September 6, 2026
Mumbai News Kannada
ಸುದ್ದಿ

ನ್ಯಾಯವಾದಿ ರಾಘವ ಎಂ. ನೋಟರಿ ಪಬ್ಲಿಕ ಆಗಿ ನೇಮಕ





ಮುಂಬಯಿ : ಮಹಾನಗರದ ಹಿರಿಯ ವಕೀಲರಾದ ರಾಘವ ಎಂ. ಇವರನ್ನು ಬಾರತ ಸರಕಾರದ ಕಾನೂನು ಮತ್ತು ನ್ಯಾಯಾಂಗ ಸಚಿವಾಲಯ ನೋಟರಿ ಪಬ್ಲಿಕ್ ಆಗಿ ನೇಮಕ ಮಾಡಿದೆ.

ಮುಂಬಯಿ ಮಹಾನಗರದಲ್ಲಿ ಕಳೆದ ಹಲವಾರು ವರ್ಷಗಳಿಂದ ವಕೀಲರಾಗಿ ಸೇವೆ ಸಲ್ಲಿಸುತ್ತಾ ಜನಪ್ರಿಯರಾಗಿರುವ ಇವರು 1996 ರಲ್ಲಿ ಮಂಗಳೂರು ವಿಶ್ವವಿಧ್ಯಾನಿಲಯದಿಂದ ಕಾನೂನು ಪದವಿ ಪಡೆದು ಪ್ರಥಮ ಧರ್ಜೆಯಲ್ಲಿ ಉತ್ತಿರ್ಣರಾಗಿದ್ದಾರೆ. ಕಾಸರಗೋಡಿನ ಖ್ಯಾತ ವಕೀಲರೊಂದಿಗೆ ತರಬೇತಿ ಪಡೆದ, ಇವರು ಮುಂಬೈಯಲ್ಲಿ ದೇಶದ ಪ್ರತಿಷ್ಠಿತ ಖಾಸಗಿ ಮತ್ತು ಸರಕಾರಿ ಬ್ಯಾಂಕುಗಳಲ್ಲಿ ಉನ್ನತ ಹುದ್ದೆಯಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿ, ಬಳಿಕ ಮುಂಬೈ ವಿಮಾನದ ನಿಲ್ಧಾಣದಲ್ಲಿ ಜನರಲ್ ಮ್ಯಾನೇಜರ್ ಹುದ್ದೆಯಲ್ಲಿದ್ದು ಸ್ವಯಂ ನಿವೃತ್ತಿ ಪಡೆದಿದ್ದಾರೆ 2017 ರಿಂದ ದಹಿಸರ್ ನಲ್ಲಿ ತನ್ನದೇ ಆದ ಆರ್. ಎಂ. ಲಾ ಅಸೋಷಿಯೇಟ್ಸ್ ಸಂಸ್ಥೆಯನ್ನು ನಡೆಸುತ್ತಿದ್ದಾರೆ.

ಸಮಾಜ ಸೇವಾ ನಿರತರಾಗಿರುವ ರಾಘವ ಎಂ. ಅವರು ಕರ್ನಾಟಕ ಸಂಘ ಮಾಟುಂಗಾ, ಮೈಸೂರು ಅಸೋಷಿಯೇಶನ್, ತುಳು ಸಂಘ ಬೊರಿವಲಿ, ಸಂಸ್ಥೆಗಳ ಕಾರ್ಯಕಾರಿ ಸಮಿತಿಯಲ್ಲಿದ್ದು ಇನ್ನು ಹಲವಾರು ಸಂಘ-ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದಾರೆ.



Related posts

‘ಮಿಸ್ ಟೀನ್ ಗ್ಯಾಲಕ್ಟಿಕ್ ಯೂನಿವರ್ಸ್ ಇಂಡಿಯಾ 2026’ ದಕ್ಷಿಣ ಭಾರತದ ವಿಜೇತರ ಪಟ್ಟ ಅಲಂಕರಿಸಿದ ಪೂರ್ವಿ ಏಕನಾಥ ಕುಲಾಲ್

Mumbai News Desk

ಇನ್‌ಸ್ಟಾಗ್ರಾಮ್‌ನಲ್ಲಿ 100 ಮಿಲಿಯನ್ ಫಾಲೋವರ್‌ಗಳನ್ನು ದಾಟಿದ ಮೊದಲ ವಿಶ್ವ ನಾಯಕ ಪ್ರಧಾನಿ ಮೋದಿ

Mumbai News Desk

ಪ್ಯಾರಿಸ್ ಫ್ಯಾಶನ್ ವೇದಿಕೆಯಲ್ಲಿ ಮುಂಬೈಯ ಪ್ರಭಾ ಸುವರ್ಣ ಮಿಂಚಿನ ಸಂಚಲನ:

Mumbai News Desk

ಮುಂಬೈ – ಮಂಗಳೂರು ನಡುವೆ ಹೊಸ ರೈಲು ಹಾಗೂ ವಂದೇ ಭಾರತ್ ಸ್ಲೀಪರ್ ಕೋಚ್‌ಗೆ ಆಗ್ರಹಿಸಿ ಜಯಶ್ರೀಕ್ರಷ್ಣ ಪರಿಸರ ಪ್ರೇಮಿ ಸಮಿತಿಯಿಂದ ಮನವಿ ಸಲ್ಲಿಕೆ

Mumbai News Desk

ಉಡುಪಿ : ಕಟಪಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಲ್‌ಪಿಜಿ ಟ್ಯಾಂಕರ್ ಮಗುಚಿ ಆತಂಕ: ಅಗ್ನಿಶಾಮಕ ದಳದ ಸಮಯೋಚಿತ ಕಾರ್ಯಾಚರಣೆಯಿಂದ ತಪ್ಪಿದ ಭಾರಿ ಅನಾಹುತ

Mumbai News Desk

ಮುಂಬೈ: ದಿಶಾ ಸಾಲ್ಯಾನ್ ಸಾವು ಪ್ರಕರಣ- ಆದಿತ್ಯ ಠಾಕ್ರೆ, ಬಾಲಿವುಡ್ ನಟರು, ಮಾಜಿ ಪೊಲೀಸ್ ಅಧಿಕಾರಿ ವಿರುದ್ಧ ಹೊಸ ದೂರು

Mumbai News Desk