July 23, 2026
Mumbai News Kannada
ಮುಂಬಯಿ

ಭಾರತ್ ಬ್ಯಾಂಕ್‌ನ ಗೋರೆಗಾಂವ್ ಪಶ್ಚಿಮ ಶಾಖೆಯಲ್ಲಿ 47ನೇ ಸಂಸ್ಥಾಪನಾ ದಿನಾಚರಣೆ








​ಮುಂಬಯಿ: ಭಾರತ್ ಬ್ಯಾಂಕ್ ತನ್ನ 47ನೇ ಸಂಸ್ಥಾಪನಾ ದಿನವನ್ನು ಗೋರೆಗಾಂವ್ ಪಶ್ಚಿಮ ಶಾಖೆಯಲ್ಲಿ ಅರ್ಥಪೂರ್ಣವಾಗಿ ಆಚರಿಸಿತು. ಈ ಸಂದರ್ಭದಲ್ಲಿ ಬ್ಯಾಂಕಿನ ಹಿರಿಯ ಗ್ರಾಹಕರು ಹಾಗೂ ಆಡಳಿತ ಮಂಡಳಿಯ ಸದಸ್ಯರು ಭಾಗವಹಿಸಿದ್ದರು.
​ಕಾರ್ಯಕ್ರಮದ ಆರಂಭದಲ್ಲಿ, ಕೇಕ್ ಕತ್ತರಿಸುವ ಮೂಲಕ ಸಂಸ್ಥಾಪನಾ ದಿನಾಚರಣೆಗೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಬ್ಯಾಂಕಿನ ಹಿರಿಯ ಗ್ರಾಹಕ ಗುರುಬಿಂದರ್ ರೆಶಿ ಸಿಂಗ್, ಕಳೆದ 30 ವರ್ಷಗಳಿಂದ ಭಾರತ್ ಬ್ಯಾಂಕ್‌ನ ಸಹಕಾರದಿಂದ ತನ್ನ ಉದ್ಯಮವು ಬೆಳೆದಿದೆ ಎಂದು ನೆನಪಿಸಿಕೊಂಡರು. “ಗೋರೆಗಾಂವ್ ಪಶ್ಚಿಮದ ಗುರುದ್ವಾರದ ಬಹುತೇಕ ಜನರ ಮುಖ್ಯ ಬ್ಯಾಂಕ್ ಭಾರತ್ ಬ್ಯಾಂಕ್ ಆಗಿದೆ. ಜಯ ಸಿ. ಸುವರ್ಣ ಅವರ ಆತ್ಮೀಯ ವರ್ತನೆ ಮತ್ತು ಸಮಯಕ್ಕೆ ಸರಿಯಾದ ಸ್ಪಂದನೆಯಿಂದಾಗಿ ನಮ್ಮ ಪರಿವಾರಕ್ಕೆ ಭಾರತ್ ಬ್ಯಾಂಕ್ ಎಂದಿಗೂ ಮರೆಯಲಾಗದ ಸಂಸ್ಥೆಯಾಗಿದೆ. ಇಲ್ಲಿನ ಸಿಬ್ಬಂದಿ ವರ್ಗದವರ ಸ್ನೇಹಪರತೆಯು ಎಲ್ಲರನ್ನೂ ಬ್ಯಾಂಕಿನತ್ತ ಆಕರ್ಷಿಸುತ್ತದೆ,” ಎಂದು ಅವರು ಹೇಳಿದರು.
​ಬ್ಯಾಂಕಿನ ಆಡಳಿತ ಮಂಡಳಿಯ ಸದಸ್ಯ ನಿತ್ಯಾನಂದ ಕೋಟ್ಯಾನ್ ಅವರು ಬ್ಯಾಂಕಿನ ಕಾರ್ಯವೈಖರಿ ಮತ್ತು ಪ್ರಗತಿಯ ಕುರಿತು ವಿವರಿಸಿದರು. ಸಭೆಯಲ್ಲಿ ಹಾಜರಿದ್ದ ಎಲ್ಲ ಗ್ರಾಹಕರಿಗೆ ಧನ್ಯವಾದ ಅರ್ಪಿಸಿದ ಅವರು, ಬ್ಯಾಂಕ್‌ನೊಂದಿಗೆ ಸದಾ ವ್ಯವಹರಿಸುವಂತೆ ವಿನಂತಿಸಿದರು.
​ಶಾಖಾ ಪ್ರಮುಖರಾದ ಪ್ರಿಯಾ ಡಿ. ಪೂಜಾರಿ ಕಾರ್ಯಕ್ರಮಕ್ಕೆ ಎಲ್ಲರನ್ನು ಸ್ವಾಗತಿಸಿದರು. ಉಪ ಶಾಖಾ ಪ್ರಮುಖರಾದ ಸುಮಿತ್ರ ಸಫಲಿಗ ಅವರು ವಂದನಾರ್ಪಣೆ ಮಾಡಿದರು.
​ಈ ಸಂದರ್ಭದಲ್ಲಿ ಹರ್ಷಿತಾ ಸುವರ್ಣ, ಶ್ರುತಿ ಕೋಟ್ಯಾನ್, ಪ್ರತಿಕ್ಷಾ ಸಿಂಗ್, ಸೂರಜ್ ಸಾಲ್ಯಾನ್, ದಿಶಾ ಛಗ್, ದರ್ಶನ್ ಜೋಶಿ, ಮೋಹನ್ ಅಮಿನ್, ಲಾಲ್ ಜಿ ರಾವರಿಯಾ, ಜಗನ್ನಾಥ ಕೋಟ್ಯಾನ್, ವಾಸುದೇವ ಭಟ್, ರಾಮೇಶ್ ಸುವರ್ಣ, ಕೇಶವ ಕೋಟ್ಯಾನ್, ವಿವೇಕ್ ಖಾನ್ವಿಲ್ಕರ್, ರಾಜೇಶ್ ಶರ್ಮಾ, ಶ್ರೀಮತಿ ಮಣೀಂದರ್ ಕೌರ್ ಸಹಾನಿ, ಶ್ರೀಮತಿ ನೀಲಂ ಭಾನುಶಾಲಿ, ಜಸ್ಮೀತ್ ಸಿಂಗ್ ಸಹಾನಿ, ಅನಿಲ್ ಕುಮಾರ್ ಬರೋಟ್, ಗಂಗಾರಾಂ ಚಿತ್ಯಲ, ನಾರಾಯಣ ತಿಂಗಳಾಯ ಸೇರಿದಂತೆ ಹಲವು ಗಣ್ಯರು ಹಾಗೂ ಗ್ರಾಹಕರು ಉಪಸ್ಥಿತರಿದ್ದರು.



Related posts

ವಸಯಿ ಕರ್ನಾಟಕ ಸಂಘದ ವಿಹಾರ ಕೂಟ

Mumbai News Desk

ಎಸ್. ಎಸ್. ಸಿ. ಪರೀಕ್ಷೆಯಲ್ಲಿ ಚಿನ್ಮಯ್ ನಾಯಕ್ ಗೆ ಶೇಕಡಾ 98.4 ಅಂಕ

Mumbai News Desk

ಸಾಂತಾಕ್ರೂಜ್ ಪೂರ್ವದ ಪೇಜಾವರ ಮಠದಲ್ಲಿ  ಶ್ರೀಕೃಷ್ಣ ಜನ್ಮಾಷ್ಟಮಿ, ವಿಟ್ಲಪಿಂಡಿ -ಮೊಸರು ಕುಡಿಕೆ ಸಂಭ್ರಮ, ಭಕ್ತಿ ಸಂಗೀತ ಕಾಠ್ಯಕ್ರಮ,

Mumbai News Desk

ಕರ್ನಿರೆ  ಶ್ರೀ ವಿಷ್ಣುಮೂರ್ತಿ ದೇವರ ಬ್ರಹ್ಮಕಲಶೋತ್ಸವದ ಸಮಾಲೋಚನಾ ಸಭೆ.

Mumbai News Desk

ಮುಂಬೈ : ಬ್ರೇಕ್ ಫೇಲ್ ಆಗಿ ಎದುರಿದ್ದ ವಾಹನಗಳು, ಜನರ ಮೇಲೆ ಹರಿದ ಬಸ್, 7 ಸಾವು, 49 ಮಂದಿಗೆ ಗಂಭೀರ ಗಾಯ

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಭಾವೀಶ್ ಮನೋಹರ್ ಶೆಟ್ಟಿ ಗೆ ಶೇ 90.60 ಅಂಕ.

Mumbai News Desk