July 23, 2026
Mumbai News Kannada
ತುಳುನಾಡು

ಕಾಪುವಿನ ಶ್ರೀ ಬಬ್ಬರ್ಯ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ಜರಗಿದ ಕಾಲದಿ ನೇಮೋತ್ಸವ







ಅನಾದಿಕಾಲದಿಂದ ನಡೆದು ಬರುತ್ತಿರುವ ಶ್ರೀ ಬಬ್ಬರ್ಯ  ಬಂಟ ದೈವ ಗಳ ಕಾಲದಿ ನೇಮೋತ್ಸವವು ಮೊಗವೀರ ಮಹಾಸಭಾ ಕಾಪು ಹಾಗೂ ಮುಂಬಾಯಿ ಇವರ ವ್ಯವಸ್ಥಾಪಕತ್ವದಲ್ಲಿ ಡಿಸೆಂಬರ್ 24 ಮತ್ತು 25 ರಂದು  ವಿಜೃಂಭಣೆಯಿಂದ ಜರಗಿತು.

​​​ ಡಿಸೆಂಬರ್ 24 ರಂದು ​ಬೆಳಗ್ಗೆ ಗಂಟೆ 8:00ಕ್ಕೆ: ಗಣಹೋಮ ನಡೆಯಿತು. ಬಳಿಕ ಭಕ್ತರಿಗೆ  ಪ್ರಸಾದ ವಿತರಿಸಲಾಯಿತು. ಡಿಸೆಂಬರ್ 25 ರಂದು ಗುರುವಾರ ​ಬೆಳಗ್ಗೆ ಗಂಟೆ 9:00ಕ್ಕೆ ಭಂಡಾರ ಮನೆಯಿಂದ ಭಂಡಾರವನ್ನು ವಾದ್ಯ ಗೋಷ್ಠಿಗಳೊಂದಿಗೆ ದೈವಸ್ಥಾನಕ್ಕೆ ತರಲಾಯಿತು.​ಗಂಟೆ 10:30ಕ್ಕೆ ಧ್ವಜಾರೋಹಣ ಹಾಗೂ  ಚಪ್ಪರ ಮುಹೂರ್ತ ನಡೆಯಿತು. ​ಮಧ್ಯಾಹ್ನ 12:30ಕ್ಕೆ ಪಲ್ಲಕಿ ಪೂಜೆ ಜರಗಿತು. ನಂತರ  ಲಾಲ್ ಬಹದ್ದೂರ್ ಶಾಸ್ತ್ರಿ ಸ್ಪೋರ್ಟ್ಸ್ & ಕಲ್ಚರಲ್  ಕ್ಲಬ್ ಕಾಪು ಹಾಗೂ ದಿವಂಗತ ಸೀತಾ ಆನಂದ ಕರ್ಕೇರ ಅವರ ಮಕ್ಕಳ ಪ್ರಯೋಜಕತ್ವದಲ್ಲಿ ಅನ್ನ ಸಂತರ್ಪಣೆ ನಡೆಯಿತು.

​ಸಾಯಂಕಾಲ 5 :೦೦ಕ್ಕೆ ಭಂಡಾರದೊಂದಿಗೆ ಚಪ್ಪರ ಪ್ರದಕ್ಷಿಣೆ ಜರಗಿತು . ​ರಾತ್ರಿ ಗಂಟೆ 10:00ಕ್ಕೆ ಶ್ರೀ ಬಬ್ಬರ್ಯ ಬಂಟ ಹಾಗೂ ಪರಿವಾರ ದೈವಗಳ ನೇಮೋತ್ಸವ ಆರಂಭವಾಯಿತು. ಬೆಳಿಗ್ಗೆ ಗಂಟೆ 4:೦೦ ಕ್ಕೆ ಗುರಿಕಾರರ  ಮನೆಯಿಂದ ಹಾಲು ಸ್ವೀಕರಿಸಿ ಬಳಿಕ  ಗಂಗಾ ಬೇಟಿಗೆ ತೆರಳಲಾಯಿತು.

​​ ಡಿಸೆಂಬರ್ 26ರಂದು ಶುಕ್ರವಾರ ಬೆಳಗ್ಗೆ ಗಂಟೆ 5:30ಕ್ಕೆ ಪ್ರಸಾದ ವಿತರಣೆ ನಡೆಯಿತು. ಬೆಳಗ್ಗೆ 7:೦೦ ಕ್ಕೆ ಧ್ವಜಾವರೋಹಣದ  ನಂತರ ಭಂಡಾರವನ್ನು ಭಕ್ತಿ ಶ್ರದ್ದೆಯಿಂದ  ಭಂಡಾರದ ಮನೆಗೆ ತರಲಾಯಿತು

ವಾರ್ಷಿಕ ನೇಮೋತ್ಸವವು  ಯಶಸ್ವಿಯಾಗಿ ನಡೆಯಲು ಗುರಿಕಾರರು, ಮುಕ್ಕಾಲ್ದಿ ಪದಾಧಿಕಾರಿಗಳು, ಕಾಪು ಮೊಗವೀರ ಮಹಾಸಭಾ ಮತ್ತು ಮುಂಬಾಯಿ ಮೊಗವೀರ ಮಹಾಸಭಾ, ಕಾಪು ಮೊಗವೀರ ಮಹಿಳಾ ಮಂಡಳಿ ಮತ್ತು ಮುಂಬಾಯಿ ಮೊಗವೀರ ಮಹಿಳಾ ಮಂಡಳಿ, ಆಡಳಿತ ಮಂಡಳಿ ಪಧಾದಿಕಾರಿಗಳು ಹಾಗೂ ಸರ್ವ ಸದಸ್ಯರು ಸಹಕಾರ ನೀಡಿದರು.



Related posts

ಕಾರ್ಕಳ ಬಾಹುಬಲಿ ಮಹಾಮಸ್ತಕಾಭಿಷೇಕ: 2027ರ ಫೆಬ್ರವರಿ 18 ರಿಂದ 28ರ ವರೆಗೆ ದಿನಾಂಕ ನಿಗದಿ; ಸಮಿತಿ ಕಚೇರಿ ಉದ್ಘಾಟನೆ

Mumbai News Desk

ಮಂಡೇಡಿ ಶ್ರೀ ದೇವಿ ಭಜನಾ ಮಂಡಳಿಯ ನೂತನ ಅಧ್ಯಕ್ಷರಾಗಿ  ಪ್ರಶಾಂತ್ ಶೆಟ್ಟಿ  ಮಂಡೇಡಿ ಆಯ್ಕೆ 

Mumbai News Desk

ಮುಲ್ಕಿ : ಕೊಳಚಿಕಂಬಳ ದೈವಸ್ಥಾನದಲ್ಲಿ ವೈಭವದ ನೇಮೋತ್ಸವ ಸಂಪನ್ನ

Mumbai News Desk

ಹೆಜಮಾಡಿ ಬಿಲ್ಲವ ಸಂಘದಲ್ಲಿ ಉಚಿತ ವೈದ್ಯಕೀಯ ಹಾಗೂ ದಂತ ತಪಾಸಣಾ ಶಿಬಿರ

Mumbai News Desk

ಗುರುಪುರ ಬಂಟರ ಮಾತೃ ಸಂಘ (ರಿ.)13ನೇ ವಾರ್ಷಿಕ ಸಮಾವೇಶ ಹಾಗೂ ನೃತ್ಯ ಸಂಗಮ-2026

Mumbai News Desk

ಮುಲ್ಕಿ : ಹೊಸ ಅಂಗಣ ಮಾಸಪತ್ರಿಕೆಯ ತಿಂಗಳ ಬೆಳಕು ಕಾರ್ಯಕ್ರಮ – ಸಸಿಹಿತ್ಲು ಶ್ರೀ ಭಗವತಿ ಕ್ಷೇತ್ರದ ಅನುವಂಶಿಕ ಮೊಕ್ತೇಸರ ಅಪ್ಪು ಯಾನೆ ಶ್ರೀನಿವಾಸ ಪೂಜಾರಿ ಅವರಿಗೆ ಸನ್ಮಾನ

Mumbai News Desk