28 C
Mumbai
September 19, 2026
Mumbai News Kannada
ಸುದ್ದಿ

ಮುಲ್ಕಿ : ಟೆಂಪೋ ಡಿಕ್ಕಿಯಾಗಿ ಉದ್ಯಮಿ ಲಿಂಗಪ್ಪ ಶೆಟ್ಟಿ ನಿಧನ





ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಉದ್ಯಮಿಯೊಬ್ಬರಿಗೆ ಮಿನಿ ಟೆಂಪೋ ಡಿಕ್ಕಿ ಹೊಡೆದು ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ಕಾರ್ಕಳ-ಪಡುಬಿದ್ರಿ ರಾಜ್ಯ ಹೆದ್ದಾರಿಯ ನಂದಿಕೂರು ಬಳಿ ನಡೆದಿದೆ. ಮೂಲತಃ ಮೂಲ್ಕಿ-ಚಿತ್ರಾಪುನವರಾದ ಪ್ರಸ್ತುತ ಇನ್ನಾದಲ್ಲಿ ವಾಸವಿರುವ ಲಿಂಗಪ್ಪ ಶೆಟ್ಟಿ (76) ಮೃತರು. ನಂದಿಕೂರು ರಾಮ ಮಂದಿರದ ಎದುರಿನ ತಮ್ಮ ಸ್ವಂತ ಕಟ್ಟಡದತ್ತ ಶುಕ್ರವಾರ ರಾತ್ರಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಮಿನಿ ಟೆಂಪೋ ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಅವರಿಗೆ ಪತ್ನಿ ಹಾಗೂ ಮೂವರು ಪುತ್ರಿಯರು ಇದ್ದಾರೆ. ಅವರು ಮುಂಬಯಿ ಮಾತ್ರವಲ್ಲದೆ ಮೂಲ್ಕಿ, ನಂದಿಕೂರು, ಉಡುಪಿಯಲ್ಲಿ ವ್ಯವಹಾರ ನಡೆಸುತ್ತಿದ್ದರು. ಮೂಲ್ಕಿಯಲ್ಲಿ ಹೆದ್ದಾರಿ ಬಳಿ ಗ್ಯಾರೇಜ್ ಉದ್ಯಮ ತೆರೆದು ಮೆಕ್ಯಾನಿಕ್ ಆಗಿ ಜೀವನ ಆರಂಭಿಸಿದ್ದ ಲಿಂಗಪ್ಪ ಶೆಟ್ಟಿ, ಬಳಿಕ ಮುಂಬಯಿಗೆ ತೆರಳಿ ಚೆಂಬೂರಿನಲ್ಲಿ ನೆಲೆಸಿ ಸಾರಿಗೆ ಉದ್ಯಮ ಕಟ್ಟಿದ್ದರು. ಧಾರ್ಮಿಕ ಕ್ಷೇತ್ರ ಸಹಿತ ಕಂಬಳ ಕ್ಷೇತ್ರದಲ್ಲಿ ಕೊಡುಗೆ ದಾನಿಯಾಗಿ ಅವರು ಗುರುತಿಸಿಕೊಂಡಿದ್ದರು. ಟೆಂಪೋ ಚಾಲಕನ ನಿರ್ಲಕ್ಷ್ಯದ ಚಾಲನೆಯಿಂದಾಗಿ ಈ ಘಟನೆ ನಡೆದಿದೆ ಎನ್ನಲಾಗಿದೆ.



Related posts

ಸಂಗೀತ ಲೋಕದ ಧ್ರುವತಾರೆ ಆಶಾ ಭೋಂಸ್ಲೆ ಇನ್ನಿಲ್ಲ: ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟ

Mumbai News Desk

ಬಂಟ್ವಾಳ: ‘ಯಕ್ಷರಂಗದ ರಾಜ’ ಖ್ಯಾತಿಯ ಪೆರುವಾಯಿ ನಾರಾಯಣ ಶೆಟ್ಟಿ ಇನ್ನಿಲ್ಲ,

Mumbai News Desk

ನಗರದ ಪ್ರಸಿದ್ಧ ಹೃದ್ರೋಗ ತಜ್ಞ ಡಾ. ಸದಾನಂದ ಶೆಟ್ಟಿ ಅವರಿಗೆ ಬೆಸ್ಟ್ ಡಾಕ್ಟರ್ ಆಫ್ ಮುಂಬೈ 2025 ಪುರಸ್ಕಾರ.

Mumbai News Desk

ರೈ ಸಮಿತಿ ಎಜುಕೇಷನಲ್ ಟ್ರಸ್ಟ್‌ನ ಸೈಂಟ್ ಆಗ್ನೆಸ್ ಇಂಗ್ಲಿಷ್ ಹೈಸ್ಕೂಲ್‌ಗೆ ಕಟೀಲು ಅನಂತ ಅಸ್ರಣ್ಣರ ಭೇಟಿ

Mumbai News Desk

” ಕನ್ನಡಿಗರ ಉನ್ನತ ಮಹಾವಿದ್ಯಾಲಯ ಐರೋಲಿ ಯ ಜ್ಞಾನ ವಿಕಾಸ ಮಂಡಳದ ಮೆಹತಾ ಮಹಾವಿದ್ಯಾಲಯ”

Mumbai News Desk

ಮುಂಬಯಿ: ನಾಪತ್ತೆಯಾಗಿದ್ದ ವಿರಾರ್ ನಿವಾಸಿ ನಿಶಾಂತ್ ಬಂಗೇರ ಪತ್ತೆ; ನಿಟ್ಟುಸಿರು ಬಿಟ್ಟ ಕುಟುಂಬ ಮತ್ತು ಸಮಾಜ ಬಾಂಧವರು

Mumbai News Desk