗಿ ಇದ್ದರೂ, ಮೊನ್ನೆ (ಅ. 14) ಚಂದ್ರಶೇಖರ್ ಅವರ ಬೀಸು ಬಲೆಗೆ ದೊಡ್ಡ ಗಾತ್ರದ ತೊರಕೆ ಮೀನು (Sting Ray Fish )ಬಿದ್ದಿರುತ್ತದೆ. ಇಂತಹ ದೊಡ್ಡ ಗಾತ್ರದ ಮೀನು ಪರ್ಸಿನ್ ಅಥವಾ ಆಳ ಸಮುದ್ರದ ಬೋಟುಗಳಿಗೆ ಸಿಗುವುದಿದೆ, ಬೀಸು ಬಲೆಗೆ ದೊಡ್ಡ ಮೀನುಗಳು ಸಿಗುವುದು ಅಪರೂಪ, ಅಂದ ಹಾಗೆ ಚಂದ್ರಶೇಖರ್ ಅವರ ಬೀಸು ಬಲೆಗೆ ಬಿದ್ದ ತೊರೆಕೆ ಮೀನಿನ ಬರೋಬ್ಬರಿ ತೂಕ 11 ಕೆಜಿ. ಇಷ್ಟು ದೊಡ್ಡ ಗಾತ್ರದ ಮೀನು ನಾಡ ಬೀಸು ಬಲೆಗೆ ಬಿದ್ದದ್ದು ಒಂದು ದಾಖಲೆ ಎಂದು ಸ್ಥಳೀಯ ಮೀನುಗಾರರ ಅನಿಸಿಕೆ.
ಮುಂಬೈಯಲ್ಲಿ ಸಮಾಜ ಪರ ಸಂಘಟನೆಗಳಿಗೆ ಕೊಡುಗೈ ದಾನಿಯಾಗಿ ಸಹಕಾರ ನೀಡುತ್ತ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದ ಚಂದ್ರಶೇಖರ್ ಅಧ್ಯಾತ್ಮಿಕ ಒಲವುಳ್ಳವರು ಇದೀಗ ಹುಟ್ಟೂರಿನಲ್ಲಿ ಸದಾ ಕ್ರಿಯಾಶೀಲರಾಗಿ ಕೆಲಸ ಕಾರ್ಯಗಳಲ್ಲಿ ನಿರತರಾಗಿದ್ದಾರೆ.



Related posts

ಮೂಲ್ಕಿ: ಸೋಮಪ್ಪ ಸುವರ್ಣರ ಸ್ಮರಣೆ: ಸಾಧಕರಿಗೆ ಪ್ರಶಸ್ತಿ, ಸೇವಾ ಕಾರ್ಯಕ್ಕೆ ಪ್ರೇರಣೆ-ಮಾಜಿ ಸಚಿವ ಅಭಯ ಚಂದ್ರ ಮೂಲ್ಕಿ

Mumbai News Desk

ಕಾರ್ಲೆ ಭಗವತಿ ಕ್ಷೇತ್ರದ ದೈವ ಪಾತ್ರಿ, ಮೋಯ ಜನಾಂಗದ ದಿವ್ಯ ಚೇತನ ದಿ.ಕೃಷ್ಣ ಬೆಳ್ಚಪ್ಪಾಡರು ಶಿರಿಯ, ಅವರ 42ನೇ ಪುಣ್ಯ ಸ್ಮರಣೆ

Mumbai News Desk

ಕನ್ನಡ ಕಿರುತೆರೆ ನಟಿ, ‘ಬಿಗ್ ಬಾಸ್’ ಖ್ಯಾತಿಯ ಕಾವ್ಯ ಶಾಸ್ತ್ರೀ ಅವರಿಂದ ಕಾಪು ಶ್ರೀ ಹೊಸ ಮಾರಿಗುಡಿ ದೇವಿಗೆ ವಿಶೇಷ ಪೂಜೆ: ನವದುರ್ಗಾ ಲೇಖನ ಸಮರ್ಪಣೆ

Mumbai News Desk

ಯಕ್ಷಧ್ರುವ ಪಟ್ಲ ಸಂಭ್ರಮದ ಸಮಾರೋಪ ಸಮಾರಂಭ* 

Mumbai News Desk

ಉಡುಪಿ : ಜ. 9ರಂದು ಶೀರೂರು ಮಠದ ಶ್ರೀಗಳ ಉಡುಪಿ ‘ಪುರ ಪ್ರವೇಶ’.

Mumbai News Desk

ಕುಲಶೇಖರ ವೀರನಾರಾಯಣ ದೇವಸ್ಥಾನದ ಮೇಲ್ಛಾವಣಿ  ಲೋಕಾರ್ಪಣೆ

Mumbai News Desk