July 23, 2026
Mumbai News Kannada
ಸುದ್ದಿ

ಉದ್ಯಮಿ, ಸಂಘಟಕ ಗೋಪಾಲ ಪುತ್ರನ್ ಅವರಿಗೆ ಪಿತೃ ವಿಯೋಗ







ಮುಂಬಯಿಯ ಉದ್ಯಮಿ, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಮುಂಬಯಿ, ಇದರ ಮಾಜಿ ಅಧ್ಯಕ್ಷರೂ ಆದ ಗೋಪಾಲ ಪುತ್ರನ್ ಅವರ ತಂದೆ ಸುರೇಶ್ ಮೊಗವೀರ (86) ಅವರು ಇಂದು ತನ್ನ ಸ್ವಗ್ರಹ ಕುಂದಾಪುರದ ಅರಾಟೆ ಬಸ್ತಿಹಿತ್ಲು ಮನೆಯಲ್ಲಿ ನಿಧನರಾದರು.
ಸರಳ, ಮೃದು ಸ್ವಭಾವದವರಾದ ಅವರು ಎಲ್ಲರೊಂದಿಗೆ ಆತ್ಮೀಯರಾಗಿದ್ದು, ಸಮಾಜ ಸೇವೆಯಲ್ಲಿ ನಿರತರಾಗಿದ್ದರು. ಅವರು ಗೋಪಾಲ ಪುತ್ರನ್ ಸಹಿತ 4 ಪುತ್ರರನ್ನು , 3 ಪುತ್ರಿಯರನ್ನು, ಹಾಗೂ ಅಪಾರ ಬಂಧು, ಬಳಗವನ್ನು ಅಗಲಿರುವರು.
ಸುರೇಶ್ ಮೊಗವೀರ ಅವರ ನಿಧನಕ್ಕೆ ಮೊಗವೀರ ಕುಲರತ್ನ, ನಾಡೋಜ ಡಾ. ಜಿ. ಶಂಕರ್, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಮುಂಬಯಿ ಯ ಗೌರವ ಅಧ್ಯಕ್ಷ ಸುರೇಶ್ ಆರ್ ಕಾಂಚನ್, ಅಧ್ಯಕ್ಷ ರಾಜು ವಂಡ್ಸೆ, ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು, ಮೊಗವೀರ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ ಅರುಣ್ ಕುಮಾರ್, ಮತ್ತು ಪದಾಧಿಕಾರಿಗಳು, ಟ್ರಸ್ಟಿಗಳು, ಮೊಗವೀರ ಬ್ಯಾಂಕ್ ನ ಕಾರ್ಯಧ್ಯಕ್ಷರು, ನಿರ್ದೇಶಕರು ಸಂತಾಪ ವ್ಯಕ್ತ ಪಡಿಸಿದ್ದಾರೆ.



Related posts

ಮಲಾಡ್ ಕುರಾರ್ ಶನೇಶ್ವರ ಮಂದಿರದ ವತಿಯಿಂದ ಉಳ್ಳಾಳ ಸೋಮೇಶ್ವರದಲ್ಲಿ, ಶ್ರೀ ಶನಿ ಮಹಾಪೂಜೆ.

Mumbai News Desk

ಬಂಟ್ವಾಳ: ‘ಯಕ್ಷರಂಗದ ರಾಜ’ ಖ್ಯಾತಿಯ ಪೆರುವಾಯಿ ನಾರಾಯಣ ಶೆಟ್ಟಿ ಇನ್ನಿಲ್ಲ,

Mumbai News Desk

ವಿಧಾನ ಪರಿಷತ್ ಉಪಚುನಾವಣೆ – ಬಿಜಿಪಿಯ ಕಿಶೋರ್ ಕುಮಾರ್ ಬೊಟ್ಯಾಡಿ ಗೆಲುವು

Mumbai News Desk

ಕುಲಾಲ ಸಂಘ ಮುಂಬೈ  ಅಧ್ಯಕ್ಷರಾಗಿ ಮರು ಆಯ್ಕೆಗೊಂಡ   ರಘು ಮೂಲ್ಯ ಪಾದೆಬೆಟ್ಟು ಅವರಿಗೆ ಮಂಗಳೂರುನಲ್ಲಿ  ಗೌರವ,

Mumbai News Desk

ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲಿನಲ್ಲಿ ಇಬ್ಬರು ಮಹಿಳಾ ಪ್ರಯಾಣಿಕರ ಬ್ಯಾಗ್ ಕಳವು: ಗೋವಾದ ಮಡಗಾಂವ್ ನಿಲ್ದಾಣದಲ್ಲಿ ಘಟನೆ

Mumbai News Desk

ಬೈಕಂಪಾಡಿ ಯೋಗೀಶ್ ಕಾಂಚನ್ ನಿಧನ

Mumbai News Desk