September 6, 2026
Mumbai News Kannada
ಸುದ್ದಿ

ಡಹಾಣೂವಿನ ಬೀದಿಗಳಲ್ಲಿ ಗಣರಾಯನ ದರ್ಬಾರು.





ಚಿತ್ರ ಹಾಗೂ ಸುದ್ದಿ : ಪಿ.ಆರ್.ರವಿಶಂಕರ್

ಡಹಾಣೂ : ತಾ.09.09.2024. ಕಳೆದ ವರ್ಷಗಳಿಂದ ಆಚರಿಸಿಕೊಂಡು ಬಂದಿರುವ ಡಹಾಣೂವಿನ ಪ್ರತಿಷ್ಟಿತ ರಾಜಾಪುರ ಸಾರಸ್ವತ ಸಮಾಜ ಸೇವಾ ಮಂಡಳದ 26ನೆಯ ವರ್ಷದ ಮಂಗಲಮೂರ್ತಿ ಮಹೋತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ  ವಿಜೃಂಭಣೆಯಿಂದ ಜರಗಿ ಸಂಪನ್ನಗೊಂಡಿತು. ಧಾರ್ಮಿಕ ವಿಧಿವಿಧಾನಗಳನ್ನು  ವೈದಿಕ ಶ್ರೀ ವಸಂತ್ ಭಟ್ ಜರಗಿಸಿದರು.  ಸಂಪೂರ್ಣ ವ್ಯವಸ್ಥಾಪನೆಯಲ್ಲಿ ಯುವವೃಂದದ ಸದಸ್ಯರು ಸಹಕರಿಸಿದರು.

          ಪ್ಲಾಸ್ಟಿಕ್ ಮುಕ್ತ ಆಚರಣೆಗೆ ಮಹತ್ವ ನೀಡಿದ  ಎರಡು ದಿನಗಳ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಮಂಗಳೂರು ಮಲ್ಲಿಗೆಯೂ ಸೇರಿದಂತೆ ವೈವಿಧ್ಯಮಯ ಹೂಗಳ ಅಲಂಕಾರ ಮತ್ತು ಮಂಗಲಮೂರ್ತಿಯ ಶೋಭಾಯಾತ್ರೆಯಲ್ಲಿ ಗೋಮಾಂತಕದ ಮೂಲ ಮಠದ ಮಾದರಿಯಲ್ಲಿನ ವಿಶೇಷ ಪಲ್ಲಕ್ಕಿಯು ರಾಜಬೀದಿಯ ಇಕ್ಕೆಲಗಳಲ್ಲಿ ಜಮಾಯಿಸಿದ ನಗರವಾಸಿಗಳ  ಗಮನ ಸೆಳೆಯಿತು. 

            ಸ್ಥಳೀಯ ಭಕ್ತಾದಿಗಳು ಮತ್ತು  ವಿವಿಧ  ಸಂಸ್ಥೆಗಳ ಪದಾಧಿಕಾರಿಗಳೂ   ಸೇರಿದಂತೆ ತುಳುವ ಕನ್ನಡಿಗರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. 

ಶೋಭಾಯಾತ್ರೆಯ ಬಳಿಕ ಡಹಾಣೂ ಉತ್ತರದಲ್ಲಿನ ಕಂಕ್ರಾಡಿ ನದಿಯಲ್ಲಿ ಶ್ರೀಗಣೇಶ ಮೂರ್ತಿಯ ಜಲಸ್ಥಂಭನ ಕಾರ್ಯಕ್ರಮ ಜರಗಿತು.

 ಡಹಾಣೂ ವಲಯದ ಜಾಹೀರಾತಿಗಾಗಿ ಸಂಪರ್ಕಿಸಿ : ಪಿ.ಆರ್.ರವಿಶಂಕರ್ 8483980035



Related posts

ಕರ್ನಿರೆ  ವಿಶ್ವನಾಥ ಶೆಟ್ಟಿ  ಪರಿವಾರ ದಿಂದ ಕರ್ನಿರೆ ಶ್ರೀ ವಿಷ್ಣು ಮೂರ್ತಿ ದೇವರ ಬಿಂಬಕ್ಕೆ ಚಿನ್ನ ಲೇಪಿತ  ಕವಚ ಸಮರ್ಪಣೆ,

Mumbai News Desk

ನವಿ ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ಮೋದಿ

Mumbai News Desk

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲೂೃಜೆ) ವಾರ್ಷಿಕ ಪ್ರಶಸ್ತಿಗಳ ಪ್ರಕಟ

Mumbai News Desk

ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ   ‘ಸುವರ್ಣಯುಗ’ ಕೃತಿ ಬಿಡುಗಡೆ

Mumbai News Desk

ಬೊಯಿಸರ್ : ಸದ್ಗುರು ಸ್ವಾಮಿ ನಿತ್ಯಾನಂದ ಮಂದಿರದಲ್ಲಿ  63 ನೇ ಪುಣ್ಯತಿಥಿ ಆಚರಣೆ.

Mumbai News Desk

ನಗರದ ಪ್ರಸಿದ್ದ ಹೃದ್ರೋಗ ತಜ್ಞ ಡಾ. ಸದಾನಂದ ಶೆಟ್ಟಿ ಅವರಿಗೆ ಬೆಸ್ಟ್ ಡಾಕ್ಟರ್ ಮುಂಬೈ – 2024 ಪುರಸ್ಕಾರ.

Mumbai News Desk