September 6, 2026
Mumbai News Kannada
ಪ್ರಕಟಣೆ

ಫೆ.17ರಂದು ಸೃಜನಾ ಮುಂಬಯಿ ವತಿಯಿಂದ ಸಾಹಿತ್ಯ ವಿಮರ್ಶೆ, ಕೃತಿ ಬಿಡುಗಡೆ, ಜನಪದ ಹಾಡುಗಳ ಪ್ರಸ್ತುತಿ.





ಮುಂಬೈ ಕನ್ನಡ ಲೇಖಕಿಯರ ಬಳಗ ಸೃಜನಾ ಮುಂಬಯಿ ಇದರ ವತಿಯಿಂದ ಸಾಹಿತ್ಯ ವಿಮರ್ಶೆ, ಕ್ರತಿ ಬಿಡುಗಡೆ ಹಾಗೂ ಜನಪದ ಹಾಡುಗಳ ಪ್ರಸ್ತುತಿ ಕಾರ್ಯಕ್ರಮವು ಫೆಬ್ರವರಿ 17ರಂದು ಶನಿವಾರ, ಸಂಜೆ 4 ರಿಂದ, ಮಾಟುಂಗಾ ಪೂರ್ವ ಮೈಸೂರು ಅಸೋಸಿಯೇಷನ್ನ ನ ಮೊದಲನೇ ಮಹಡಿಯ ಕಿರು ಸಭಾಗ್ರಹದಲ್ಲಿ ಜರಗಲಿದೆ.

ಅಂದಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪತ್ರಕರ್ತ,ಸಾಂಸ್ಕೃತಿಕ ಸಂಘಟಕ ದಯಾಸಾಗರ ಚೌಟ, ಗೌರವ ಅತಿಥಿಯಾಗಿ ಸ್ಪರೋ ದ ನಿರ್ದೇಶಕಿ, ಡಾ. ಸಿ ಎಸ್ ಲಕ್ಷ್ಮಿ, ಆಗಮಿಸಲಿದ್ದು ಸೃಜನಾ ದ ಸಂಚಾಲಕಿ ಪದ್ಮಜಾ ಮಣ್ಣೂರ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ.
ಅಂದು ಮುಂಬೈ ಖ್ಯಾತ ಲೇಖಕಿ,ಅನುವಾದಕಿ,ಸೃಜನಾದ ಮಾಜಿ ಸಂಚಾಲಕಿ ಶಾಮಲಾ ಮಾಧವ್ ಅವರ ಎರಡು ಕೃತಿಗಳು ಲೋಕಾರ್ಪಣೆಗೊಳ್ಳಲಿದೆ.
ಸಾಹಿತಿ,ಅಕ್ಷಯ ಮಾಸಿಕದ ಮುಖ್ಯ ಸಂಪಾದಕ ಡಾ. ಈಶ್ವರ ಅಲೆಯೂರು ವಿಮರ್ಶೆಯ ಕುರಿತು ಉಪನ್ಯಾಸ ನೀಡಲಿದ್ದಾರೆ.
ಈ ಸಂದರ್ಭ ಸೃಜನಾದ ಸದಸ್ಯರಿಂದ ಜನಪದ ಹಾಡುಗಳ ಪ್ರಸ್ತುತಿ ನಡೆಯಲಿದೆ.
ಸಾಹಿತ್ಯ ಪ್ರೇಮಿಗಳು,ಕನ್ನಡ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸೃಜನಾ ಮುಂಬೈ ಕನ್ನಡ ಲೇಖಕಿಯರ ಬಳಗದವರು ಎಲ್ಲರಿಗೂ ಆದರದ ಸ್ವಾಗತ ಕೋರಿದ್ದಾರೆ.



Related posts

ಮುಂಬೈ ನ್ಯೂಸ್ ನಡೆದು ಬಂದ ದಾರಿ…..

Chandrahas

ವಸಾಯಿ ಕರ್ನಾಟಕ ಸಂಘ : ಸ್ವಾತಂತ್ರೋತ್ಸವ ಸಂಭ್ರಮ, ದತ್ತು ಸ್ಪೀಕರ, ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

Mumbai News Desk

ಮಾ 8. ಮಲಾಡ್ ಕನ್ನಡ ಸಂಘ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

Mumbai News Desk

ಮುಂಬೈ ರಾಜಾಪುರ ಸಾರಸ್ವತ ಸಂಘದ ಅಮೃತ ಮಹೋತ್ಸವದ ಶುಬಾರಂಭ

Mumbai News Desk

ತೋಡಾರು ಕೊಡಮಣಿತ್ತಾಯ ದೈವಸ್ಥಾನ, ಬ್ರಹ್ಮಶ್ರೀ ಬೈದರ್ಕಳ ಗರಡಿ : ಡಿ 22ರಿಂದ 26ವರೆಗೆ ಕಾಲಾವಧಿ ಜಾತ್ರೆ

Mumbai News Desk

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ) ಬೆಂಗಳೂರು, ಮಹಾರಾಷ್ಟ್ರ ಘಟಕ ವತಿಯಿಂದ ಅಖಿಲ ಭಾರತ ಪ್ರಥಮ ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನ

Mumbai News Desk