September 6, 2026
Mumbai News Kannada
ಸುದ್ದಿ

ಧಾರ್ಮಿಕ ಕ್ಷೇತ್ರಗಳ ಬಗ್ಗೆ ಸ್ಥಾಪಿತ ಹಿತಾ ಶಕ್ತಿಗಳ ಅಪಪ್ರಚಾರ ಮೂಲಕ ಭಕ್ತಾಭಿಮಾನಿಗಳ ದಿಕ್ಕು ತಪ್ಪಿಸುವುದು ಸನಾತನ ಧರ್ಮಕ್ಕೆ ಮಾರಕ – ತೋನ್ಸೆ ಜಯಕೃಷ್ಣ ಎ. ಶೆಟ್ಟಿ.





ಮಂಗಳೂರು : ಧರ್ಮಸ್ಥಳ ಕ್ಷೇತ್ರದ ಮೇಲೆ ಸ್ಥಾಪಿತ ಹಿತಾಶಕ್ತಿಗಳು ಅಪಪ್ರಚಾರ ಮಾಡುತ್ತಿರುವುದು ತೀವ್ರವಾಗಿ ತಿರಸ್ಕರಿಸಲಾಗಿದೆ. ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡುವುದು ಸರಿಯಲ್ಲ. ನಿಖರವಾದ ತನಿಖೆಗಳು ನಡೆಯುತ್ತಿರುವಾಗ, ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡುವುದು ಸರಿಯಲ್ಲ. ಕೊಲೆಯಾಗಿರಬಹುದು, ಆದರೆ ನೂರಾರು ಕೊಲೆಯಾಗಿದ್ದಲ್ಲಿ ನ್ಯಾಯ ವ್ಯವಸ್ಥೆ ಪೋಲೀಸರು ಇದ್ದಾರೆ, ಕೋರ್ಟುಗಳಿವೆ, ದೇಶದ ರಾಷ್ಟ್ರಪತಿ, ಪ್ರಧಾನ ಮಂತ್ರಿ ಹಾಗು ರಾಜ್ಯದ ಮುಖ್ಯ ಮಂತ್ರಿಗಳಿದ್ದಾರೆ ಎಂದು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ನುಡಿದರು.
ಮಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಆ. 16 ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸೌಜನ್ಯ ಕೊಲೆಯಂತಹ ಪ್ರಕರಣಗಳು ನ್ಯಾಯಾಲಯದ ತನಿಖೆಗೆ ಒಳಪಟ್ಟಿವೆ. ಆದರೆ ಅದನ್ನೇ ಪುನ: ಪುನ: ಸಾರ್ವಜನಿಕರ ಮುಂದೆ ತಾರದೆ ನಾನು ಹೋರಾಟಗಾರರಿಗೆಲ್ಲ ಕೈಮುಗಿದು ವಿನಂತಿಸುದ್ದೇನೆಂದರೆ ನ್ಯಾಯಾಲಯವಿದೆ, ಕಾನೂನಿನ ಮೂಲಕ ಹೋರಾಟ ಮಾಡಿ. ಉಚ್ಚ ನ್ಯಾಯಾಲಯ, ಅಂತರಾಷ್ಟ್ರೀಯ ಮಟ್ಟದಲ್ಲೂ ನ್ಯಾಯಾಲಯವಿದೆ (International Court for Justice London / Netherland). ಇದನ್ನು ಸಂಪರ್ಕಿಸಬಹುದು. ಜನಸಾಮಾನ್ಯರನ್ನು ತಪ್ಪು ಹಾದಿಯತ್ತ ಕೊಂಡೊಯ್ಯುವುದು ಸರಿಯಲ್ಲ.
ಧರ್ಮಸ್ಥಳ ಕ್ಷೇತ್ರದ ಸಂಪರ್ಕ ಎಲ್ಲರಿಗೂ ಇದೆ, ಪ್ರತಿಯೊಂದು ಮನೆಯವರಿಗಿದೆ, ಪರಿಸರದ ಅನೇಕ ಮುಸ್ಲಿಂ ಹಾಗೂ ಕ್ರೈಸ್ತ ಬಂದುಗಳು ಕ್ಷೇತ್ರದ ಭಕ್ತರೂ ಆಗಿದ್ದು ಧರ್ಮಸ್ಥಳ ಕ್ಷೇತ್ರಕ್ಕೆ ತೆರಳಿ ಪ್ರಸಾದ ಸ್ವೀಕರಿಸುತ್ತಾರೆ. ಭಕ್ತಿ ನಂಬಿಕೆ ಎಲ್ಲರಿಗೂ ಇದೆ. ಆ ನಂಬಿಕೆಯನ್ನು ಯಾರು ಹಾಳು ಮಾಡಬಾರದು. ಅನ್ಯಾಯವಾಗಿದ್ದಲ್ಲಿ ಅದನ್ನು ಕಾನೂನು ಮುಖಾಂತರ ಬಗೆಯರಿಸುವುದು ಸರಿಯಾದ ಮಾರ್ಗ. ಹೋರಾಟವೆಂಬುದು ಕೇವಲ ಬಾರತದಲ್ಲಿ ಮಾತ್ರವಲ್ಲ ಇಡೀ ಜಗತ್ತಿನಲ್ಲಿ ಹಾದಿ ತಪ್ಪಿಸುವ ಕುತಂತ್ರ. ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶದ ಘನತೆಗೆ ಧಕ್ಕೆ ತರುವಂತಹ ಹೋರಾಟಗಳು ತಪ್ಪು. ಅತ್ಯದಿಕ ಜನಸಂಖ್ಯೆಯನ್ನು ಹೊಂದಿರುವ ನಮ್ಮ ಭಾರತ ದೇಶದಾದ್ಯಂತ ಅಖಂಡ ಧರ್ಮ ಪೀಠಗಳಿವೆ. ಇದರಲ್ಲಿ ಅತ್ತೂರು ಚರ್ಚ್, ಉಳ್ಳಾಲ ದರ್ಗ, ಧರ್ಮಸ್ಥಳ ಕ್ಷೇತ್ರ, ಕೊಲ್ಲೂರು ಮುಕಾಂಬಿಕ, ಸುಬ್ರಹ್ಮಣ್ಯ, ಉಡುಪಿ ಶ್ರೀಕೃಷ್ಣ ಮಠ, ಇತ್ಯಾದಿಗಳು ಸೇರಿದೆ. ಯಾರೂ ಕೂಡಾ ಇನ್ನೊಬ್ಬರಿಗೆ ಹಾನಿಯಾಗದೆ ಭಕ್ತಿ ಪೂರ್ವಕ ಕೈಜೋಡಿಸಬೇಕಾಗಿದೆ. ಎಲ್ಲದಕ್ಕೂ ನಮ್ಮ ರಾಜ್ಯದ ಮುಖ್ಯಮಂತ್ರಿ ಮಾನ್ಯ ಸಿದ್ದರಾಮಯ್ಯನವರು ಹಾಗೂ ಉಪ ್ಮುಖ್ಯಮಂತ್ರಿ ಮಾನ್ಯ ಡಿ. ಕೆ. ಶಿವಕುಮಾರ್ ರವರು ಇದಕ್ಕೆ ಪೂರಕವಾಗಿ ಕಾರ್ಯನಿರತವಾಗಬೇಕಾಗಿದೆ. ನಮ್ಮ ರಾಜ್ಯದ ಎಲ್ಲಾ ಎಂ.ಪಿ. ಗಳು ಎಂ. ಎಲ್. ಎ. ಗಳು ಈ ಬಗ್ಗೆ ತಮ್ಮ ನಿರ್ಧಾರವನ್ನು ನೀಡಬೇಕಾಗಿದೆ. ಧರ್ಮಸ್ಥಳ ದೊಡ್ಡ ಪವಿತ್ರವಾದ ಕ್ಷೇತ್ರ. ಅದಕ್ಕೆ ಯಾವುದೇ ರೀತಿಯಲ್ಲಿ ದಕ್ಕೆ ತರುವುದು ಸರಿಯಲ್ಲ. ಈ ಪತ್ರಿಕಾ ಗೋಷ್ಠಿ ಮೂಲಕ, ಮಾನ್ಯ ಮುಖ್ಯ ಮಂತ್ರಿ, ಉಪ ಮುಖ್ಯ ಮಂತ್ರಿ ಹಾಗೂ ಗ್ರಹ ಸಚಿವರು ಕ್ಷೇತ್ರಕ್ಕೆ ಹಾನಿಯಾಗದ ರೀತಿಯಲ್ಲಿ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳವಂತಾಗಲಿ. ನಮ್ಮ ಸಮಿತಿಯ ಯಶಸ್ಸಿಗೆ ಜಾರ್ಜ ಫೆರ್ನಾಡೀಸ್ ರವರ ಆಶೀರ್ವಾದವಿದೆ. ಅವರು ನಮಗೆ ದೇವರಂತೆ. ಸುಪ್ರೀಂ ಕೋರ್ಟಲ್ಲಿ ತೀರ್ಪು ಬಂದ ನಂತರ ಯಾರೂ ಧಮಸ್ಥಳದ ಬಗ್ಗೆ ಈ ವಿಷಯದಲ್ಲಿ ಮಾತನಾಡಬಾರದಾಗಿ ನಮ್ಮ ಸಮಿತಿಯು ಸುಪ್ರೀಂ ಕೋರ್ಟಲ್ಲಿ ಮನವಿ ಸಲ್ಲಿಸಿ ಸ್ಟೇ (ತಡೆ) ತರುವ ಪ್ರಯತ್ನ ನಮ್ಮದು. ಹೋರಾಟ ಮಾಡಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಶವನ್ನು ಕೀಳು ಮಟ್ಟಕ್ಕೆ ತರುವ ಯತ್ನ ಸರಿಯಲ್ಲ. ಜಗತ್ತಿನಲ್ಲಿ ಧರ್ಮ ಇದ್ದಲ್ಲಿ ಮಾತ್ರ ಶಾಂತಿ. ಆದುದರಿಂದ ಧರ್ಮದ ರಕ್ಷಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ.
ಯಾವುದೇ ಧರ್ಮವಿರಲಿ, ಅವರವರು ಅವರವರ ಧರ್ಮವನ್ನು ರಕ್ಷಣೆ ಮಾಡಲೇ ಬೇಕು. ಮಂಜುನಾಥ ಸ್ವಾಮಿ, ಅಣ್ಣಪ್ಪ ಸ್ವಾಮಿಯವರಲ್ಲಿ ಒಂದೇ ಪ್ರಾರ್ಥನೆ ನಾವು ನಮ್ಮ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಮೂಲಕ ಕಳೆದ 25 ವರ್ಷಗಳಿಂದ ಸತ್ಯದ ಹೋರಾಟ ಮಾಡುತ್ತಾ ಬಂದಿದ್ದು ಯಶಸ್ಸಿ ಕಂಡಿದ್ದೇವೆ. ಅದೇ ರೀತಿ ಜನಸಾಮಾನ್ಯರ ಈ ಸಮಸ್ಯೆಗೆ ನಾವೆಲ್ಲರೂ ಕೈಜೋಡಿಸೋಣ.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಮಿತಿಯ ರಾಜ್ಯ ಸಂಚಾಲಕರಾದ ಕೆ. ಪಿ. ಜಗದೀಶ್ ಅಧಿಕಾರಿಯವರು ತನ್ನ ಅಭಿಪ್ರಾಯವನ್ನು ಪತ್ರಕರ್ತರ ಮುಂದಿಟ್ಟರು. ಸಮಿತಿಯ ಸದಸ್ಯ ಶಂಕರ್ ಸುವರ್ಣರೂ ಉಪಸ್ಥಿತರಿದ್ದರು.



Related posts

ಜಾಗತಿಕ, ರಾಷ್ಟ್ರೀಯ, ರಾಜ್ಯ ಮತ್ತು ಮುಂಬೈ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಇಂದಿನ (10/06/26)ಪ್ರಮುಖ ವಿದ್ಯಮಾನಗಳ ಸಂಕ್ಷಿಪ್ತ ಸುದ್ದಿ ಸಂಕಲನ

Mumbai News Desk

ಕುಂದಾಪುರ : ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ ನಿಧನ

Mumbai News Desk

ನಾನಿಲ್ತಾರ್ ಅಭಿಮಾನಿ ಬಳಗ ಮುಂಬಯಿ (ಮುಂಡ್ಕೂರು) 16ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ

Mumbai News Desk

ಅಂತರರಾಷ್ಟ್ರೀಯ ಯೋಗಾಸನ ಸ್ಪರ್ಧೆಗೆ ಕಾರ್ಕಳದ ಪ್ರತಿಭೆ ಸಿಂಚನ್ ಎ. ಪೂಜಾರಿ ಆಯ್ಕೆ: ಕರ್ನಾಟಕಕ್ಕೆ ಹೆಮ್ಮೆಯ ಗೌರವ

Mumbai News Desk

ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ್ ಬ್ಯಾಂಕ್ ಸಾಧನೆ: ಇನ್ಫೋಸಿಸ್ ಫಿನಾಕಲ್ ಇನ್ನೋವೇಶನ್ ಅವಾರ್ಡ್ಸ್ 2026’

Mumbai News Desk

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ,  ಡಿ.1 – ವಿಶ್ವನಾಥ ಯು. ಮಾಡಾ ನಿಧನಕ್ಕೆ ಶ್ರದ್ದಾಂಜಲಿ ಸಭೆ

Mumbai News Desk