September 6, 2026
Mumbai News Kannada
ಮುಂಬಯಿ

ಅಯ್ಯಪ್ಪ ಸ್ವಾಮಿ ಭಕ್ತವೃಂದ ಚೆಂಬೂರು, ವಾರ್ಷಿಕ ಪಡಿಪೂಜೆ ಮತ್ತು ಮಹಾಪೂಜೆ





ಶ್ರೀ ಉದ್ಭವ ದುರ್ಗಾಪರಮೇಶ್ವರಿ ಮಂದಿರ, ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದ ಚೆಂಬೂರು, ಅಯ್ಯಪ್ಪ ಸ್ವಾಮಿಯ ವಾರ್ಷಿಕ ಪಡಿಪೂಜೆ ಮತ್ತು ಮಹಾಪೂಜೆ

ಚೆಂಬೂರು ಆಶೀಶ್ ಥೀಯೇಟರ್ ಸಮೀಪದ ಶಬರಿ ಶಾನ್ ಟವರ್ ನ ಬದಿಯಲ್ಲಿರುವ ಶ್ರೀ ಉದ್ಭವ ದುರ್ಗಾಪರಮೇಶ್ವರಿ ಮಂದಿರದ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದದ ವತಿಯಿಂದ ವಾರ್ಷಿಕ ಪಡಿಪೂಜೆ, ಮಹಾಪೂಜೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆಯು ಡಿಸೆಂಬರ್ 25 ಸೋಮವಾರದಂದು ಶ್ರೀ ರಾಜು ದೇವಾಡಿಗ ಗುರುಸ್ವಾಮಿ ತ್ರಾಸಿ ಇವರ ಮಾರ್ಗದರ್ಶನದಲ್ಲಿ ಶಿಬಿರದ ಉದಯ ದೇವಾಡಿಗ ಗುರುಸ್ವಾಮಿ, ರಾಘವೇಂದ್ರ ದೇವಾಡಿಗ ಗುರುಸ್ವಾಮಿ ಮತ್ತು ಶ್ರೀಮತಿ ತುಂಗಾ ಕೆ. ದೇವಾಡಿಗರವರ ಮುಂದಾಳತ್ವದಲ್ಲಿ ಜರಗಿತು.

ಅಂದು ಬೆಳಿಗ್ಗೆ ಮಂದಿರದ ಭಜನಾ ಮಂಡಳಿಯವರಿಂದ ಭಜನೆ ಹಾಗೂ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ನವಿಮುಂಬಯಿ ಇವರಿಂದ ಭಜನೆ, ಉದ್ಭವ ದುರ್ಗಾಪರಮೇಶ್ವರಿ ಮಂದಿರದ ಮಹಾ ಆರತಿ, ಶ್ರೀ ಅಯ್ಯಪ್ಪ ಸ್ವಾಮಿಯ ಪಡಿಪೂಜೆ, ಮಹಾಪೂಜೆ ತದನಂತರ ತೀರ್ಥಪ್ರಸಾದ ವಿತರಣೆಗೊಂಡು, ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ಶ್ರೀ ಅಯ್ಯಪ್ಪ ಸ್ವಾಮಿಯ ಅನ್ನಪ್ರಸಾದವನ್ನು ಸ್ವೀಕರಿಸಿದರು.



Related posts

ಸಿರಿನಾಡ ವೆಲ್ಫೇರ್ ಅಸೋಸಿಯೇಷನ್‌ ರಜತ ಮಹೋತ್ಸವ: ‘ಆಟಿಡ್ ಒಂಜಿ ದಿನ’ ಹಾಗೂ ಯಕ್ಷಗಾನ ತಾಳಮದ್ದಳೆ

Mumbai News Desk

ವರ್ಲಿ  ಶ್ರೀ ಸಿದ್ಧೇಶ್ವರ ಅನ್ನದಾತ ಅಪ್ಪಾಜಿ ಬೀಡು ಪೌಂಡೇಶನ್ ನಲ್ಲಿ ಭಕ್ತಿ ಸಂಭ್ರಮದ ಮಹಾ ಶಿವರಾತ್ರಿ ಆಚರಣೆ

Mumbai News Desk

ಶ್ರೀ ಮಹಾವಿಷ್ಣು ಮಂದಿರದಲ್ಲಿ 48ನೇ ವಾರ್ಷಿಕ ಭಜನಾ ಮಂಗಲೋತ್ಸವ ಹಾಗೂ ಏಕಾಹ ಭಜನೆ ಯಶಸ್ವಿ ಸಂಪನ್ನ

Mumbai News Desk

ಸ್ಮಿತಾ ಬೆಳ್ಳೂರ್ ಯವರು  ಸಂಗೀತ  ಕಛೇರಿ ಮೂಲಕ ಸಂಗೀತಕಲಾ ರಸಿಕರನ್ನು ಮನಮೋಹಕಗೊಳಿಸಿದರು

Mumbai News Desk

ಪಡುಬಿದ್ರಿ ನಡಿಪಟ್ಣ ಮೊಗವೀರ ಸಭಾ ಮುಂಬಯಿ ಇದರ 138ನೇ ವಾರ್ಷಿಕ ಮಹಾಸಭೆ

Mumbai News Desk

ಬಿಲ್ಲವರ ಅಸೋಸಿಯೇಶನ್, ಮುಂಬೈ ಡೊಂಬಿವಲಿ ಸ್ಥಳೀಯ ಕಛೇರಿ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ

Mumbai News Desk