ಶ್ರೀಪಾದರ ಧರ್ಮ ಜಾಗೃತಿಯ ಕಾರ್ಯ , ಭಗವದ್ಗೀತೆಯ ಪಠಾಣವ ನ್ನು ಭಕ್ತರಿಗೆ ತಲುಪಿಸುವ ಸೇವೆಯನ್ನು ಮಾಡೋಣ: ಶಿವರಾಮ ಜಿ ಶೆಟ್ಟಿ ಅಜೆಕಾರ್
ನವಿ ಮುಂಬೈ: ಉಡುಪಿಯ ಅಷ್ಟಮಠಗಳಲ್ಲಿ ಒಂದಾಗಿರುವ ಪುತ್ತಿಗೆ ಮಠದ ಪೂಜ್ಯ ಸುಗುಣೆಂದ್ರ ಶ್ರೀಪಾದರು 53ನೇ ಹಾಗೂ ಮುಂಬೈಯಲ್ಲಿ 8ನೇ ಚಾತುರ್ಮಾತ್ಸ್ಯ ವೃತ ಆಚರಣೆಯು ಈ ಬಾರಿ ನವಿ ಮುಂಬೈ ಪುತ್ತಿಗೆ ಮಠದಲ್ಲಿ ನಡೆಯಲಿದ್ದು ಇದರ ಅಮಂತ್ರಣ ಪತ್ರಿಕೆಯನ್ನು ಚಾತುರ್ಮಾತ್ಸ್ಯ ಆಚರಣೆ ಸಮಿತಿ ಮುಂಬೈ ಇದರು ಅಧ್ಯಕ್ಷರಾದ ಶಿವರಾಮ ಜಿ ಶೆಟ್ಟಿ ಅಜೆಕಾರ್ ಬಿಡುಗಡೆಗೊಳಿಸಿದರು,
ಬಳಿಕ ಮಾತನಾಡಿ ಪೂಜ್ಯ ಶ್ರೀಪಾದರ ಚಾತುರ್ಮಾತ್ಸ್ಯ ಪುಣ್ಯ ಕಾರ್ಯದಲ್ಲಿ ಪಾಲ್ಗೊಳ್ಳುವುದೆ ನಮಗೆ ಸೌಭಾಗ್ಯವಾಗಿದೆ ಇದನ್ನು ಉತ್ಸವ ರೀತಿಯಲ್ಲಿ ಆಚರಿಸುವುದಕ್ಕಾಗಿ ಗುರುಭಕ್ತರಾದ ನಾವೆಲ್ಲರೂ ಶ್ರದ್ಧೆಯಿಂದ ಮಾಡಬೇಕಾಗಿದೆ. ಶ್ರೀಪಾದರ ಧರ್ಮ ಜಾಗೃತಿಯ ಕಾರ್ಯ ಮತ್ತು ಭಗವದ್ಗೀತೆಯ ಪಠಾಣ ಕಾರ್ಯವನ್ನು ಭಕ್ತರಿಗೆ ತಲುಪಿಸುವ ಸೇವೆಯನ್ನು ಮಾಡೋಣ ಎಂದು ನುಡಿದರು,
ಈ ಸಂದರ್ಭದಲ್ಲಿ, ಸಮಿತಿಯ ಗೌರವಾಧ್ಯಕ್ಷರಾಗಿ ಪ್ರಸಿದ್ಧ ಚಾರ್ಟೆಡ್ ಅಕೌಂಟೆಂಟ್ ಎನ್ ಆರ್ ರಾವ್ , ಸಂಚಾಲಕರಾದ, ಸಿಎ ಸುಧೀರ್ ಶೆಟ್ಟಿ, ಗುರುಪ್ರಸಾದ್ ಭಟ್ ಘಂನ್ಸೋಲಿ, ನಾಗೇಂದ್ರ ಭಟ್, ಕೋಶಾಧಿಕಾರಿ ಸಂತೋಷ್ ಸಿ ಶೆಟ್ಟಿ,
ಕುಲಾಲ್ ಸಂಘ ಮುಂಬೈ ಅಧ್ಯಕ್ಷ ರಘುಮೂಲ್ಯ ಮತ್ತು ಸ್ವಾಮೀಜಿಯ ಅನುವಾಯಿಗಳು
ಸಲಹೆ ಸೂಚನೆಗಳನ್ನು ನೀಡಿದರು,
ಸಿಎ ಸುಧೀರ್ ಶೆಟ್ಟಿ ಸ್ವಾಗತಿಸಿದರು
ಪತ್ರಕರ್ತ ದಿನೇಶ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು
ಆಗಸ್ಟ್ 11ನೇ ಪೂಜ್ಯ ಶ್ರೀಪಾದರ ಚಾತುರ್ಮಾತ್ಸ್ಯ ಪ್ರಯುಕ್ತ ನವಮುಂಬೈ ಪುರಪ್ರವೇಶ ನಡೆಯಲಿದ್ದು, ತಾ 12ಕ್ಕೆ ಶ್ರೀಪಾದರು ಚಾತುರ್ಮಾಸ್ಯ ವೃತ ಕೈಗೊಳ್ಳಲಿದ್ದಾರೆ,
ಆಗಸ್ಟ್ 15ನೇ ತಾರೀಕಿಗೆ ನವಿ ಮುಂಬೈಯಲ್ಲಿ ಇರುವ ಪುತ್ತಿಗೆ ಮಠದ ನೂತನ ಶಾಖೆ ಲೋಕಾರ್ಪಣೆಗೊಳ್ಳಲಿದೆ.





