July 22, 2026
Mumbai News Kannada
ಸುದ್ದಿ

ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ನಗರಕ್ಕೆ ಭವ್ಯ ಸ್ವಾಗತ







ದಿನೇಶ್ ಕುಲಾಲ್ 

ಮುಂಬಯಿ ಜು 17.   ಶ್ರೀ ಕ್ಷೇತ್ರ  ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು  ಜುಲೈ 17 ರಿಂದ. ಜುಲೈ 29 ರ ವರೆಗೆ ಮುಂಬಯಿಯ ವಿವಿಧ ಉಪನಗರಗಳಲ್ಲಿ ಹಾಗೂ ನವಿಮುಂಬಯಿ ಮತ್ತು ಥಾಣೆಯಲ್ಲಿ ವಿವಿಧ ಧಾರ್ಮಿಕ  ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದಕ್ಕಾಗಿ ಇಂದು ಜುಲೈ 17ರಂದು ಮುಂಬೈ ನಗರಕ್ಕೆ ಆಗಮಿಸಿದ್ದರು ಅವರನ್ನು ಭಕ್ತರು ಭಕ್ತಿ ಪೂರ್ವಕವಾಗಿ ಮುಂಬೈ ಮಹಾನಗರದ ವಿಮಾನ ನಿಲ್ದಾನದಲ್ಲಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ   ಸ್ವಾದಿ ಶ್ರೀ ಮಾತಾನಂದಮಯಿ ಅವರು ಉಪಸ್ಥಿತರಿದ್ದರು

ಸ್ವಾಮೀಜಿಯವರನ್ನು. ಶ್ರೀ ಗುರುದೇವ ಸೇವಾ ಬಳಗ ಮುಂಬಯಿ ಮಹಾರಾಷ್ಟ್ರ ಘಟಕ, ಅಧ್ಯಕ್ಷರು ಪದಾಧಿಕಾರಿಗಳು,ಒಡಿಯೂರು ಶ್ರೀ ವಜ್ರಮಾತ ಮಹಿಳಾ ವಿಕಾಸ ಕೇಂದ್ರ ಮುಂಬಯಿ ಪದಾಧಿಕಾರಿಗಳು ಸದಸ್ಯರು ಹಾಗೂ  ಒಡಿಯೂರು ಶ್ರೀ ಯುವ ಸೇವಾ ಬಳಗ ಸದಸ್ಯರು ತುಳಸಿ ಹಾರವನ್ನು  ಸಮರ್ಪಿಸಿ ನಗರಕ್ಕೆ ಸ್ವಾಗತಿಸಿದರು

   ಜುಲೈ 18ರಂದು ನವಿ ಮುಂಬಯಿಯ ಜುಹಿ ನಗರ,   ಸಾನ್ಪಾಡ ದಲ್ಲಿರುವ ಬಿಲ್ಲವರ ಅಸೋಸಿಯೇಷನ್ ಇವರ ನೂತನ ಸಮುದಾಯ ಭವನಕ್ಕೆ ಭೇಟಿ ನೀಡಿ ಸಂಜೆ 7ರಿಂದ ಸಾರ್ವಜನಿಕ ಆಶೀರ್ವಚನ ಕಾರ್ಯಕ್ರಮವುಜರಗಲಿದೆ. ಜುಲೈ 19ರಂದು ದಾಮೋದರ್ ಎಸ್  ಶೆಟ್ಟಿ, ಖರ್ ರ್ಗರ್ ನವಿ ಮುಂಬಯಿ ಇಲ್ಲಿ ಸಾರ್ವಜನಿಕ ದರ್ಶನ, ಹಾಗೂ ಜುಲೈ 20ರಂದು ಚೆಂಬೂರು ಛಡ್ ನಗರ್, ಇಂಡಿಯನ್ ಒಯಿಲ್ ನಗರ್ ನಲ್ಲಿರುವ ನ್ಯಾಯವಾದಿ ಕೆಪಿ ಪ್ರಕಾಶ್ ಎಲ್ ಶೆಟ್ಟಿ ಅವರ ಮನೆಯಲ್ಲಿ ಸಾರ್ವಜನಿಕ ದರ್ಶನ ಕಾರ್ಯಕ್ರಮ ನಡೆಯಲಿದೆ. ಜುಲೈ 21ರಂದು ರವಿವಾರ ಸಂಜೆ 4:00ಯಿಂದ ಬಂಟರ ಭವನದಲ್ಲಿ ಗುರುಪೂರ್ಣಿಮೆಯ ಅಂಗವಾಗಿ ಗುರುದೇವ ಸೇವಾ ಬಳಗ ಮುಂಬಯಿ ಘಟಕದಿಂದ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.



Related posts

ಸಚಿವೆ ಲಕ್ಶ್ಮೀ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ : ವಿಧಾನ ಪರಿಷತ್ ಸದಸ್ಯ ಸಿ ಟಿ ರವಿ ಬಂಧನ

Mumbai News Desk

ವಿದ್ಯಾದಾಯಿನಿ ಹಿರಿಯ ಪ್ರಾಥಮಿಕ ಶಾಲೆ, ಕುತ್ಯಾರು  ಶತ ಸಂವತ್ಸರೋತ್ಸವ

Mumbai News Desk

ಯಶ್ ಪಾಲ್ ಸುವರ್ಣ ಅಧ್ಯಕ್ಷತೆಯ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್‍ಗೆ ಸತತ 8ನೇ ಬಾರಿಗೆ ಸಾಧನಾ ಪ್ರಶಸ್ತಿ.

Mumbai News Desk

ಮೊಗವೀರ ವ್ಯವಸ್ಥಾಪಕ ಮಂಡಳಿ ಮಾಜಿ ಅಧ್ಯಕ್ಷ, ಅಪರೂಪದ ಸಾಧಕ ಹೊಸಬೆಟ್ಟು ಕೆ. ಆರ್. ಪುತ್ರನ್ ನಿಧನ

Mumbai News Desk

ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ, 20ಕ್ಕೂ ಹೆಚ್ಚು ಜನರಿಗೆ ಗಾಯ, 11 ಸಾವು

Mumbai News Desk

ಕನ್ನಡ ಚಿತ್ರರಂಗದ ಹಿರಿಯ ಹಾಸ್ಯ ನಟ ಎಂ.ಎಸ್‌ ಉಮೇಶ್‌ ವಿಧಿವಶ

Mumbai News Desk