July 23, 2026
Mumbai News Kannada
ಮುಂಬಯಿ

ಕಲಾತಂತ್ರ ಪ್ರೊಡಕ್ಷನ್ ಲೋಕಾರ್ಪಣೆ : ಜು. 28ರಂದು ‘ತುಡರ್’ ತುಳು ಚಿತ್ರ ಬಿಡುಗಡೆ.







ಡೊಂಬಿವಲಿಯ ಕಲಾ ಪೋಷಕರೂ, ಕಲಾ ಪ್ರೇಮಿಗಳು ಆದ ಸಂತೋಷ್ ಶೆಟ್ಟಿ, ರಾಜೇಶ್ ಕೋಟ್ಯಾನ್, ಚಿನ್ಮಯ ಸಾಲ್ಯಾನ್ ಮತ್ತು ಭರತ್ ಶೆಟ್ಟಿ ಅವರು ಹುಟ್ಟುಹಾಕಿದ ನೂತನ ಕಲಾ ಸಂಸ್ಥೆ ಕಲಾತಂತ್ರ ಪ್ರೊಡಕ್ಷನ್, ಇದರ ಉದ್ಘಾಟನಾ ಸಮಾರಂಭ ಜುಲೈ 12ಕ್ಕೆ ಡೊಂಬಿವಲಿ ಪಶ್ಚಿಮ ಶ್ರೀ ಜಗದಂಬಾ ಮಂದಿರದಲ್ಲಿ ಗಣ್ಯರ ಸಮ್ಮುಖದಲ್ಲಿ ಜರಗಿತು.
ಶ್ರೀ ಜಗದಂಬಾ ಮಂದಿರದ ಅಧ್ಯಕ್ಷರಾದ ದಿವಾಕರ್ ರೈ ದೀಪ ಪ್ರಜ್ವಲಿಸಿ ನೂತನ ಸಂಸ್ಥೆಯನ್ನು ಲೋಕಾರ್ಪಣಿಗೊಳಿಸಿದರು.


ಶ್ರೀ ಜಗಧಂಬಾ ಮಂದಿರದ ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ವಿಜಯ ಶೆಟ್ಟಿ ಸಜೀಪಗುತ್ತು, ಕಲಾ ಪೋಷಕ ದಿನೇಶ್ ಪೂಜಾರಿ, ಬಿಜೆಪಿ ದಕ್ಷಿಣ ಘಟಕದ ಅಧ್ಯಕ್ಷ ರತನ್ ಪೂಜಾರಿ, ಶ್ರೀ ಜಗದಂಬಾ ಮಂದಿರದ ಪ್ರಧಾನ ಅರ್ಚಕರಾದ ರವೀಂದ್ರ ಭಟ್, ಶ್ರೀ ಜಗದಂಬಾ ಮಂದಿರದ ಮಾಜಿ ಅಧ್ಯಕ್ಷ ಚಂದ್ರಹಾಸ್ ರೈ ಉಪಸ್ಥಿತರಿದ್ದು ನೂತನ ಸಂಸ್ಥೆಗೆ ಶುಭ ಕೋರಿದರು.
ಶಿಲ್ಪ ಸಂತೋಷ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಚಿತ್ರದ ನಿರ್ದೇಶಕ ತೇಜಸ್ ಪೂಜಾರಿ ಉಪಸ್ಥಿತರಿದ್ದರು.
ಸಂಸ್ಥೆಯ ಪಾಲುದಾರರಾದ ಸಂತೋಷ್ ಶೆಟ್ಟಿ, ರಾಜೇಶ್ ಕೋಟ್ಯಾನ್, ಚಿನ್ಮಯ್ ಸಾಲ್ಯಾನ್, ಮತ್ತು ಭರತ್ ಶೆಟ್ಟಿ, ಸೇರಿದ್ದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಸಂಸ್ಥೆಯ ಸಂಯೋಜನೆಯಲ್ಲಿ ಜುಲೈ 28ರಂದು ಬೆಳ್ಳಿಗೆ 8.30 ಗಂಟೆಗೆ, ಡೊಂಬಿವಲಿಯ ಮಧುಬನ್ ಟಾಕೀಸ್ ನಲ್ಲಿ ನೂತನ ತುಳು ಚಿತ್ರ ‘ತುಡರ್’ ಬಿಡುಗಡೆಯಾಗಲಿದ್ದು, ತುಳು ಚಿತ್ರ ಪ್ರೇಮಿಗಳು, ತುಳುವರು ಹೆಚ್ಚಿನ ಸಂಖ್ಯೆಯಲ್ಲಿ, ಚಿತ್ರವನ್ನು ವೀಕ್ಷಿಸಿ ಪ್ರೋತ್ಸಾಹ ನೀಡುವಂತ್ತೆ, ಕಲಾತಂತ್ರ ಪ್ರೊಡಕ್ಷನ್ ನ ಸಂತೋಷ್ ಶೆಟ್ಟಿ, ರಾಜೇಶ್ ಕೋಟ್ಯಾನ್, ಚಿನ್ಮಯ್ ಸಾಲ್ಯಾನ್, ಭರತ್ ಶೆಟ್ಟಿ ವಿನಂತಿಸಿಕೊಂಡಿದ್ದಾರೆ.



Related posts

ಬಜೆ ಮೊಗವೀರ ಸುವರ್ಣ ಮೂಲಸ್ಥಾನ ಮುಂಬಾಯಿ ಶಾಖೆ: ಶತಮಾನೋತ್ಸವ ಮನವಿ ಪತ್ರ ಬಿಡುಗಡೆ

Mumbai News Desk

ಶ್ರೀ ನಿತ್ಯಾನಂದ ಸೇವಾ ಸಂಸ್ಥೆ ಮೀರಾಭಾಯಂದರ್-ಗುರುಪೂರ್ಣಿಮೆ ಆಚರಣೆ.

Mumbai News Desk

ತುಳು ಸಂಘ ಬೊರಿವಲಿ ವತಿಯಿಂದ ಅರಸಿನ ಕುಂಕುಮ ಕಾರ್ಯಕ್ರಮ

Mumbai News Desk

ಸಿರಿನಾಡ ವೆಲ್ಫೇರ್ ಅಸೋಸಿಯೇಷನ್ ಶೈಕ್ಷಣಿಕ ಕಾರ್ಯಕ್ರಮ: ಜನಹಿತ ಯೋಜನೆಗಳೊಂದಿಗೆ ರಜತ ಮಹೋತ್ಸವ ಆಚರಣೆಗೆ ಸಂಕಲ್ಪ

Mumbai News Desk

ವಿದ್ಯಾವಿಹಾರ್ ಪಶ್ಚಿಮದ ಶ್ರೀ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಪಾದುಕಾ ಪ್ರದಾನ, ಪಂಚವಟಿ ತಾಳಮದ್ದಳೆ ಹಾಗೂ ಸನ್ಮಾನ

Mumbai News Desk

ಮೀರಾ- ಬಾಯಂದರ್ ನ  ರೈ  ಸುಮತಿ  ಎಜ್ಯುಕೇಶನ್ ಟ್ರಸ್ಟ್(ರಿ)   ನ ಸೈಂಟ್  ಆಗ್ನೆಸ್ ಇಂಗ್ಲಿಷ್ ಹೈ ಸ್ಕೂಲ್ ಗೆ  100% ಫಲಿತಾಂಶ.

Mumbai News Desk