September 6, 2026
Mumbai News Kannada
ಸುದ್ದಿ

“ಪ್ರೇರಣಾ – ಲಿಯೋ PST ಸ್ಕೂಲಿಂಗ್ 2025-26: ಲಿಯೋ ಜಿಲ್ಲಾ 317D ಯಲ್ಲಿ ನಾಯಕತ್ವಕ್ಕೆ ನೂತನ ಪ್ರೇರಣೆ”





ಮಲ್ಲಿಕಟ್ಟೆ : ಲಿಯೋ ಜಿಲ್ಲಾ 317D ವತಿಯಿಂದ “ಪ್ರೇರಣಾ – ಲಿಯೋ PST ಸ್ಕೂಲಿಂಗ್ 2025-26” ಕಾರ್ಯಕ್ರಮವನ್ನು ಭಾನುವಾರ ಲಯನ್ಸ್ ಸೇವಾ ಮಂದಿರ, ಮಲ್ಲಿಕಟ್ಟೆ ಇಲ್ಲಿ ನಡೆಸಲಾಯಿತು. ಜಿಲ್ಲಾ ಲಿಯೋ ಅಧ್ಯಕ್ಷೆ ಲಿಯೋ ಲಯನ್ ಶ್ರೀನಿಧಿ ಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, “ಧ್ವನಿ” ಎಂಬ ವಾರ್ಷಿಕ ಥೀಮ್‌ನಡಿ ಲಿಯೋಗಳು ತಂಡಭಾವನೆ, ಶಿಸ್ತು ಮತ್ತು ಸೇವಾಭಾವನೆಯೊಂದಿಗೆ ಸಮಾಜ ಬದಲಾವಣೆಯ ನಿಜವಾದ ನಾಯಕರಾಗಬೇಕೆಂದು ಪ್ರೇರಣೆ ನೀಡಿದರು.

ಕಾರ್ಯಕ್ರಮವನ್ನು ಜಿಲ್ಲಾ ಗವರ್ನರ್ ಲಯನ್ ಕುಡ್ಪಿ ಅರವಿಂದ ಶೆಣೈ ಉದ್ಘಾಟಿಸಿದರು. ಅವರು ತಮ್ಮ ಹಾರೈಕೆಯಲ್ಲಿ “ಸಮಯಪಾಲನೆ, ಶಿಸ್ತು ಮತ್ತು ಸೇವಾಭಾವನೆ – ಈ ಮೂರು ಗುಣಗಳು ಪ್ರತಿಯೊಬ್ಬ ಲಿಯೋ ನ ಭವಿಷ್ಯದ ಶ್ರೇಷ್ಠ ನಾಯಕನಾಗಿಸುತ್ತವೆ” ಎಂದು ಹೇಳಿದರು. ಈ ಸಂದೇಶವು ಕಾರ್ಯಕ್ರಮದ ಪ್ರಮುಖ ಭಾಗವಾಗಿ ಲಿಯೋಗಳಲ್ಲಿ ಸೇವಾಭಾವನೆಯನ್ನು ಮತ್ತಷ್ಟು ಉತ್ತೇಜಿಸಿತು.

ಕಾರ್ಯಕ್ರಮದ ಗಣ್ಯ ಅತಿಥಿಗಳಾದ ಭಾರತಿ (IPDG), ಮೆಲ್ವಿನ್ ಡಿ’ಸೋಜಾ (PDG), ರೊನಾಲ್ಡ್ ಗೊಮ್ಸ್ (PDG), ಗೋವರ್ಧನ್ ಶೆಟ್ಟಿ (1st VDG), ವೆಂಕಟೇಶ್ ಹೆಬ್ಬಾರ್ (ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್‌ಪೈರ್), ಪಿ.ವಿ. ಅನಿಲ್ ಕುಮಾರ್ (ಲಯನ್ಸ್ ಕ್ಲಬ್ ಮಂಗಳೂರು ಹೈಲ್ಯಾಂಡ್), ಯಶವಂತ್ ಪೂಜಾರಿ (ಲಯನ್ಸ್ ಕ್ಲಬ್ ಮಂಗಳಾದೇವಿ), ರಾಜೇಶ್ (ಲಯನ್ಸ್ ಕ್ಲಬ್ ಮಂಗಳೂರು ಅಧ್ಯಕ್ಷ) ಮತ್ತು ಕವನ್ ರಾಜ್ ಕುಬೇವೂರು (PDLP) ಲಿಯೋಗಳಿಗೆ ಹೃದಯಸ್ಪರ್ಶಿ ಶುಭಾಶಯಗಳನ್ನು ಹಂಚಿದರು. ಅವರು ಯುವ ಶಕ್ತಿಯ ಮಹತ್ವವನ್ನು ಸ್ಮರಿಸಿ, “ಲಿಯೋಗಳ ಉತ್ಸಾಹ ಮತ್ತು ಸೇವಾಭಾವನೆ ನಮ್ಮ ಲಯನ್ಸ್ ಕುಟುಂಬಕ್ಕೆ ಹೆಮ್ಮೆ. ಪ್ರತಿಯೊಂದು ಯೋಜನೆಯೂ ಸಮಾಜದಲ್ಲಿ ಪ್ರೇರಣೆಯ ಅಲೆ ಎಬ್ಬಿಸಲಿ” ಎಂದು ಸಂದೇಶ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಲಿಯೋ ತಂಡದ chairperson ರಶ್ಮಿ ಕರ್ಕೇರ( DLC ), ಸ್ವರೂಪ ಶೆಟ್ಟಿ ಮತ್ತು ಡಾ. ಡೆನಿಸ್ ರೊಡ್ರಿಗ್ಸ್ (ಸಲಹೆಗಾರರು), ಡಾ. ರಂಜಿತಾ ಶೆಟ್ಟಿ (ಮಾರ್ಗದರ್ಶಕಿ), ಪವನ್ ದೇವಾಡಿಗ (ಕಾರ್ಯದರ್ಶಿ), ಶಿಖಾ ಸುಶೀಲ್ (ಖಜಾಂಚಿ), ಸೇರಿದಂತೆ ಎಲ್ಲಾ ಜಂಟಿ ಕಾರ್ಯದರ್ಶಿಗಳು, ಖಜಾಂಚಿಗಳು ಹಾಗೂ ವಿವಿಧ ವಿಭಾಗದ ಸಂಯೋಜಕರು ಭಾಗವಹಿಸಿದರು. ಎಲ್ಲರೂ ಸೇರಿ ಈ ವರ್ಷದ ಲಿಯೋ ಚಟುವಟಿಕೆಗಳನ್ನು ಮತ್ತಷ್ಟು ಸಬಲಗೊಳಿಸುವ ಭರವಸೆ ನೀಡಿದರು.

“ಪ್ರೇರಣಾ – Where Passion Meets Purpose” ಎಂಬ ಘೋಷವಾಕ್ಯದಡಿ ನಡೆದ ಈ PST ಸ್ಕೂಲಿಂಗ್ , ಸಹಕಾರ, ನಾಯಕತ್ವ ಮತ್ತು ಸೇವಾಭಾವನೆ ಎಂಬ ಸಂದೇಶವನ್ನು ಹರಡುತ್ತಾ, ಲಿಯೋ ಜಿಲ್ಲಾ 317D ಯ ಹೊಸ ಅಧ್ಯಾಯಕ್ಕೆ ಪ್ರೇರಕ ಚಾಲನೆ ನೀಡಿತು. ಲಿಯೋಗಳು ಹೃದಯದಲ್ಲಿ ಸೇವಾಭಾವನೆ ಇಟ್ಟುಕೊಂಡು ತಂಡಭಾವನೆಯೊಂದಿಗೆ ಮುಂದುವರಿದರೆ, ಅವರು ಭವಿಷ್ಯದ ಸಮಾಜ ಬದಲಾವಣೆಯ ನಿಜವಾದ ನಾಯಕರಾಗುತ್ತಾರೆ ಎಂಬ ಸಂದೇಶವನ್ನು ಈ ಕಾರ್ಯಕ್ರಮವು ಯಶಸ್ವಿಯಾಗಿ ಸಾರಿತು.



Related posts

ನ್ಯೂ ಪನ್ವೇಲ್  ಶ್ರೀ ವೃಂದಾವನ ಬಾಬಾ ಅಯ್ಯಪ್ಪ ಭಕ್ತ ವೃಂದ19ನೇ ಶ್ರೀ ಅಯ್ಯಪ್ಪ ಮಹಾಪೂಜೆ

Mumbai News Desk

ಜಾಗತಿಕ, ರಾಷ್ಟ್ರೀಯ, ರಾಜ್ಯ ಮತ್ತು ಮುಂಬೈ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಇಂದಿನ (07/06/26)ಪ್ರಮುಖ ವಿದ್ಯಮಾನಗಳ ಸಂಕ್ಷಿಪ್ತ ಸುದ್ದಿ ಸಂಕಲನ

Mumbai News Desk

ವೇದಪಾಂಡಿತ್ಯಕ್ಕೆ ಗೌರವ: ನಾಲ್ವರಿಗೆ ‘ವೇದರತ್ನ’ ಪ್ರಶಸ್ತಿ

Mumbai News Desk

ಪಾಲ್ಘರ್ ತಾಲೂಕು ಹೋಟೆಲ್ ಓನರ್ಸ್ ಅಸೋಸಿಯೇಶನ್ ವತಿಯಿಂದ ಶ್ರೀ ರಾಮ ಪ್ರಸಾದ ವಿತರಣೆ

Mumbai News Desk

ಭಟ್ಕಳದಲ್ಲಿ ಮಹಾ ದುರಂತ: ನದಿಯಲ್ಲಿ ಮಲವಿ ಹೆಕ್ಕಲು ಹೋದ ಎಂಟು ಮಹಿಳೆಯರು ನೀರು ಪಾಲು

Mumbai News Desk

ನವದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ, 18 ಜನರ ಸಾವು

Mumbai News Desk