32 C
Mumbai
May 25, 2026
Mumbai News Kannada
ಪ್ರಕಟಣೆ

ಮೇ 31, 2026 ರಂದು ಕುಮಾರಿ ಲಿಖಿತಾ ರತ್ನಾಕರ ಕರ್ಕೇರರ ಭರತನಾಟ್ಯಂ ಪ್ರಥಮ ರಂಗ ಪ್ರವೇಶ





ಕಳೆದ ಐದು ವರ್ಷಗಳಿಂದ ಬೆಂಗಳೂರಿನ ಸಾಫ್ಟ್‌ವೇರ್‌ ಕಂಪೆನಿಯೊಂದಲ್ಲಿ ಕ್ವಾಲಿಟಿ ಎನಲಿಸ್ಟರಾಗಿ ದುಡಿಯತ್ತಿರುವ ಕುಮಾರಿ ಲಿಖಿತಾ ರತ್ನಾಕರ ಕರ್ಕೇರರಿಗೆ ಕಛೇರಿಯ ಬಿಡುವಿಲ್ಲದ ಕೆಲಸ ಕಾರ್ಯಗಳ ನಡುವೆಯೂ ಬಿಡುವು ಮಾಡಿಕೊಂಡು ಭರತನಾಟ್ಯ ಕಲಿಯಬೇಕೆಂಬ ಹಂಬಲವಿತ್ತು. ಅದಕ್ಕಾಗಿಯೇ ಅವರು ಬೆಂಗಳೂರಿನ ಹ್ರೀಮ್‌ಕರಿ ಸ್ಕೂಲ್‌ ಆಫ್‌ ಡಾನ್ಸ್‌ ಶಾಲೆಗೆ ಪ್ರವೇಶ ಪಡೆದರು. ಅಲ್ಲಿ ಕಳೆದ ಎರಡು ವರ್ಷಗಳಿಂದ ಗುರುಗಳಾದ ಆಚಾರ್ಯ ಪ್ರತಿಭಾ ಸತ್ಯವಾನನ್‌ರ ಮಾರ್ಗದರ್ಶನದಲ್ಲಿ ಭರತನಾಟ್ಯವನ್ನು ಕಲಿಯುತ್ತಿದ್ದಾರೆ. ಈಗ ಲಿಖಿತಾರ ಭರತನಾಟ್ಯಂ ಪ್ರಥಮ ರಂಗಪ್ರವೇಶ ಕಾರ್ಯಕ್ರಮವನ್ನು ಇದೇ ರವಿವಾರ ಮೇ 31. 2026 ರಂದು ಬೆಳಗ್ಗೆ ಗಂಟೆ 10-15ಕ್ಕೆ ಬೆಂಗಳೂರಿನ ಮಲ್ಲೆಶ್ವರಂನಲ್ಲಿರುವ ಸೇವಾ ಸದನ ಸಭಾಗೃಹದಲ್ಲಿ ಆಯೋಜಿಸಲಾಗಿದೆ. ಇದರ ಕೊರಿಯೊಗ್ರಫಿಯು ಪ್ರತಿಭಾ ಸತ್ಯವಾನನ್‌ರದ್ದಾಗಿದ್ದು ನಟ್ಟುವಾಂಗಮ್‌ಲ್ಲಿ ಕೂಡಾ ಅವರೇ ಸಹಕರಿಸುತ್ತಾರೆ. ವೋಕಲ್‌ ವಿದೂಷಿ ಹರ್ಷಿತಾ ವಿದ್ಯಾರದ್ದಾಗಿದ್ದು ಮೃದಂಗನಲ್ಲಿ ವಿದ್ವಾನ್‌ ಜನಾರ್ಧನ, ಕೊಳಲಿನಲ್ಲಿ ವಿದ್ವಾನ್‌ ಸ್ಕಂದ ಕುಮಾರ್‌ ಸಾಥ್‌ ನೀಡುತ್ತಾರೆ.
ಭರತನಾಟ್ಯಂ ಪ್ರಥಮ ರಂಗ ಪ್ರವೇಶವು ಭರತನಾಟ್ಯವನ್ನು ಕಲಿಯುತ್ತಿರುವವರಿಗೆ ಮಾತ್ರವಲ್ಲದೆ ಅವರ ಹೆತ್ತವರಿಗೂ ಒಂದು ಅವಿಸ್ಮರಣೀಯ ಅನುಭವವಾಗಿರುತ್ತದೆ. ಇದು ಸಾರ್ವಜನಿಕರ ಮುಂದೆ ತಮ್ಮ ಕಲಾ ಪ್ರೌಢಿಮೆಯನ್ನು ಪ್ರಸ್ತುತಪಡಿಸುವ ಒಂದು ಸುವರ್ಣಾಕಾಶವಾಗಿದೆ.
ಕ್ರೀಡೆಗಳಲ್ಲೂ ವಿಶೇಷ ಆಸಕ್ತಿ ಹೊಂದಿರುವ ಬಹುಮುಖ ಪ್ರತಿಭೆಯ ಕುಮಾರಿ ಲಿಖಿತಾ ಕಾಪುವಿನ ದಿ. ರತ್ನಾಕರ ಎಸ್‌. ಕರ್ಕೇರ ಮತ್ತು ಹೆಜಮಾಡಿ ಶ್ರೀಮತಿ ಸವಿತಾ ಆರ್‌. ಕರ್ಕೇರರ ಸುಪುತ್ರಿ. ಈ ಕಾರ್ಯಕ್ರಮಲ್ಲಿ ಕಲಾಪ್ರೇಮಿಗಳು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿರಬೇಕೆಂದು ಕೇಳಿಕೊಳ್ಳಲಾಗಿದೆ. ಕಾರ್ಯಕ್ರಮದ ನಂತರ ಪ್ರೀತಿ ಭೋಜನದ ವ್ಯವಸ್ಥೆ ಮಾಡಲಾಗಿದೆ. ಹಚ್ಚಿನ ವಿವರಗಳಿಗಾಗಿ 9819321186 ಈ ನಂಬ್ರದಲ್ಲಿ ಸೋಮನಾಥ ಎಸ್‌.ಕರ್ಕೇರನ್ನುಸಂಪರ್ಕಿಸಬಹುದಾಗಿದೆ.



Related posts

ಡೊಂಬಿವಲಿ: ಫೆ. 14ರಂದು ಶ್ರೀ ಜೈ ಭವಾನಿ ಶನೀಶ್ವರ ಮಂದಿರದ 36ನೇ ವಾರ್ಷಿಕ ಮಂಗಳೋತ್ಸವ

Mumbai News Desk

ಸೆಪ್ಟೆಂಬರ್‌ 14 : ಮುಂಬಯಿ ಕನ್ನಡ ಸಂಘದ 83ನೇ ವಾರ್ಷಿಕ ಮಹಾಸಭೆ

Mumbai News Desk

ಮೊಗವೀರ ಮಹಾಜನ ಸೇವಾ ಸಂಘ, ಬಗ್ವಾಡಿ ಹೋಬಳಿ :ಫೆಬ್ರವರಿ 18 ರಂದು ಡೊಂಬಿವಲಿ ಸ್ಥಳೀಯ ಸಮಿತಿವತಿಯಿಂದ ಮಹಿಳಾ ಸದಸ್ಯರಿಗಾಗಿ ಹೂವಿನ ರಂಗೋಲಿ ಸ್ಪರ್ಧೆ :

Mumbai News Desk

ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗ: ಎ. 4ರಂದು ಸುರೇಖಾ ದೇವಾಡಿಗ ಅವರ ‘ಧೀಮಂತ ಧರ್ಮಪಾಲ’ ಜೀವನ ಕಥನ ಆಧಾರಿತ ಗೌರವ ಗ್ರಂಥ ಬಿಡುಗಡೆ

Mumbai News Desk

ಮೂಲ್ಕಿ : ನ. 30ರಂದು ಹರಿಶ್ಚಂದ್ರ ಪಿ ಸಾಲ್ಯಾನ್ ಅವರ “ಮುಲ್ಕಿಯ ಕೀರ್ತಿಶೇಷ ಸಾಧಕರು ” ಕ್ರತಿ ಬಿಡುಗಡೆ ಸಮಾರಂಭ

Mumbai News Desk

ಮಲಾಡ್: ಜ. 3ರಂದು ಶ್ರೀ ದೇವಿ ಮಹಮ್ಮಾಯಿ ದೇವಸ್ಥಾನದಲ್ಲಿ ಅಯ್ಯಪ್ಪ ಮಹಾಪೂಜೆ

Mumbai News Desk