27.7 C
Mumbai
July 23, 2026
Mumbai News Kannada
ಮುಂಬಯಿ

ಪೇಜಾವರ ಮಠದಲ್ಲಿ ಮನಸೂರೆಗೊಂಡ ಪುತ್ತೂರು ನರಸಿಂಹ ನಾಯಕ್ ಭಕ್ತಿ ಸಂಗೀತ ಕಚೇರಿ







ಮುಂಬಯಿ, ಅ.23- ಭಕ್ತಿ ಸಂಗೀತ ಕ್ಷೇತ್ರದಲ್ಲಿ ಪ್ರಖ್ಯಾತ ಗಾಯಕರಾದ ಶ್ರೀ ಪುತ್ತೂರು ನರಸಿಂಹ ನಾಯಕ್ ಅವರಿಂದ ದಾಸರ ಪದಗಳ ಭಕ್ತಿ ಸಂಗೀತ ಕಾರ್ಯಕ್ರಮವು ಅ.21 ರಂದು ಶನಿವಾರ ಸಂಜೆ ಸಾಂತಾಕ್ರೂಜ್ ಪೂರ್ವದ ಪ್ರಭಾತ್ ಕಾಲನಿಯಲ್ಲಿರುವ ಶ್ರೀ ಪೇಜಾವರ ಮಠದಲ್ಲಿ ಭಕ್ತಿಸಂಭ್ರಮದಿಂದ ಜರಗಿತು.

ಮುಂಬಯಿಗೆ ಕಳೆದ ಹಲವಾರು ವರ್ಷಗಳಿಂದ  ಪುತ್ತೂರು ನರಸಿಂಹ ನಾಯಕ್ ಅವರನ್ನು  ಬರಮಾಡಿಸಿ ಭಕ್ತಿ ಸಂಗೀತದ ಉಚಿತ ರಸದೌತಣ ನೀಡುತ್ತಾ ಬಂದಿರುವ ಪ್ರಫುಲ್ಲಾ ಎಸ್ ಕೆ  ಉರ್ವಲ್ ಕುಟುಂಬ ಮತ್ತು ಬಿ ಆರ್ ಶೆಟ್ಟಿ ಕುಟುಂಬ ಈ ವರ್ಷವೂ  ಮುಂಬಯಿಯ ಭಕ್ತಿಸಂಗೀತ ಪ್ರೇಮಿಗಳಿಗೆ ಶನಿವಾರ  ಪೇಜಾವರ ಮಠದಲ್ಲಿ ಉಚಿತವಾಗಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು. 

ಈ ಸಂದರ್ಭದಲ್ಲಿ ಗಾಯಕರಾದ ಪುತ್ತೂರು ನರಸಿಂಹ ನಾಯಕ್ ಅವರಿಗೆ ಶಾಲು ಹೊದೆಸಿ  ಪೇಜಾವರ ಮಠದ ನಿರ್ವಾಹಕರಾದ ಶ್ರೀ ಹರಿ ಭಟ್ ಗೌರವಿಸಿದರು. ವೇದಿಕೆಯಲ್ಲಿ ಮುರಳಿ ಭಟ್ ಡೊಂಬಿವಿಲಿ, ಹರಿ ಭಟ್, ಕಾರ್ಯಕ್ರಮ ಆಯೋಜಕರಾದ ಐಐಟಿಸಿ ಯ ವಿಕ್ರಾಂತ್ ಉರ್ವಲ್,  ಸುಧೀರ್ ಶೆಟ್ಟಿ, ಶ್ರೀಧರ್ ರಾವ್ ಗೊರಾಯಿ, .. ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.



Related posts

ಮುಲುಂಡಿನ ವಿದ್ಯಾ ಪ್ರಸಾರಕ ಮಂಡಳದ ಕನ್ನಡ ಮಾಧ್ಯಮದ ಶಾಲೆಯಲ್ಲಿ ಪಾಲಕ ಶಿಕ್ಷಕ ಸಂಘದ ಮಹಾಸಭೆ

Mumbai News Desk

ಮಲಾಡ್ ಪೂರ್ವ: ಸ್ವಾಮಿ ಕೊರಗಜ್ಜ ನೇಮೋತ್ಸವ

Mumbai News Desk

ಬಂಟರ ಸಂಘ ಮುಂಬಯಿ,  ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ಅಷ್ಟಾದಶ ಸಂಭ್ರಮ

Mumbai News Desk

ಮೀರಾಭಾಯಂದರ್ ಹೋಟೇಲ್ಸ್ ಅಸೋಸಿಯೇಷನಿನ ವಿಶೇಷ ಸರ್ವ ಸಾಮಾನ್ಯ ಸಭೆ, ಸನ್ಮಾನ.

Mumbai News Desk

ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ : ಮೀರಾ – ಬಾಯಂದರ್ ಶಾಖೆಯಲ್ಲಿ ಮನವಿ ಪತ್ರ ಬಿಡುಗಡೆ ಕಾರ್ಯಕ್ರಮ

Mumbai News Desk

ಐಸಿಎಸ್ಇ 10ನೇ ತರಗತಿ ಪರೀಕ್ಷೆಯಲ್ಲಿ ಮೋಕ್ಷಿತ್ ಶ್ರೀಧರ್ ಮೂಲ್ಯ ಗೆ ಶೇ. 96 ಅಂಕ.

Mumbai News Desk