May 9, 2026
Mumbai News Kannada
ಸುದ್ದಿ

ಸಮಾಜ ಸೇವಕಿ ದಿ. ಸುಮಿತ್ರಾ ರಾಜು ಸಾಲ್ಯಾನ್ ಅವರ ಜನ್ಮದಿನ.ವೃದ್ಧಾಶ್ರಮದಲ್ಲಿ ಆಚರಣೆ.





    ಮುಂಬಯಿ ಜೂ 5.   ಮುಂಬೈಯ ಕುಲಾಲ ಸಮಾಜದ ಮಹಾದಾನಿ. ಆಶಕ್ತರ ಕಣ್ಣೀರು ಒರೆಸುವ ಕರುಣಾಳು  ಸುನಿಲ್ ರಾಜು   ಸಾಲಿಯಾನ್  ಅವರು  ತಮ್ಮ ಮಾತೃಶ್ರೀ ಸಮಾಜ ಸೇವಕಿ ದಿ. ಸುಮಿತ್ರಾ ರಾಜು ಸಾಲ್ಯಾನ್ ಅವರ  ಜನ್ಮದಿನ ಜೂನ್ 4ರಂದು ಮುಂಬೈಯ ಗೋರೆ ಗಾಂವ್ ಪೂರ್ವದ ಸಾಯಿಬಾಬಾ ನಗರದ   ಸೇಂಟ್ಸ್ ಜೋಸೆಫ್ ಕಾನ್ವೆಂಟ್ ಮತ್ತು ಅಸ್ಸಿಸ್ಸಿ  ವೃದ್ಧಾಶ್ರಮದಲ್ಲಿ  ಸುಮಾರು  50ಕ್ಕೂಮ್ಮಿಕ್ಕಿ ವೃದ್ಧ ಮಹಿಳೆಯವರು ಉಪಸ್ಥಿತಿಯಲ್ಲಿ  ಸುಮಿತ್ರಾ ಸಾಲ್ಯಾನ್ ಅವರು  ನೆನಪಿಗಾಗಿ ಕೇಕ್ ಅನ್ನು ಕತ್ತರಿಸಿ  ಮಧ್ಯಾಹ್ನದ ಪ್ರೀತಿ ಭೋಜನವನ್ನು ನೀಡಿ ಸಂಭ್ರಮವನ್ನು ಆಚರಿಸಿಕೊಂಡರು .

ಈ ಸಂದರ್ಭದಲ್ಲಿ ಮಾತನಾಡಿದ ಸುನಿಲ್ ಸಾಲಿಯಾನ್.  ನವರು ತಾಯಿ ಪ್ರತಿಯೊಬ್ಬನ ಬದುಕಿನಲ್ಲೂ ಶ್ರೇಷ್ಠತೆಯನ್ನು ಪಡೆದವಳು, ಅವಳ ಋಣಸಂದಾಯ ನಮ್ಮ ಜನುಮದಲ್ಲಿ ಸಾಧ್ಯವಿಲ್ಲ ಆದರೆ ಅವರ ನೆನಪುಗಳು ನಮ್ಮಿಂದ ಸದಾ ನಡೆಯಬೇಕು ಎನ್ನುವ ನಿಟ್ಟಿನಲ್ಲಿ ಪ್ರತಿವರ್ಷ ನನ್ನ ಅಮ್ಮ ನಮ್ಮನ್ನು ಅಗಲಿದರು ಅವರು ಜನುಮದಿನದ ನೆನಪುಗಳು ಸಾಧ್ಯವಾದಷ್ಟು ನಡೆಸುತ್ತಾ ಬಂದಿದ್ದೇನೆ. ಅಮ್ಮನ ಸಮಾನ ಮನಸ್ಸಿನ ಹಿರಿಯರೊಂದಿಗೆ ಜನ್ಮದಿನವನ್ನು ಆಚರಿಸುವುದು ನನಗೆ ಸಂತೋಷವನ್ನು ನೀಡಿದೆ ಎಂದು ನುಡಿದರು.

ಈ ಸಂದರ್ಭದಲ್ಲಿ ಸುನಿಲ್ ಸಾಲಿಯಾನ್ ಮತ್ತು ಅವರ ಧರ್ಮಪತ್ನಿ ದೇವಕಿ ಸಾಲ್ಯಾನ್ ಹಾಗೂ ಕುಲಾಲ ಸಮಾಜದ ಬಂಧುಗಳು.ಹಾಗೂ ಮುಂಬಯಿ ಕುಲಾಲ ಸಂಘದ ಗೌರವಾಧ್ಯಕ್ಷ ದೇವದಾಸ್ ಕುಲಾಲ್. ಮಾಜಿ ಅಧ್ಯಕ್ಷರು ಗಿರೀಶ್ ಬಿ.  ಸಾಲ್ಯಾನ್ . ಗೌರವ ಕೋಶಧಿಕಾರಿ ಜಯ ಅಂಚನ್. ಕಟ್ಟಡ ನಿರ್ಮಾಣ ಸಮಿತಿಯ ಕಾರ್ಯದರ್ಶಿ ಉಮೇಶ್ ಬಂಗೇರ. ಸಂಘದ ಮಹಿಳಾ ವಿಭಾಗದ ಮಾಜಿ ಕಾರ್ಯದರ್ಶಿ ಮಾಲತಿ ಜೆ. ಅಂಚನ್. ಮತ್ತು ಮಮತಾ ಗಿರೀಶ್ ಸಾಲಿಯಾನ.

ಸಂಘದ ಚರ್ಚ್ ಗೇಟ್ – ದಹಿಸರ್ ಸ್ಥಳೀಯ ಸಮಿತಿಯ ಕಾರ್ಯ ಧ್ಯಕ್ಷ ಆನಂದ ಕುಲಾಲ್. ಉಪ ಕಾರ್ಯಧ್ಯಕ್ಷ ಅರುಣ್ ಬಂಗೇರ. ಕಾರ್ಯದರ್ಶಿ ಸತೀಶ್ ಬಂಗೇರ . ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಆಶಾಲತಾ ಮೂಲ್ಯ.

ಕಾರ್ಯದರ್ಶಿ ಆರತಿ ಸಾಲಿಯಾನ್. ಜೊತೆ ಕಾರ್ಯದರ್ಶಿ ಪ್ರಮೀಳಾ ಬಂಗೇರ ಮತ್ತಿತರ ಪದಾಧಿಕಾರಿಗಳು ಸದಸ್ಯರು ಪಾಲ್ಗೊಂಡಿದ್ದರು



Related posts

ನೊಂದವರ ಬಾಳಿಗೆ ಬೆಳಕಾಗುವ ‘ನೆರವು’: 4 ಸಾವಿರ ಕುಟುಂಬಗಳಿಗೆ ₹9.5 ಕೋಟಿ ಆರ್ಥಿಕ ಸಹಾಯ ಹಸ್ತ

Mumbai News Desk

ರಾಷ್ಟ್ರೀಯ ಫುಟ್ಬಾಲ್ ಆಟಗಾರ ರವೀಂದ್ರನಾಥ ಶೆಟ್ಟಿ ನಿಧನ

Mumbai News Desk

ಬಿಲ್ಲವರ ಅಸೋಸಿಯೇಷನ್ ಮುಂಬೈ ಡೊಂಬಿವಲಿ ಸ್ಥಳೀಯ ಕಚೇರಿಯಲ್ಲಿ ದಿವಂಗತ ಐತಪ್ಪ ಸುವರ್ಣ ರಿಗೆ ನುಡಿ ನಮನ

Mumbai News Desk

ಕೋಡಿಕಲ್: ವಿಶ್ವ ಭಾರತಿ ಫ್ರೆಂಡ್ಸ್ ಸರ್ಕಲ್ (ರಿ) ನೂತನ ಅಧ್ಯಕ್ಷರಾಗಿ ಶೀನ ನಾಯ್ಕ್ ಪರ್ಪುಲಾಡಿ ಆಯ್ಕೆ

Mumbai News Desk

ಉಡುಪಿ : ಉದ್ಯಮಿ, ರೌಡಿ ಶೀಟರ್ ಸೈಪುದ್ದೀನ್ ಭೀಕರ ಹತ್ಯೆ

Mumbai News Desk

ಲಂಡನ್ ವಿಶ್ವ ಶೃಂಗಸಭೆಯಲ್ಲಿ ಐಕಾನಿಕ್ ಮಹಿಳಾ ವಿಶ್ವ ನಾಯಕಿ” ಪ್ರಶಸ್ತಿಗೆ ಡಾ. ವಿಜೇತಾ ಎಸ್. ಶೆಟ್ಟಿಆಯ್ಕೆ.

Mumbai News Desk