July 23, 2026
Mumbai News Kannada
ಮುಂಬಯಿ

ವೈಭವದ ವಿಸರ್ಜನ ಮೆರವಣಿಗೆಯೊಂದಿಗೆ ಪಶ್ಚಿಮ ವಿಭಾಗದ ನವರಾತ್ರಿ ಉತ್ಸವ ಸಂಪನ್ನ.







ಚಿತ್ರ, ವರದಿ : ಸತೀಶ್ ಶೆಟ್ಟಿ.

ಮುಂಬೈ ಮಹಾರಾಷ್ಟ್ರದ ಮಿನಿ ತುಳುನಾಡು ಎಂದೇ ಖ್ಯಾತವಾಗಿರುವ ಡೊಂಬಿವಲಿಯ ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿಯ ನವರಾತ್ರಿ ಉತ್ಸವವು ವಿವಿಧ ಪೂಜೆ, ಸೇವಾದಿಗಳಿಂದ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅಕ್ಟೋಬರ್ 24ರ ದಸರದಂದು ನಡೆದ ವೈಭವಯುತ ಮೆರವಣಿಗೆಯೊಂದಿಗೆ ಸಂಪನ್ನಗೊಂಡಿತು.

ಮಂಡಳಿಯ ಧರ್ಮದರ್ಶಿ ಅಶೋಕ್ ದಾಸು ಶೆಟ್ಟಿ ಅವರು ಮೆರವಣಿಗೆಗೆ ಚಾಲನೆ ನೀಡಿದರು,

ವಿವಿಧ ವೇಶಭೂಷಣಗಳೊಂದಿಗೆ ನಾಸಿಕ್ ಡೋಲ್, ತಟ್ಟಿರಾಯ, ಸಿಡಿಮದ್ದು, ಬ್ಯಾಂಡುವಾಲಗ, ಕೇರಳ ಚೆಂಡೆ ಕುಣಿತ, ಮಂಡಳಿಯ ಮಹಿಳೆಯರಿಂದೆ ಭಜನೆ, ಮಂಡಳಿಯ ಮಕ್ಕಳಿಂದ ಕುಣಿತ ಭಜನೆ, ಹುಲಿವೇಷ, ಯಕ್ಷಗಾನದ ಪ್ರತ್ಯಕ್ಷತೆ, ಹಾಗೂ ಇನ್ನಿತರ ವೇಷಭೂಷಣಗಳು ಮೆರವಣಿಗೆಗೆ ಮೆರಗನ್ನು ನೀಡಿದವು. ಪರಿಸರದ ತುಳು ಕನ್ನಡಿಗರು ಸಾಂಪ್ರದಾಯಿಕ ಉಡುಗೆ ತೊಟ್ಟು ಮೆರವಣಿಗೆಯ ಮೆರೆಗನ್ನು ಹೆಚ್ಚಿಸಿದರು.

ಸಾವಿರಾರು ಸಂಖ್ಯೆಯಲ್ಲಿ ಭಕ್ತರು, ಪರಿಸರದ ತುಳು ಕನ್ನಡಿಗರು ಪಾಲ್ಗೊಂಡ ಶ್ರೀ ದೇವಿಯ ವೈಭವವಾದ ಮೆರವಣಿಗೆಯನ್ನು ರಸ್ತೆಯ ಇಕ್ಕೆಲಗಳಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಕಣ್ತುಂಬಿಕೊಂಡು ಪುನೀತರಾದರು.

ಸಂಭ್ರಮ ಉಲ್ಲಾಸ ದಿಂದ ಮೆರವಣಿಗೆ ಮೂಲಕ ತಂದ ದೇವಿಯ ಮೂರ್ತಿಯನ್ನು ಪೂಜೆ, ಪ್ರಾರ್ಥನೆಗೈದು ನದಿಯಲ್ಲಿ ವಿಸರ್ಜಿಸಲಾಯಿತು.



Related posts

ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿ – ವಿಜೃಂಭಣೆಯಿಂದ ಜರಗಿದ ಬ್ರಹ್ಮಶ್ರೀ ನಾರಾಯಣ ಗುರುವರ್ಯರ 170ನೇ ಜಯಂತ್ಯುತ್ಸವ

Mumbai News Desk

ಮುಂಬಯಿ: ಮಾಟುಂಗದ ಮೈಸೂರು ಅಸೋಸಿಯೇಷನ್‌ನಲ್ಲಿ ‘ಕನ್ನಡ ಕಂಪು ಸರಣಿ-10’ ಸಂಭ್ರಮ; ಸತೀಶ್ ಎನ್. ಬಂಗೇರ ಕುರಿತ ಕೃತಿ ಲೋಕಾರ್ಪಣೆ

Mumbai News Desk

ಸ. ಹಿ. ಪ್ರಾ. ಶಾಲೆ ಉಳಾಯಿಬೆಟ್ಟು ಆಶ್ರಯದಲ್ಲಿ ಮಕ್ಕಳ ಬಹುಭಾಷಾ ನಾಟಕೋತ್ಸವ

Mumbai News Desk

ಚಂದ್ರಹಾಸ ಗುರುಸ್ವಾಮಿ ಇನ್ನಂಜೆಯವರ ಶ್ರೀ ಅಯ್ಯಪ್ಪ ಭಕ್ತವೃಂದದ 35ನೇ ವಾರ್ಷಿಕ ಅಯ್ಯಪ್ಪ ಮಹಾಪೂಜೆ,

Mumbai News Desk

ಮೊಗವೀರ ವ್ಯವಸ್ಥಾಪಕ ಮಂಡಳಿಯ ಇಂಟರ್ನ್ಯಾಷನಲ್ ಶಾಲೆಯ ಆಯೋಜನೆಯಲ್ಲಿ ರಾಷ್ಟ್ರಮಟ್ಟದ ಸಿಬಿಎಸ್‌ಸಿ ಶಾಲೆಯ ವಿದ್ಯಾರ್ಥಿಗಳಿಗೆ  ವಾಲಿಬಾಲ್‌ ಪಂದ್ಯಾಟದ ಉದ್ಘಾಟನೆ. 

Mumbai News Desk

ಮೊಗವೀರ ವ್ಯವಸ್ಥಾಪಕ ಮಂಡಳಿ, ಮೀರಾ – ಭಾಯಂದರ್ ಶಾಖೆಯ ಮಹಿಳಾ ವಿಭಾಗ, ಯುವ ವಿಭಾಗದ ಆಶ್ರಯದಲ್ಲಿ ಆಟಿಡೊಂಜಿ ಕೂಟ.

Mumbai News Desk