
ವರದಿ: ಜಯ ಸಿ ಪೂಜಾರಿ, ಕೆಳಾರ್ಕಳ ಬೆಟ್ಟು.
ಭಾರತ್ ಬ್ಯಾಂಕಿನ ಬೆಂಗಳೂರಿನ ಮಾಗಡಿ ರಸ್ತೆ ಶಾಖೆಯಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಹೇಮಾ ಭಾಸ್ಕರ್ ಅವರು 35 ವರ್ಷಗಳ ಸುದೀರ್ಘ ಹಾಗೂ ಸ್ತುತ್ಯಾರ್ಹ ಸೇವೆಯ ನಂತರ ದಿನಾಂಕ 31.01.2026 ರಂದು ಸೇವಾ ನಿವೃತ್ತಿ ಹೊಂದಿದರು. ತಮ್ಮ ವೃತ್ತಿಜೀವನದ ಆರಂಭದಲ್ಲಿ ಮುಂಬೈನ ಸಿ.ಎಸ್.ಟಿ ಪಕ್ಕದ ಬಳ್ಳಾರ್ಡ್ ಪೀಯರ್ ಹಾಗೂ ಮೀರಾ ರೋಡ್ ಭಾಯಂದರ್ ಶಾಖೆಗಳಲ್ಲಿ ದಕ್ಷತೆಯಿಂದ ಸೇವೆ ಸಲ್ಲಿಸಿದ್ದ ಇವರು, ಬ್ಯಾಂಕಿನ ಏಳಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಅವರ ನಿವೃತ್ತಿಯ ಅಂಗವಾಗಿ ಮಾಗಡಿ ರಸ್ತೆ ಶಾಖೆಯಲ್ಲಿ ಆಯೋಜಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಭಾರತ್ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕರಾದ ಮುರಳೀಧರ ಕೋಟ್ಯಾನ್ ಅವರು ಉಪಸ್ಥಿತರಿದ್ದು, ಹೇಮಾ ಅವರ ನಿಷ್ಠಾವಂತ ಸೇವೆಯನ್ನು ಸ್ಮರಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಹೇಮಾ ಅವರ ಪತಿ ಭಾಸ್ಕರ್ ಪೂಜಾರಿ ಹಾಗೂ ಪುತ್ರ ಆಕಾಶ್ ಪೂಜಾರಿ ಅವರು ಜೊತೆಯಾಗಿದ್ದರು.
ಮಾಗಡಿ ರಸ್ತೆ ಶಾಖಾ ಪ್ರಬಂಧಕರಾದ ಗೋಪಾಲ್ ಪೂಜಾರಿ ಮತ್ತು ಸಿಬ್ಬಂದಿ ವರ್ಗದವರು ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿದ್ದರು. ಸಮಾರಂಭದಲ್ಲಿ ವಿವಿಧ ಶಾಖೆಗಳ ಪ್ರಬಂಧಕರು ಹಾಗೂ ಸಹೋದ್ಯೋಗಿಗಳು ಪಾಲ್ಗೊಂಡು ತಮ್ಮ ಆತ್ಮೀಯ ಸಹೋದ್ಯೋಗಿಗೆ ಸನ್ಮಾನಿಸಿ ಶುಭ ಕೋರಿದರು.





