32 C
Mumbai
April 24, 2026
Mumbai News Kannada
ಪ್ರಕಟಣೆ

ಮಲಾಡ್ ಪೂರ್ವದ ಶ್ರೀ ದೇವಿ ಮಹಮ್ಮಾಯಿ ದೇವಸ್ಥಾನ: ಏಪ್ರಿಲ್ 10 ಮತ್ತು 11 ರಂದು ವರ್ಧಂತಿ ಪಲ್ಲಕ್ಕಿ ಉತ್ಸವ, ನೇಮೋತ್ಸವ





ಮುಂಬಯಿ: ಮುಂಬಯಿಯ ಉಪನಗರವಾದ ಮಲಾಡ್ ಪೂರ್ವದ ಕುರಾರ್ ವಿಲೇಜ್‌ನಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ತುಳುವರು ಮತ್ತು ಕನ್ನಡಿಗರು ನೆಲೆಸಿದ್ದಾರೆ. ಇಲ್ಲಿನ ತುಳು-ಕನ್ನಡಿಗರು ನಿರ್ಮಿಸಿರುವ ದೇವಸ್ಥಾನಗಳು, ಧಾರ್ಮಿಕ ಹಾಗೂ ಸಾಮಾಜಿಕ ಸಂಸ್ಥೆಗಳು ಸ್ಥಳೀಯರಿಗೆ ಪ್ರೇರಣಾ ಶಕ್ತಿಯಾಗಿವೆ.

​ಹಲವು ವರ್ಷಗಳ ಹಿಂದೆ ಕುರಾರ್ ವಿಲೇಜ್‌ನ ಅಂಬೆವಾಡಿಯಲ್ಲಿ ರವಿ ಸ್ವಾಮೀಜಿಯವರು ತಮ್ಮ ಸಹೋದರ-ಸಹೋದರಿಯರೊಂದಿಗೆ ಶ್ರೀ ಮಹಮ್ಮಾಯಿ ದೇವಿಯ ಆರಾಧನೆ ಆರಂಭಿಸಿ, ಈ ಧಾರ್ಮಿಕ ಶ್ರದ್ಧಾ ಕೇಂದ್ರವನ್ನು ಸ್ಥಾಪಿಸಿದರು. ನಿತ್ಯ ಭಜನೆ, ಮಂಗಳವಾರ ವಿಶೇಷ ಪೂಜೆ, ನವರಾತ್ರಿ ಉತ್ಸವ ಹಾಗೂ ವರ್ಷಪೂರ್ತಿ ವಿವಿಧ ಪರ್ವಗಳನ್ನು ಇಲ್ಲಿ ಆಚರಿಸಲಾಗುತ್ತಿದೆ. ವಾರ್ಷಿಕ ಮಹೋತ್ಸವ, ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜೆ ಮತ್ತು ಅನ್ನಸಂತರ್ಪಣೆಗಳು ಬಹಳ ವಿಜೃಂಭಣೆಯಿಂದ ನಡೆಯುತ್ತಾ ಬಂದಿವೆ.

​ಕ್ಷೇತ್ರಕ್ಕೆ ಭಕ್ತರ ಸಂಖ್ಯೆ ಹೆಚ್ಚಾದಂತೆ ಪೂರ್ಣ ಪ್ರಮಾಣದ ದೇವಸ್ಥಾನ ನಿರ್ಮಾಣದ ಸಂಕಲ್ಪ ಮಾಡಿದ ರವಿ ಸ್ವಾಮೀಜಿಯವರು, ಭಕ್ತರನ್ನು ಒಗ್ಗೂಡಿಸಿ ‘ಶ್ರೀ ಮಹಮ್ಮಾಯಿ ಸೇವಾ ಸಮಿತಿ’ ಎಂಬ ಟ್ರಸ್ಟ್ ಸ್ಥಾಪಿಸಿದರು. ಕುರಾರ್ ವಿಲೇಜ್‌ನ ಕೇತುವಾಡಿಯ ಜಾನ್ ಕಾಂಪೌಂಡ್‌ನಲ್ಲಿ ಭವ್ಯವಾದ ಶ್ರೀ ದೇವಿ ಮಹಮ್ಮಾಯಿ ದೇವಸ್ಥಾನವನ್ನು ನಿರ್ಮಿಸಿ, ಪರಿವಾರ ದೈವಗಳಾದ ಸತ್ಯದೇವತೆ, ಕಲ್ಕುಡ-ಕಲ್ಲುರ್ಟಿ ಮತ್ತು ಗುಳಿಗ ದೈವಗಳ ಸಾನಿಧ್ಯವನ್ನು ಪ್ರತಿಷ್ಠಾಪಿಸಿದರು. ಪ್ರಸ್ತುತ ಇದು ಧರ್ಮ ಜಾಗೃತಿಯ ಕೇಂದ್ರವಾಗಿ ಬೆಳಗುತ್ತಿದೆ.

​ರವಿ ಸ್ವಾಮೀಜಿಯವರ ಸಹೋದರ ರಘು ಗುರುಸ್ವಾಮಿಯವರ ಮೂಲಕ ಪ್ರತಿ ವರ್ಷ ಅಯ್ಯಪ್ಪ ಸ್ವಾಮಿಯ ಮಹಾಪೂಜೆ ಹಾಗೂ ಪರಿವಾರ ದೈವಗಳ ನೇಮೋತ್ಸವ ಶ್ರದ್ಧೆಯಿಂದ ನಡೆಯುತ್ತಿದೆ. ಪ್ರತಿ ಮಂಗಳವಾರ ಅಪಾರ ಸಂಖ್ಯೆಯ ಭಕ್ತರು ಆಗಮಿಸುತ್ತಿದ್ದು, ಭಜನೆ ಮತ್ತು ಸತ್ಸಂಗಗಳ ಮೂಲಕ ಸ್ವಾಮೀಜಿಯವರು ಭಕ್ತರಿಗೆ ಸನ್ಮಾರ್ಗದ ಮಾರ್ಗದರ್ಶನ ನೀಡುತ್ತಿದ್ದಾರೆ.

ಕಾರ್ಯಕ್ರಮದ ವಿವರ:

​ದೇವಸ್ಥಾನದ ಧರ್ಮದರ್ಶಿ ರವಿ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಈ ಕೆಳಗಿನ ಕಾರ್ಯಕ್ರಮಗಳು ನಡೆಯಲಿವೆ:

ಏಪ್ರಿಲ್ 10, ಶುಕ್ರವಾರ:

  • ಬೆಳಿಗ್ಗೆ 6:00ರಿಂದ: ಗಣಹೋಮ, ನವಕ ಪ್ರಧಾನ ಹೋಮ, ಪಂಚಾಮೃತ ಅಭಿಷೇಕ, ನವಕಳಸ ಅಭಿಷೇಕ, 108 ಸೀಯಾಳ ಅಭಿಷೇಕ.
  • ಬೆಳಿಗ್ಗೆ 11:00ಕ್ಕೆ: ದೇವಿ ದರ್ಶನ.
  • ಮಧ್ಯಾಹ್ನ 12:30ಕ್ಕೆ: ಮಹಾಪೂಜೆ, ಮಹಾಮಂಗಳಾರತಿ, ತೀರ್ಥ ಪ್ರಸಾದ.
  • ಸಂಜೆ 5:00ಕ್ಕೆ: ಕುಂಕುಮಾರ್ಚನೆ ಸೇವೆ.
  • ಸಂಜೆ 6:00ಕ್ಕೆ: ಪಲ್ಲಕ್ಕಿ ಮೆರವಣಿಗೆ.
  • ರಾತ್ರಿ 9:30ಕ್ಕೆ: ಮಹಾಪ್ರಸಾದ ಅನ್ನಸಂತರ್ಪಣೆ.

ಏಪ್ರಿಲ್ 11, ಶನಿವಾರ (ಧರ್ಮ ದೈವಗಳಿಗೆ ಗಗ್ಗರ ಸೇವೆ):

  • ಮಧ್ಯಾಹ್ನ 12:00ಕ್ಕೆ: ಚಪ್ಪರ ಮುಹೂರ್ತ.
  • ಮಧ್ಯಾಹ್ನ 12:30ಕ್ಕೆ: ದೈವಗಳ ಭಂಡಾರ ಇಳಿಸುವಿಕೆ.
  • ಸಂಜೆ 5:00ರಿಂದ: ಸತ್ಯದೇವತೆ, ಕಲ್ಕುಡ-ಕಲ್ಲುರ್ಟಿ, ಗುಳಿಗ ದೈವಗಳಿಗೆ ನೇಮೋತ್ಸವ (ಕೋಲ) ಆರಂಭ.
  • ರಾತ್ರಿ 8:00ರಿಂದ: ಅನ್ನಸಂತರ್ಪಣೆ.

ಸೇವಾಕರ್ತರು ಮತ್ತು ಆಮಂತ್ರಕರು:

​ಈ ಪುಣ್ಯ ಕಾರ್ಯದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವಿಯ ಹಾಗೂ ದೈವಗಳ ಕೃಪೆಗೆ ಪಾತ್ರರಾಗಬೇಕೆಂದು ಧರ್ಮದರ್ಶಿ ರವಿ ಸ್ವಾಮೀಜಿ ಮತ್ತು ಶ್ರೀ ದೇವಿ ಮಹಮ್ಮಾಯಿ ಸೇವಾ ಸಮಿತಿಯ ಪದಾಧಿಕಾರಿಗಳು ವಿನಂತಿಸಿದ್ದಾರೆ.

ಸಮಿತಿಯ ಪ್ರಮುಖರು:

ಗೌರವ ಅಧ್ಯಕ್ಷರು ಸಂತೋಷ್ ಕೆ. ಪೂಜಾರಿ, ಅಧ್ಯಕ್ಷರು ಲಾಲ್ ಮನ್ ಯಾದವ್, ಕಾರ್ಯದರ್ಶಿ ಉದಯ ಬಿ. ಸಾಲ್ಯಾನ್, ಕೋಶಾಧಿಕಾರಿ ಹರಿಶ್ಚಂದ್ರ ಆಚಾರ್ಯ, ಸಲಹೆಗಾರರಾದ ಸುರೇಂದ್ರ ಶೆಟ್ಟಿ ಹೊಸ್ಮರು ಮತ್ತು ಸುಧೀರ್ ಪುತ್ರನ್. ಸದಸ್ಯರಾದ ರಾಘು ಪೂಜಾರಿ, ಉಮೇಶ್ ಅಂಚನ್ ಮಾರ್ನಾಡು, ಶೇಖರ್ ಡಿ. ಅಮೀನ್, ರಾಜು ಪೂಜಾರಿ, ಸನತ್ ಪೂಜಾರಿ ಕೆಲ್ಲಪುತ್ತಿಗೆ, ಪ್ರಕಾಶ್ ಸಾಲ್ಯಾನ್ (ಅಣ್ಣು), ಚಂದ್ರಕಾಂತ್ ಸಾಲ್ಯಾನ್ ಹಾಗೂ ಇತರರು.

ಮಹಿಳಾ ಮತ್ತು ಯುವ ವಿಭಾಗ:

ಸುನಂದ ಅಮೀನ್, ವಿಜಯಲಕ್ಷ್ಮಿ ಸಾಲ್ಯಾನ್, ಆಶಾ ಆರ್. ಪೂಜಾರಿ, ಶೋಭಾ ಪೂಜಾರಿ, ಸಿ.ಎ. ಪ್ರೀತಿ ಪೂಜಾರಿ, ಡಾ. ಪ್ರಿಯಲ್ ಯಾದವ್ ಸೇರಿದಂತೆ ಮಹಿಳಾ ಮಂಡಳಿ ಮತ್ತು ಯುವ ಮಂಡಲದ ಸರ್ವ ಸದಸ್ಯರು ಉಪಸ್ಥಿತರಿರುವರು.

ನೇಮೋತ್ಸವದ ತಂಡ:

ನರ್ತನ ಸೇವೆಯನ್ನು ಹರೀಶ್ ಬೋಳ ಮತ್ತು ಬಳಗ (ಪ್ರದೀಪ್ ಮಾಂಟ್ರಾಡಿ, ಉಮೇಶ್ ಶಿವಪುರ, ಶರತ್ ಕೊಲ್ಲೂರು) ನಡೆಸಿಕೊಡಲಿದ್ದಾರೆ. ಮಧ್ಯಸ್ಥರಾಗಿ ಪ್ರಜ್ವಲ್ ಶೆಟ್ಟಿ ಇನ್ನಾ ಗಾಂದೊಟ್ಟು, ಶ್ರೀಧರ್ ಪೂಜಾರಿ ಸಿದ್ಧಕಟ್ಟೆ, ಯಶೋಧರ ಮಡಿವಾಳ ಹಾಗೂ ಜರಿಮೇರಿ ದಿನೇಶ್ ಕೋಟ್ಯಾನ್ ಬಳಗದವರಿಂದ ವಾದ್ಯ ಸೇವೆ ನಡೆಯಲಿದೆ.

ಧರ್ಮದರ್ಶಿ ರವಿ ಸ್ವಾಮೀಜಿ ಬಗ್ಗೆ:

​ಮೂಲತಃ ಮುಲ್ಕಿ ಮೈಲೊಟ್ಟು ನಿವಾಸಿಯಾದ ರವಿ ಸ್ವಾಮೀಜಿಯವರು ಬಾಲ್ಯದಿಂದಲೇ ಕಾಪು ಶ್ರೀ ಮಹಮ್ಮಾಯಿಯ ಪರಮ ಭಕ್ತರು. ಕುರಾರ್ ವಿಲೇಜ್‌ನಲ್ಲಿ ತಂದೆ-ತಾಯಿಯ ಆಶೀರ್ವಾದದೊಂದಿಗೆ ಮನೆಯಲ್ಲೇ ದೇವಿಯ ಆರಾಧನೆ ಆರಂಭಿಸಿದವರು. ತಮ್ಮ ಮೃದು ಸ್ವಭಾವ ಮತ್ತು ಧಾರ್ಮಿಕ ನಿಷ್ಠೆಯಿಂದಾಗಿ ನೂರಾರು ಭಕ್ತರಿಗೆ ಮಾರ್ಗದರ್ಶಕರಾಗಿದ್ದಾರೆ.



Related posts

ಮಲಾಡ್ ಕುರಾರ ಶ್ರೀ ಶನಿ ಮಹಾತ್ಮ ಚಾರಿಟೇಬಲ್ ಟ್ರಸ್ಟ್. ಜೂ22. ಶೈಕ್ಷಣಿಕ ನೆರವು.ಉಚಿತ ಶಾಲಾ ಪರಿಕರ ವಿತರಣೆ.

Mumbai News Desk

ಸೆ 1:.ಬಿಲ್ಲವರ ಎಸೋಸಿಯೇಶನ್, ಮುಂಬಯಿ ನಾಲಾಸೋಪಾರ – ವಿರಾರ್ ಸ್ಥಳೀಯ ಕಚೇರಿಯಲ್ಲಿ 170ನೇ ಬ್ರಹ್ಮಶ್ರೀ ನಾರಾಯಣ ಗುರುಜಯಂತಿ ಆಚರಣೆ

Mumbai News Desk

ಡಿ. 21: ಮುಂಬಯಿ ಕನ್ನಡ ಸಂಘದ ದತ್ತಿ ಉಪನ್ಯಾಸ ಕಾರ್ಯಕ್ರಮ

Mumbai News Desk

ಸೆ. 22 ರಿಂದ ಅ 2 ರ ವರೆಗೆ ಡೊಂಬಿವಲಿ ಶ್ರೀ ಜಗದಂಬಾ ಮಂದಿರದಲ್ಲಿ 11ನೇ ವರ್ಷದ ಶರನ್ನವರಾತ್ರಿ ಮಹೋತ್ಸವ

Mumbai News Desk

ಕರ್ನಾಟಕ ಸಂಘ ಡೊಂಬಿವಲಿ: ಅಕ್ಟೋಬರ್ 27ರಂದು 57 ನೇ ವಾರ್ಷಿಕ ಮಹಾಸಭೆ.   

Mumbai News Desk

ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಥಾಣೆ : ಡಿ. 15ರಂದು ಕಲ್ಲುರ್ಟಿ -ಪಂಜುರ್ಲಿ -ಗುಳಿಗ ದೈವದ ನೇಮ (ಕೋಲ )

Mumbai News Desk