32 C
Mumbai
April 24, 2026
Mumbai News Kannada
ಪ್ರಕಟಣೆ

ಡೊಂಬಿವಲಿ: ಶ್ರೀ ಜಗದಂಬಾ ಮಂದಿರದಲ್ಲಿ ಫೆ. 15ರಂದು ಮಹಾಶಿವರಾತ್ರಿ ಮಹೋತ್ಸವ; ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಭಜನೋತ್ಸವ





ಡೊಂಬಿವಲಿ: ಇಲ್ಲಿನ ಪಶ್ಚಿಮದ ಗೋಪಿನಾಥ್ ಚೌಕ್, ಜೈ ಜಗದಂಬಾ ರಸ್ತೆಯ ಹೊಸ ದೇವಿಚಾಪಾಡದಲ್ಲಿರುವ ಶ್ರೀ ಜಗದಂಬಾ ಚಾರಿಟೇಬಲ್ ಟ್ರಸ್ಟ್ (ರಿ.) ನಿರ್ವಹಣೆಯ ಶ್ರೀ ಜಗದಂಬಾ ಮಂದಿರದಲ್ಲಿ ಫೆಬ್ರವರಿ 15ರ ಭಾನುವಾರ ಮಹಾಶಿವರಾತ್ರಿ ಮಹೋತ್ಸವವು ಅತ್ಯಂತ ವೈಭವದಿಂದ ಜರುಗಲಿದೆ.

​ಅಂದು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಸತತವಾಗಿ ‘ಭಜನೋತ್ಸವ’ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 7:00ಕ್ಕೆ ನಿತ್ಯ ಪೂಜೆ, 7:30ಕ್ಕೆ ಶಿವ ಅರ್ಚನಾ ಪೂಜೆ ಹಾಗೂ 7:45ಕ್ಕೆ ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ. ರಾತ್ರಿ 8:00 ಗಂಟೆಗೆ ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿತರಣೆ ನಡೆಯಲಿದೆ.

ದಿನಪೂರ್ತಿ ವಿವಿಧ ಭಜನಾ ಮಂಡಳಿಗಳಿಂದ ಭಜನೆ:

​ಬೆಳಿಗ್ಗೆ 8:00ರಿಂದ ರಾತ್ರಿ 8:00ರವರೆಗೆ ಸತತವಾಗಿ ಈ ಕೆಳಗಿನ ತಂಡಗಳಿಂದ ಭಜನಾ ಸೇವೆ ನಡೆಯಲಿದೆ:

  • ಶ್ರೀ ಜಗದಂಬಾ ಮಂದಿರ ತಂಡ (ಬೆಳಿಗ್ಗೆ 8:00)
  • ದೇವಡಿಗ ಸಂಘ ಡೊಂಬಿವಲಿ ವಲಯ (8:30)
  • ಅಯ್ಯಪ್ಪ ಭಕ್ತ ವೃಂದ ಅಜದೆಪಾಡ (9:00)
  • ತುಳು ವೆಲ್ಫೇರ್ ಅಸೋಸಿಯೇಷನ್ (9:45)
  • ಬಿಲ್ಲವರ ಅಸೋಸಿಯೇಷನ್ ಡೊಂಬಿವಲಿ ಸ್ಥಳೀಯ ಕಚೇರಿ (10:30)
  • ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿ (11:15)
  • ಮಹಾವಿಷ್ಣು ಮಂದಿರ ಮುಂಬ್ರಾ ಮಿತ್ರ ಭಜನಾ ಮಂಡಳಿ (ಮಧ್ಯಾಹ್ನ 12:00)
  • ಶ್ರೀ ರಾಧಾಕೃಷ್ಣ ಶನೈಶ್ಚರ ಮಂದಿರ ಡೊಂಬಿವಲಿ (12:45)
  • ಪಶ್ಚಿಮ ವಿಭಾಗ ನವರಾತ್ರಿ ಮಂಡಳಿ (1:30)
  • ಜೈ ಭವಾನಿ ಶನೈಶ್ಚರ ಮಂದಿರ ಡೊಂಬಿವಲಿ (2:15)
  • ಸಿರಿನಾಡ ವೆಲ್ಫೇರ್ ಅಸೋಸಿಯೇಷನ್ (3:00)
  • ಶ್ರೀ ಅಯ್ಯಪ್ಪ ಸೇವಾ ಸಮಿತಿ ಫೋರ್ಟ್ (3:45)
  • ರಜಕ ಸಂಘ ಡೊಂಬಿವಲಿ (4:30)
  • ಶಬರಿ ಅಯ್ಯಪ್ಪ ಭಜನಾ ಮಂಡಳಿ ಡೊಂಬಿವಲಿ (5:15)
  • ಫ್ರೆಂಡ್ಸ್ ಸ್ವಾವಲಂಬನಾ ಕೇಂದ್ರ ದೊಂಬಿವಲಿ (6:00)
  • ಚಿಣ್ಣರ ಬಿಂಬ ಡೊಂಬಿವಲಿ (6:45)
  • ಶ್ರೀ ಜಗದಂಬಾ ಮಂದಿರ ತಂಡ (ರಾತ್ರಿ 7:15)

​ಈ ಪುಣ್ಯ ಕಾರ್ಯಕ್ರಮಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಮಂದಿರದ ಅಧ್ಯಕ್ಷರಾದ ಶ್ರೀ ದಿವಾಕರ್ ಜಿ. ರೈ, ಉಪಾಧ್ಯಕ್ಷರಾದ ರವೀಂದ್ರ ವೈ. ಶೆಟ್ಟಿ ಹಾಗೂ ದಿನೇಶ್ ಜಿ. ಪೂಜಾರಿ, ಗೌರವ ಪ್ರಧಾನ ಕಾರ್ಯದರ್ಶಿ ರಾಜೇಶ್ ಸಿ. ಕೋಟ್ಯಾನ್, ಗೌರವ ಕೋಶಾಧಿಕಾರಿ ಸಂತೋಷ್ ಎಂ. ಶೆಟ್ಟಿ, ಸಾಂಸ್ಕೃತಿಕ ಕಾರ್ಯಕ್ರಮದ ಅಧ್ಯಕ್ಷ ವಿಜಯ್ ಶೆಟ್ಟಿ ಸಜೀಪಗುತ್ತು, ವ್ಯವಸ್ಥಾಪನಾ ಸಮಿತಿ, ಮಹಿಳಾ ವಿಭಾಗ, ಭಜನಾ ಸಮಿತಿ, ಯುವ ವಿಭಾಗ ಹಾಗೂ ಶನಿಪೂಜಾ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಪ್ರಕಟಣೆಯಲ್ಲಿ ಕೋರಿದ್ದಾರೆ.



Related posts

ಮಲಾಡ್ ಪೂರ್ವ ಶ್ರೀ ದೇವಿ ಮಹಾಮ್ಮಾಯಿ ದೇವಸ್ಥಾನದಲ್ಲಿ ಸೆ. 22 ರಿಂದ ಅ. 2ರ ವರೆಗೆ ನವರಾತ್ರಿ ಉತ್ಸವ

Mumbai News Desk

ಜ.21 ರಂದು ವಸಾಯಿ ತಾಲೂಕು ಮೊಗವೀರ ಸಂಘ, ತುಳು-ಕನ್ನಡಿಗರಿಗಾಗಿ ವಾಲಿಬಾಲ್, ತ್ರೋಬಾಲ್ ಪಂದ್ಯಾಟ

Mumbai News Desk

ಬೆಂಗ್ರೆಯಲ್ಲಿ ಭಕ್ತಿ-ಸಂಸ್ಕೃತಿಯ ಸಂಗಮ: ಶ್ರೀ ವೀರಭಾರತಿ ವ್ಯಾಯಾಮ ಶಾಲೆಯ ಶತಮಾನೋತ್ಸವ ಹಾಗೂ ಶ್ರೀ ಪಟ್ಟಾಭಿರಾಮ ದೇವರ ಪುನರ್ ಪ್ರತಿಷ್ಠಾಪನಾ ಮಹೋತ್ಸವ

Mumbai News Desk

ಶ್ರೀ ಮಹಾಕಾಳಿ ಮಂದಿರ ಜೋಗೇಶ್ವರಿ (ಪೂ ) ಜುಲೈ 8ಕ್ಕೆ ಬ್ರಹ್ಮಕಲಶದ ವಾರ್ಷಿಕೋತ್ಸವದ ನಿಮಿತ್ತ ಆದರ್ಶ ಪೂಜೆ.

Mumbai News Desk

ಅಖಿಲ ಕರ್ನಾಟಕ ಜೈನ ಸಂಘ, ಮುಂಬೈ ನ.26ಕ್ಕೆ ರಜತ ಮಹೋತ್ಸವ ಸಮಾರಂಭ

Mumbai News Desk

ಎ. 25, ತುಳು ಸಂಘ, ಬೋರಿವಲಿ16ನೇ ವಾರ್ಷಿಕೋತ್ಸವ, ಸಾಂಸ್ಕೃತಿಕ ವೈಭವ, ತುಳು ನಾಟಕ ಪ್ರದರ್ಶನ

Mumbai News Desk