ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಮುಂಬಯಿ, ಇದರ ಮಾಜಿ ಅಧ್ಯಕ್ಷ ರಮೇಶ್ ಬಂಗೇರ ಅವರ ಮಾವ ವಾಮನ ಕಾಂಚನ್ (83) ನವಂಬರ್ 2ರಂದು ತಮ್ಮ ಕಲ್ಯಾಣ್ ನ ನಿವಾಸದಲ್ಲಿ ನಿಧನ ಹೊಂದಿದರು.
ಮೂಲತ: ಉಡುಪಿ ಜಿಲ್ಲೆಯ ಮೂಳೂರು ಗ್ರಾಮದವರಾದ ಮೃತರು, ಪತ್ನಿ ಇಂದಿರಾ ಕಾಂಚನ್, ಪುತ್ರಿ ಕವಿತಾ ಬಂಗೇರ, ಪುತ್ರ ಲೋಹಿತ್ ಕಾಂಚನ್, ಅಳಿಯ ರಮೇಶ್ ಬಂಗೇರ, ಸೊಸೆ ಶ್ವೇತಾ ಲೋಹಿತ್ ಕಾಂಚನ್, ಮೊಮ್ಮಕ್ಕಳು, ಸಹೋದರಿಯರಾದ ಪದ್ಮಾವತಿ ಪುತ್ರನ್,
ವಿಮಲ ಮೆಂಡನ್, ಇಂದುಮತಿ ಸಾಲ್ಯಾನ್, ಸಹೋದರರಾದ ಪಾಂಡು ಕಾಂಚನ್, ವಸಂತ ಕಾಂಚನ್,
ಸುಧಾಕರ್ ಕಾಂಚನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ವಾಮನ್ ಕಾಂಚನ್ ಅವರ ನಿಧನಕ್ಕೆ ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಮುಂಬಯಿ, ಇದರ ಪದಾಧಿಕಾರಿಗಳು, ಸದಸ್ಯರು ಸಂತಾಪ ವ್ಯಕ್ತ ಪಡಿಸಿದ್ದಾರೆ.
previous post




