September 6, 2026
Mumbai News Kannada
ಪ್ರಕಟಣೆ

ಕುಲಾಲ ಸಂಘ ಮುಂಬಯಿ, ಸಿ.ಎಸ್.ಟಿ. – ಮುಲುಂಡ್ – ಮಾನ್ ಖುರ್ಡ್ ಸಮಿತಿ, ಡಿ. 1 ರಂದು ವಾರ್ಷಿಕ ಸ್ನೇಹ ಸಮ್ಮಿಲನ, ಕಿರು ನಾಟಕ ಸಾಧಕರಿಗೆ ಸನ್ಮಾನ,






ಕುಲಾಲ ಸಂಘ ಮುಂಬಯಿ, ಸಿ.ಎಸ್.ಟಿ. – ಮುಲುಂಡ್ – ಮಾನ್ ಖುರ್ಡ್ ಸ್ಥಳೀಯ ಸಮಿತಿಯ ವಾರ್ಷಿಕ ಸ್ನೇಹ ಸಮ್ಮಿಲನವು ಡಿ. 1 ರಂದು ಆದಿತ್ಯವಾರ ಬೆಳಿಗ್ಗೆ 9 ರಿಂದ ಪ್ರಾಚಾರ್ಯ ಬಿ. ಎನ್. ವೈದ್ಯ ಸಭಾಗೃಹ, ಕಿಂಗ್ ಜಾರ್ಜ್ ಹೈಸ್ಕೂಲ್, ಹಿಂದೂ ಕಾಲೋನಿ, ದಾದರ್ ಪೂರ್ವ ಮುಂಬಯಿ ಇಲ್ಲಿ ಕುಲಾಲ ಸಂಘ ಮುಂಬಯಿಯ ಅಧ್ಯಕ್ಷರಾದ ರಘು ಎ ಮೂಲ್ಯ ಪಾದೆಬೆಟ್ಟು ಇವರ ಅಧ್ಯಕ್ಷತೆಯಲ್ಲಿ, ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷರಾದ ಸಂಜೀವ ಎನ್. ಬಂಗೇರ ಇವರ ಉಪಸ್ಥಿತಿಯಲ್ಲಿ ನಡೆಯಲಿದೆ.

ಬೆಳಿಗ್ಗೆ 9 ರಿಂದ ಭಜನೆ, ನೃತ್ಯ ಕಾರ್ಯಕ್ರಮ ನಡೆಯಲಿದೆ. ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಜ್ಯೋತಿ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ಗಿರೀಶ್ ಬಿ. ಸಾಲಿಯಾನ್, ಕುಲಾಲ ಭವನ ಸಮಿತಿಯ ಉಪ ಕಾರ್ಯಾಧ್ಯಕ್ಷ, ಉದ್ಯಮಿ, ದಾನಿ ಸುನಿಲ್ ಆರ್ ಸಾಲಿಯಾನ್,  ಪುಣೆಯ ಉದ್ಯಮಿ ಎಸ್. ಅರ್. ಬಂಜನ್,  ಅಂಬರನಾಥ್ ನ್ ಉಧ್ಯಮಿ ಜಗದೀಶ್ ಆರ್. ಬಂಜನ್, ಬೆಳ್ತಂಗಡಿ ಕುಂಭಶ್ರೀ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ಗಿರೀಶ್ ಕೆ. ಎಚ್.,  ಪುಣೆಯ ಉದ್ಯಮಿ ಮಂಜುನಾಥ್  ಕುಲಾಲ್, ಫ಼್ಲೆಕ್ಸೋನ್  ಪೋಲಿಮರ್ ಪ್ರೊಡಕ್ಟ್ ನ ಮಾಲಕ ನಟೇಶ್ ಕುಮಾರ್ ಬಂಗೇರ ಪೊವಾಯಿ, ಕೃಷ್ನ ಜ್ಯುಸ್ ಸೆಂಟರಿನ ಕೃಷ್ಣ ಬಿ. ಹಂಡ,   ಪೋರ್ಟ್ ಪ್ರಿಂಟ್ ಆರ್ಟ್ ಕಾರ್ಪೊರೇಷನ್ ಮಾಲಕ ಜೈರಾಜ್ ಸಾಲ್ಯಾನ್, ಮುಲುಂಡ್ ಕಾರ್ತಿಕ್ ಜ್ಯುಸ್ ಸೆಂಟರಿನ  ಸುಂದರ ಕುಲಾಲ್, ಸಾಯನ್ ಸದ್ಗುರು ಜ್ಯೂಸ್ ಸೆಂಟರ್ ನ  ಪ್ರವೀಣ್ ಮೂಲ್ಯ, ಡಾ. ಸುರೇಖಾ ಕುಲಾಲ್, ರೇವತಿ ಪರಮೇಶ್ವರ್ ಆಗಮಿಸಲಿರುವರು.

   ಸಮಾರಂಭದಲ್ಲಿ ಕುಲಾಲ ಸಂಘ ಮುಂಬಯಿಯ ಉಪಾಧ್ಯಕ್ಷ ಡಿ ಐ  ಮೂಲ್ಯ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಸಮಿತಿಯ ಕಾರ್ಯಾಧ್ಯಕ್ಷ  ಸುಂದರ ಎನ್ ಮೂಲ್ಯ ಸಯನ್, ಸ್ಥಳೀಯ ಸಮಿತಿಯ ಮಾಜಿ ಕಾರ್ಯದರ್ಶಿ ರಾಜೇಶ್ ಶೇಷಪ್ಪ ಬಂಜನ್ ಇವರನ್ನು ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನಿಸಲಾಗುವುದು. 

   ಸಂಜೆಯ ತನಕ ನಡೆಯಲಿರುವ ಈ ಸಮಾರಂಭದಲ್ಲಿ ಮನೋರಂಜನಾ ಕಾರ್ಯಕ್ರಮದ ಅಂಗವಾಗಿ ಸಂಘದ ಸದಸ್ಯರಿಂದ ಮತ್ತು ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಮತ್ತು ಅರುಣ್ ಚಂದ್ರ ಬಿಸಿ ರೋಡ್ ರಚಿಸಿದ ಧನಂಜಯ ಮೂಳೂರ್ ನಿರ್ದೇಶನದ “ಎನ್ನ ಬೊಡೆದಿ”  ತುಳು ಸ್ಕಿಟ್ ಪ್ರದರ್ಶನವಿದೆ.  ಆನಂತರ ಸಂಜೆ ವಿಶೇಷ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ.

ಈ ಎಲ್ಲಾ ಕಾರ್ಯಕ್ರಮದಲ್ಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರೋತ್ಸಾಹಿಸಬೇಕಾಗಿ ಕುಲಾಲ ಸಂಘ ಮುಂಬಯಿಯ ಪರವಾಗಿ ಗೌರವ ಅಧ್ಯಕ್ಷ ಪಿ. ದೇವದಾಸ್ ಎಲ್ ಕುಲಾಲ್,  ಗೌ. ಪ್ರಧಾನ ಕಾರ್ಯದರ್ಶಿ ಕರುಣಾಕರ ಬಿ. ಸಾಲ್ಯಾನ್, ಕೋಶಾಧಿಕಾರಿ ಜಯ ಎಸ್ ಅಂಚನ್,  ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಚಿತ್ರ ಬಂಜನ್, ಸಿ.ಎಸ್.ಟಿ. – ಮುಲುಂಡ್ – ಮಾನ್ ಖುರ್ಡ್  ಸಮಿತಿಯ  ಗೌ.  ಕಾರ್ಯದರ್ಶಿ ಸೂರಜ್ ಎಸ್ ಹಂಡೇಲ್,  ಉಪಾಧ್ಯಕ್ಷ ಉದಯ ಅತ್ತಾವರ್,  ಕೋಶಾಧಿಕಾರಿ ರತ್ನಾಕರ ಎಂ.ಬಂಜನ್, ಜೊತೆ ಕಾರ್ಯದರ್ಶಿ ಚಂದ್ರಶೇಖರ್ ಹಂಡ ಮತ್ತು ವಿಶ್ವನಾಥ್ ಮೂಲ್ಯ, ಜೊತೆ ಕೋಶಾಧಿಕಾರಿ ದಯಾನಂದ ಮೂಲ್ಯ, ಕ್ರೀಡಾ ಕಾರ್ಯದರ್ಶಿ ಮಹೇಶ್ ಸಾಲಿಯಾನ್,  ಕಾರ್ಯಕಾರಿ ಸಮಿತಿಯ ಸದಸ್ಯರಾದ ಸುನಿಲ್ ಕೆ ಕುಲಾಲ್, ಪ್ರವೀಣ್ ಮೂಲ್ಯ, ಕೃಷ್ಣಾ ಬಿ ಹಂಡ ,, ಸುಂದರ್ ಎನ್ ಮೂಲ್ಯ ಸಾಂಸ್ಕೃತಿಕ ಸಮಿತಿ ಪ್ರಮುಖರಾದ ನೈನ ಎನ್ ಬಂಗೇರ, ಕವಿತಾ ಸಿ. ಹಂಡ, ಮಲ್ಲಿಕಾ ಎಸ್. ಮೂಲ್ಯ, ಬಿನೀತ್ ಜಿ ಸಾಲ್ಯಾನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮಲ್ಲಿಕಾ ಎಸ್ ಮೂಲ್ಯ,  ಉಪಕಾರ್ಯಧ್ಯಕ್ಷೆ ಹರಿಣಾಕ್ಷಿ ಜಿ ಬಂಗೇರ,  ಮಹಿಳಾ ಕಾರ್ಯದರ್ಶಿ ನೈನ ಎನ್ ಬಂಗೇರ, ಜೊತೆ ಕಾರ್ಯದರ್ಶಿಗಳಾದ ಮಂಜುಳಾ ಎಂ. ಸಾಲ್ಯಾನ್ ಮತ್ತು ಕುಶಲ ಬಂಗೇರ, ಕೋಶಾಧಿಕಾರಿ ಶೈಲಿಕಾ ಯು ಅತ್ತಾವರ್ ಜೊತೆ ಕೋಶಾಧಿಕಾರಿಗಳಾದ ಆಶಾಲತಾ ಕೆ ಹಂಡಾ ಮತ್ತು ರೇವತಿ ಬಂಗೇರ, ಸಲಹಾ ಸಮಿತಿಯ ಸದಸ್ಯರು, ಮಹಿಳಾ ವಿಭಾಗ ಮತ್ತು ಯುವ ವಿಭಾಗದ ಎಲ್ಲಾ ಸದಸ್ಯರು, ಗುರುವಂದನಾ ಭಜನಾ ಮಂಡಳಿಯ ಸದಸ್ಯರು ವಿನಂತಿಸಿದ್ದಾರೆ.

.

   

   



Related posts

ಜ. 31ರಿಂದ ಹೆಜಮಾಡಿಯಲ್ಲಿ ಮಹಿಳಾ ಕ್ರಿಕೆಟ್ ಹಬ್ಬ:ಪಡುಬಿದ್ರಿ ಯುವವಾಹಿನಿಯಿಂದ ಬಿಲ್ಲವ ಮಹಿಳಾ ಪ್ರೀಮಿಯರ್ ಲೀಗ್

Mumbai News Desk

ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಸಾವರ್ಕರ್ ನಗರ್ -ಥಾಣೆ: ಅಕ್ಟೋಬರ್ 17ರಂದು ಮಾಸಿಕ ಸಂಕ್ರಮಣ ಪೂಜೆ

Mumbai News Desk

ಜ. 12ಕ್ಕೆ ಎನ್. ಪಿ. ಸುವರ್ಣ – ಪ್ರಭಾ ಸುವರ್ಣ ಅವರ ಅಭಿನಂದನಾ ಸಮಾರಂಭ.

Mumbai News Desk

ಎ. 13ರಂದು ಮಾಡೂರು ಶ್ರೀ ಪಾಡಾಂಗರ ಭಗವತಿ ಕ್ಷೇತ್ರದಲ್ಲಿ ಕುಮಾರ್ ಬಂಗೇರ ಮತ್ತು ಮನೆಯವರಿಂದ ಹರಕೆಯ ಕೋಲ

Mumbai News Desk

ಫೆ.1ರಂದು ಜಗಜ್ಯೋತಿ ಕಲಾವೃಂದದ 39ನೇ ವಾರ್ಷಿಕೋತ್ಸವ; ಪ್ರಶಸ್ತಿ ಪ್ರದಾನ

Mumbai News Desk

ಡಿ.9 ರಂದು ಶ್ರೀ ಸದ್ಗುರು ಶನೇಶ್ವರ ಸೇವಾ ಸಮಿತಿ ಕಾಂದಿವಲ ಇದರ ವತಿಯಿಂದ 49ನೇ ವಾರ್ಷಿಕ ಶ್ರೀ ಶನೀಶ್ವರ ಗ್ರಂಥಪಾರಾಯಣ ಮಹೋತ್ಸವ 

Mumbai News Desk