
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಆರೂರು ಎಂಬ ಪುಟ್ಟ ಗ್ರಾಮದಲ್ಲಿ ಯುವ ಸಮುದಾಯವನ್ನು ಒಂದೇ ಕಡೆ ಸೇರಿಸಿ ಪ್ರೋತ್ಸಾಹಿಸುವ ಪ್ರಸಿದ್ಧ ಸಾಂಸ್ಕೃತಿಕ ಸಂಘಟನೆಯಾದ ಸ್ಪಂದನ ಯುವ ವೃಂದ (ರಿ) ಆರೂರು ಇದರ ದಶಮಾನೋತ್ಸವ ಪ್ರಯುಕ್ತ ನಡೆಯುವ ಭರ್ಜರಿ ಕಾರ್ಯಕ್ರಮ ಇದೇ ಮೇ ತಿಂಗಳ 3 ರ ಭಾನುವಾರದಂದು ಶಾರದಾ ಪ್ರೌಢ ಶಾಲಾ ಮುಂದಿನ ದೊಡ್ಡ ಮೈದಾನದಲ್ಲಿ ಅತ್ಯಂತ ವೈಭವದಿಂದ ಊರ ಪರವೂರ ಸಂಪೂರ್ಣ ಸಹಕಾರದಿಂದ ಜರುಗಲಿರುವುದು.
ಅಂದು ಸಂಜೆ 5:30ಕ್ಕೆ ಸರಿಯಾಗಿ ಹಳ್ಳಿಯೂರಿನ ಅಪ್ಪಟ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿಂದ ನಡೆಯಲಿರುವುದು. ಸಂಜೆ 6 ಗಂಟೆಗೆ ಗಾನ ಗಂಧರ್ವ ಜನ್ಸಾಲೆ ರಾಘವೇಂದ್ರ ಆಚಾರ್ಯ ಇವರ ನೇತೃತ್ವದಲ್ಲಿ ಯಕ್ಷರಂಗದ ನಾಟ್ಯ ಮಯೂರ ಹಾಗೂ ಯಕ್ಷರಂಗದ ಮಿನುಗುತಾರೆ ಆರೂರಿನ ಹೆಮ್ಮೆಯ ಪುತ್ರ ಸುಧೀರ್ ಉಪ್ಪೂರು ಮತ್ತು ಚಿಟ್ಟಾಣಿ ಕಾರ್ತಿಕ್ ಇವರುಗಳ ವಿಶೇಷ ನಾಟ್ಯ ವೈಭವ ನಡೆಯಲಿದೆ.
ಸಂದೇಶ ಮತ್ತು ಕಾರ್ಯಕ್ರಮದ ಅಂಗವಾಗಿ ಸಂಜೆ 8:30ಕ್ಕೆ ಸರಿಯಾಗಿ ಸಭಾ ಕಾರ್ಯಕ್ರಮವು ಅದ್ದೂರಿಯಾಗಿ ಜರುಗುವ ನಿರೀಕ್ಷೆಯಿದೆ. ಸ್ಪಂದನ ದಶೋತ್ಸವದ ಸಂಭ್ರಮದ ಸವಿನೆನಪಿಗಾಗಿ ಈ ವರುಷದ ಸ್ಪಂದನ ಸುಭಗ ಪ್ರಶಸ್ತಿ ಸಭಾ ಕಾರ್ಯಕ್ರಮದಲ್ಲಿ ನಡೆಯಲಿದೆ. ವಿಶೇಷವಾಗಿ ಈ ಬಾರಿಯ ಪ್ರತಿಷ್ಠಿತ ಆರೂರು ಸ್ಪಂದನ ಸಾಧಕ ಪ್ರಶಸ್ತಿಯನ್ನು ಆರೂರಿನ ಮಣ್ಣಿನ ಮಗ ಶಿಕ್ಷಣ, ಕ್ರೀಡೆ, ಬ್ಯಾಂಕಿಂಗ್ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿ ಆರೂರಿನ ಹೆಸರನ್ನು ಉತ್ತುಂಗ ಶಿಖರಕ್ಕೇರಿಸಿದ ರಿಯಾಲ್ಟಿ ಕ್ಷೇತ್ರದಲ್ಲಿ ಹೆಸರು ಮಾಡಿರುವ ಆರೂರು ತಿಮ್ಮಪ್ಪ ಶೆಟ್ಟಿ ಇವರಿಗೆ ನೀಡಿ ಗೌರವಿಸಲಾಗುವುದು. ಅಂದು ಮುಂಜಾನೆ ಹೊತ್ತು ಆರೂರು ಕಲಬೆಟ್ಟು ಹಿಡಿ ತಿಮ್ಮಪ್ಪ ಮೇಸ್ತ್ರಿ ಇವರ ನೇತೃತ್ವದಲ್ಲಿ ಎಲ್ಲಾ ಕ್ಷೇತ್ರದಲ್ಲೂ ಅಪ್ರತಿಮ ಕೊಡುಗೆಯನ್ನು ನೀಡುತ್ತಿರುವ ಪಡವು ನಾಟ್ಯ ಪ್ರಶಸ್ತಿ ಆರೂರು ಮಣ್ಣಿಗೆ ಸಲ್ಲುವ ಗೌರವವಾಗಿದೆ.
ಅಲ್ಲದೆ ಈ ಸಂಘಟನೆಯು ವಿವಿಧ ಕ್ಷೇತ್ರದಲ್ಲಿ ಗರಿಷ್ಠ ಸಾಧನೆ ಮಾಡಿದ ವಿಶೇಷ ಸಾಧಕರು ಹಾಗೂ ಆರೂರಿನ ಮಣ್ಣಿನ ಮಕ್ಕಳನ್ನು ಗುರುತಿಸಿ ಸನ್ಮಾನಿಸಲಿದೆ.
ಡಾಕ್ಟರ್ ಶ್ರೀನಿವಾಸ್ ರಾವ್ – ವೈದ್ಯಕೀಯ ಕ್ಷೇತ್ರ
ಸುರೇಶ್ ಶೆಟ್ಟಿ – LLB ನ್ಯಾಯವಾದಿಗಳು
ವಸಂತ ನಾಯ್ಕ – ಬಿ.ಎಸ್.ಎನ್.ಎಲ್ ಅಧಿಕಾರಿ
ಶ್ರೀ ಕೆ. ನಾರಾಯಣ ಭಟ್ – ನಿವೃತ್ತ ಶಿಕ್ಷಕರು
ಶ್ರೀಮತಿ ಅನುಷಾ ನಿಶ್ಮ – ಭರತನಾಟ್ಯ ಕಲಾವಿದೆ
ಶ್ರೀ ವಾಸುದೇವ ಆಚಾರ್ಯ – ಕೆತ್ತನೆ ಶಿಲ್ಪ ಕಲಾವಿದರು
ಶ್ರೀಮತಿ ರುಕ್ಮಿಣಿ ಹಂದಿ – ಪಂಚಾಯತ್ ಕ್ಷೇತ್ರ
ಪ್ರಗತಿ ನಾಯ್ಕ್ ಮತ್ತು ಪ್ರಾರ್ಥನಾ ಐತಾಳ್ – ಚೆಸ್ ಸಾಧಕರು
ಶ್ರೇಯಸ್ ಮತ್ತು ಮೋಹಿತ್ – ಕ್ರೀಡಾಪಟುಗಳು
ಅದರ ನಂತರ ರಾತ್ರಿ 9:30 ರಿಂದ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ನಿರ್ದೇಶನದ ತುಳು ಹಾಸ್ಯಮಯ ನಾಟಕ ಇನ್ನನೆ ಕಥೆ ಪ್ರದರ್ಶನ ಗೊಳ್ಳಲಿದೆ.
ಸ್ಪಂದನ ಯುವ ವೃಂದದ ಈ ಸಂಭ್ರಮ ಸವಿನೆನಪಿನ ಕಾರ್ಯಕ್ರಮಕ್ಕೆ ತಾವೆಲ್ಲರೂ ಕುಟುಂಬ ಸಮೇತರಾಗಿ ಬಂದು ಕಾರ್ಯಕ್ರಮಕ್ಕೆ ಪ್ರೋತ್ಸಾಹಿಸಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತೇವೆ. ಕಾರ್ಯಕ್ರಮವು ಉತ್ತಮವಾಗಿ ಮೂಡಿ ಬರಲೆಂದು ಹಾರೈಸಿ. ಈ ಕಾರ್ಯಕ್ರಮಕ್ಕೆ ತಮ್ಮೆಲ್ಲರ ಆಗಮನವನ್ನು ಬಯಸುವವರು: ಸ್ಪಂದನ ಯುವ ವೃಂದ ಆರೂರು, ಗೌರವಾನ್ವಿತ ಅಧ್ಯಕ್ಷರು, ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರು.
ಎಲ್ಲರಿಗೂ ಹಾರ್ದಿಕ ಸ್ವಾಗತ. ಇದೆ ಡಿಸೆಂಬರ್ 31 ಭಾನುವಾರ ಸಂಜೆ ಆರೂರು ಶಾಲೆ ಬನ್ನಿ ಆನಂದಿಸಿ.
ಸಹಕಾರ: ಯುವಶಕ್ತಿ ಆರೂರು
ಲೇಖನ:
ಆರೂರು ಸೀತಾರಾಮ ಶೆಟ್ಟಿ ಡೊಂಬಿವಲಿ ಮುಂಬೈ.




