
ಕಳೆದ ಐದು ವರ್ಷಗಳಿಂದ ಬೆಂಗಳೂರಿನ ಸಾಫ್ಟ್ವೇರ್ ಕಂಪೆನಿಯೊಂದಲ್ಲಿ ಕ್ವಾಲಿಟಿ ಎನಲಿಸ್ಟರಾಗಿ ದುಡಿಯತ್ತಿರುವ ಕುಮಾರಿ ಲಿಖಿತಾ ರತ್ನಾಕರ ಕರ್ಕೇರರಿಗೆ ಕಛೇರಿಯ ಬಿಡುವಿಲ್ಲದ ಕೆಲಸ ಕಾರ್ಯಗಳ ನಡುವೆಯೂ ಬಿಡುವು ಮಾಡಿಕೊಂಡು ಭರತನಾಟ್ಯ ಕಲಿಯಬೇಕೆಂಬ ಹಂಬಲವಿತ್ತು. ಅದಕ್ಕಾಗಿಯೇ ಅವರು ಬೆಂಗಳೂರಿನ ಹ್ರೀಮ್ಕರಿ ಸ್ಕೂಲ್ ಆಫ್ ಡಾನ್ಸ್ ಶಾಲೆಗೆ ಪ್ರವೇಶ ಪಡೆದರು. ಅಲ್ಲಿ ಕಳೆದ ಎರಡು ವರ್ಷಗಳಿಂದ ಗುರುಗಳಾದ ಆಚಾರ್ಯ ಪ್ರತಿಭಾ ಸತ್ಯವಾನನ್ರ ಮಾರ್ಗದರ್ಶನದಲ್ಲಿ ಭರತನಾಟ್ಯವನ್ನು ಕಲಿಯುತ್ತಿದ್ದಾರೆ. ಈಗ ಲಿಖಿತಾರ ಭರತನಾಟ್ಯಂ ಪ್ರಥಮ ರಂಗಪ್ರವೇಶ ಕಾರ್ಯಕ್ರಮವನ್ನು ಇದೇ ರವಿವಾರ ಮೇ 31. 2026 ರಂದು ಬೆಳಗ್ಗೆ ಗಂಟೆ 10-15ಕ್ಕೆ ಬೆಂಗಳೂರಿನ ಮಲ್ಲೆಶ್ವರಂನಲ್ಲಿರುವ ಸೇವಾ ಸದನ ಸಭಾಗೃಹದಲ್ಲಿ ಆಯೋಜಿಸಲಾಗಿದೆ. ಇದರ ಕೊರಿಯೊಗ್ರಫಿಯು ಪ್ರತಿಭಾ ಸತ್ಯವಾನನ್ರದ್ದಾಗಿದ್ದು ನಟ್ಟುವಾಂಗಮ್ಲ್ಲಿ ಕೂಡಾ ಅವರೇ ಸಹಕರಿಸುತ್ತಾರೆ. ವೋಕಲ್ ವಿದೂಷಿ ಹರ್ಷಿತಾ ವಿದ್ಯಾರದ್ದಾಗಿದ್ದು ಮೃದಂಗನಲ್ಲಿ ವಿದ್ವಾನ್ ಜನಾರ್ಧನ, ಕೊಳಲಿನಲ್ಲಿ ವಿದ್ವಾನ್ ಸ್ಕಂದ ಕುಮಾರ್ ಸಾಥ್ ನೀಡುತ್ತಾರೆ.
ಭರತನಾಟ್ಯಂ ಪ್ರಥಮ ರಂಗ ಪ್ರವೇಶವು ಭರತನಾಟ್ಯವನ್ನು ಕಲಿಯುತ್ತಿರುವವರಿಗೆ ಮಾತ್ರವಲ್ಲದೆ ಅವರ ಹೆತ್ತವರಿಗೂ ಒಂದು ಅವಿಸ್ಮರಣೀಯ ಅನುಭವವಾಗಿರುತ್ತದೆ. ಇದು ಸಾರ್ವಜನಿಕರ ಮುಂದೆ ತಮ್ಮ ಕಲಾ ಪ್ರೌಢಿಮೆಯನ್ನು ಪ್ರಸ್ತುತಪಡಿಸುವ ಒಂದು ಸುವರ್ಣಾಕಾಶವಾಗಿದೆ.
ಕ್ರೀಡೆಗಳಲ್ಲೂ ವಿಶೇಷ ಆಸಕ್ತಿ ಹೊಂದಿರುವ ಬಹುಮುಖ ಪ್ರತಿಭೆಯ ಕುಮಾರಿ ಲಿಖಿತಾ ಕಾಪುವಿನ ದಿ. ರತ್ನಾಕರ ಎಸ್. ಕರ್ಕೇರ ಮತ್ತು ಹೆಜಮಾಡಿ ಶ್ರೀಮತಿ ಸವಿತಾ ಆರ್. ಕರ್ಕೇರರ ಸುಪುತ್ರಿ. ಈ ಕಾರ್ಯಕ್ರಮಲ್ಲಿ ಕಲಾಪ್ರೇಮಿಗಳು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿರಬೇಕೆಂದು ಕೇಳಿಕೊಳ್ಳಲಾಗಿದೆ. ಕಾರ್ಯಕ್ರಮದ ನಂತರ ಪ್ರೀತಿ ಭೋಜನದ ವ್ಯವಸ್ಥೆ ಮಾಡಲಾಗಿದೆ. ಹಚ್ಚಿನ ವಿವರಗಳಿಗಾಗಿ 9819321186 ಈ ನಂಬ್ರದಲ್ಲಿ ಸೋಮನಾಥ ಎಸ್.ಕರ್ಕೇರನ್ನುಸಂಪರ್ಕಿಸಬಹುದಾಗಿದೆ.




