September 6, 2026
Mumbai News Kannada
ಪ್ರಕಟಣೆ

ಸೆ.21.ಶ್ರೀ ಸಾಯಿಬಾಬಾ ಪೂಜಾ ಸಮಿತಿ,ಕಾಲಘೋಡ (ರಿ).ಹೊಲಿಗೆ ತರಬೇತಿ ಪ್ರಮಾಣಪತ್ರ ವಿತರಣೆ, 31ನೇ ವಾರ್ಷಿಕ ಮಹಾಸಭೆ.





ಮುಂಬಯಿ,ಸೆ.17. ಕಳೆದ 55 ವರ್ಷಗಳಿಂದ ಧಾರ್ಮಿಕ ಸೇವೆಯೊಂದಿಗೆ ಶೈಕ್ಷಣಿಕ, ವೈದ್ಯಕೀಯ ಸೇವೆಯಲ್ಲಿ ನಿರತ ಶ್ರೀ ಸಾಯಿಬಾಬಾ ಪೂಜಾ ಸಮಿತಿ ಕಾಲಘೋಡ ಧಾರ್ಮಿಕ ಸಂಸ್ಥೆಯು ತನ್ನ ಬೊರಿವಿಲಿ ಕಚೇರಿಯಲ್ಲಿ ಅಬಲೆಯರಿಗೆ ಹೊಲಿಗೆ ತರಬೇತಿ ತರಗತಿಯನ್ನು ಆರಂಭಿಸಿದೆ. ಇದರಲ್ಲಿ ಈ ತನಕ ಸುಮಾರು 500 ಆರ್ಥಿಕವಾಗಿ ಹಿಂದುಳಿದ ಸ್ತ್ರೀಯರು ಪ್ರಯೋಜನ ಪಡೆದಿದ್ದಾರೆ . ಪ್ರಸ್ತುತ ವರ್ಷದ 16ನೇ ಬ್ಯಾಚಿನಲ್ಲಿ ಹೊಲಿಗೆ ತರಬೇತಿ ಪಡೆದ ಸ್ತ್ರೀಯರ ಪ್ರಮಾಣ ಪತ್ರ ಹಾಗೂ ಹೊಲಿಗೆ ಯಂತ್ರವೊಂದನ್ನು ನೀಡುವ ಕಾರ್ಯಕ್ರಮವನ್ನು ಸೆಪ್ಟೆಂಬರ್ 21ರಂದು ಬೊರಿವಿಲಿ ಪಶ್ಚಿಮದ ಚುಕ್ಕುವಾಡಿಯ ಭೂಷಣ್ ಪಾರ್ಕ್ ವ್ಯೂ ಕಟ್ಟಡದಲ್ಲಿರುವ ಕಚೇರಿಯಲ್ಲಿ ಬೆಳಿಗ್ಗೆ 9 ಗಂಟೆಗೆ ಆಯೋಜಿಸಲಾಗಿದೆ. ಸಮಿತಿಯ ಅಧ್ಯಕ್ಷ ಮಾಧವ ಎಸ್.ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಬಂಟರ ಸಂಘ ಮುಂಬಯಿ ಇದರ ಫಂಡ್ ರೈಸಿಂಗ್ ಕಮಿಟಿಯ ಕಾರ್ಯಾಧ್ಯಕ್ಷ, ಸಮಾಜ ಸೇವಕ ಹಾಗೂ ಹೆಸರಾಂತ ಹೋಟೆಲ್ ಉದ್ಯಮಿ ಮುಂಡಪ್ಪ ಪಯ್ಯಡೆಯವರು ಮುಖ್ಯ ಅತಿಥಿಯಾಗಿ ಆಗಮಿಸಲಿರುವರು.
ಇದೇ ಸಂದರ್ಭದಲ್ಲಿ ಸಮಿತಿಯ 31ನೇ ವಾರ್ಷಿಕ ಮಹಾಸಭೆಯು ಜರುಗಲಿದೆ.ಸಮಿತಿಯ ಸರ್ವ ಸದಸ್ಯರು ಸಮಯಕ್ಕೆ ಸರಿಯಾಗಿ ಉಪಸ್ಥಿತರಿರ ಬೇಕಾಗಿ ಸಮಿತಿಯ ಗೌ.ಕಾರ್ಯದರ್ಶಿ ಪ್ರೊ. ಕೇಶವ ಎಚ್.ಕರ್ಕೇರ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.



Related posts

ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ಬ್ರಹ್ಮಕಲಶೋತ್ಸವ: ಮಾರ್ಚ್ 8ರಂದು ಇತಿಹಾಸ ಪ್ರಸಿದ್ಧ ಗಂಗಾರತಿ ವೈಭವ

Mumbai News Desk

ಜ. 26 ; ಜೈ ಶ್ರೀ ವಿಶ್ವಕರ್ಮ ಭಜನಾ ಮಂಡಳಿ ಯ 15ನೇ ವಾರ್ಷಿಕೋತ್ಸವ

Mumbai News Desk

ಏ.20 ರಂದು ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನ ವಾರ್ಷಿಕ ನಡಾವಳಿ ಮಹೋತ್ಸವ.

Mumbai News Desk

ಸೆಪ್ಟೆಂಬರ್‌ 14 : ಮುಂಬಯಿ ಕನ್ನಡ ಸಂಘದ 83ನೇ ವಾರ್ಷಿಕ ಮಹಾಸಭೆ

Mumbai News Desk

ಮೊಗವೀರ ಮಹಾಜನ ಸೇವಾಸಂಘ ಬಗ್ವಾಡಿ ಹೋಬಳಿ ಡೊಂಬಿವಲಿ ಸ್ಥಳೀಯ ಸಮಿತಿ ಮತ್ತು ಮೊಗವೀರ ವ್ಯವಸ್ಥಾಪಕ ಮಂಡಳಿ ಡೊಂಬಿವಲಿ ಶಾಖೆ ಜಂಟಿ ಅಶ್ರಯದಲ್ಲಿ ಉಚಿತ ನೇತ್ರ ತಪಾಸಣೆ ಮತ್ತು ಮಹಿಳೆಯರಿಗಾಗಿ (ಕರ್ಕರೋಗ)ಕ್ಯಾನ್ಸರ್ ತಪಾಸಣೆ :

Mumbai News Desk

ಇಂದು ಡೊಂಬಿವಲಿಯಲ್ಲಿ ಸಾರ್ವಜನಿಕ ಶ್ರೀ ದುರ್ಗಾ ನಮಸ್ಕಾರ ಪೂಜೆ

Mumbai News Desk