September 6, 2026
Mumbai News Kannada
ಪ್ರಕಟಣೆ

ನ.29 ರಂದು ಮುಂಬಯಿ ವಿವಿಯ ಕನ್ನಡ ವಿಭಾಗದಲ್ಲಿ ನಾಲ್ಕು ಕೃತಿಗಳ ಬಿಡುಗಡೆ ಸಮಾರಂಭ





ಮುಂಬಯಿ: ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಮತ್ತು ಗೋರೆಗಾಂವ್ ಕರ್ನಾಟಕ ಸಂಘದ ಸಂಯುಕ್ತ ಆಶ್ರಯದಲ್ಲಿ ನಾಲ್ಕು ಕೃತಿಗಳ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.

​ದಿನಾಂಕ 29-11-2025, ಶನಿವಾರದಂದು, ಅಪರಾಹ್ನ 2.30 ರಿಂದ, ಸಾಂತಾಕ್ರೂಜ್ ಪೂರ್ವದಲ್ಲಿರುವ ಕಲೀನಾ ಕ್ಯಾಂಪಸ್‌ನ ಜೆ.ಪಿ.ನಾಯಕ್ ಭವನದಲ್ಲಿ ಈ ಸಮಾರಂಭ ನಡೆಯಲಿದೆ.

​ಸಮಾರಂಭದಲ್ಲಿ ಲೇಖಕ ಶ್ರೀನಿವಾಸ ಜೋಕಟ್ಟೆ ಅವರ ಮೂರು ಕೃತಿಗಳು ಮತ್ತು ಅನಿತಾ ಪಿ. ತಾಕೊಡೆ ಅವರ ಒಂದು ಕೃತಿ ಲೋಕಾರ್ಪಣೆಗೊಳ್ಳಲಿವೆ.

​ಬಿಡುಗಡೆಗೊಳ್ಳಲಿರುವ ಕೃತಿಗಳ ವಿವರ:

  1. “ಅದೆಲ್ಲಾ ಬಿಟ್ಟು” (ಕತೆಗಳು – ಸಾಹಿತ್ಯ ಸುಗ್ಗಿ ಪ್ರಕಾಶನ, ಬೆಂಗಳೂರು) – ಶ್ರೀನಿವಾಸ ಜೋಕಟ್ಟೆ
  2. “ಪ್ರಚಂಡ ಮತ್ತು ಮಹಾಕಾಲ” (ಲೇಖನಗಳು) – ಶ್ರೀನಿವಾಸ ಜೋಕಟ್ಟೆ
  3. “ಬದುಕು ಬತ್ತದ ಭರವಸೆ” (ಲೇಖನಗಳು – ಶ್ರೀರಾಮ ಪ್ರಕಾಶನ, ಮಂಡ್ಯ) – ಶ್ರೀನಿವಾಸ ಜೋಕಟ್ಟೆ
  4. “ಮೇಣಕ್ಕಂಟಿದ ಬತ್ತಿ” (ತಾಕೊಡೆ ಎಂಟರ್ ಪ್ರೈಸಸ್, ಮುಂಬಯಿ) – ಅನಿತಾ ಪಿ. ತಾಕೊಡೆ (ಈ ಕೃತಿಯು ಗವಿಸಿದ್ಧ ಎನ್ ಬಳ್ಳಾರಿ ಕಾವ್ಯ ಪ್ರಶಸ್ತಿ ವಿಜೇತವಾಗಿದೆ.)

​ಕಾರ್ಯಕ್ರಮದ ವಿವರ:

  • ಅಧ್ಯಕ್ಷತೆ: ಡಾ. ಜಿ.ಎನ್. ಉಪಾಧ್ಯ (ಮುಂಬಯಿ ವಿವಿ ಕನ್ನಡ ವಿಭಾಗದ ಮುಖ್ಯಸ್ಥರು)
  • ಕೃತಿಗಳ ಬಿಡುಗಡೆ:
    • ​ಸೂರ್ಯಕಾಂತ್ ಜಯ ಸುವರ್ಣ (ಕಾರ್ಯಾಧ್ಯಕ್ಷರು: ಭಾರತ್ ಬ್ಯಾಂಕ್, ಅಧ್ಯಕ್ಷರು: ರಾಷ್ಟ್ರೀಯ ಬಿಲ್ಲವ ಮಹಾಮಂಡಲ)
    • ​ಮಿತ್ರಾ ವೆಂಕಟ್ರಾಜ್ (ಪ್ರಶಸ್ತಿ ಪುರಸ್ಕೃತ ಕತೆಗಾರರು, ಕಾದಂಬರಿಕಾರರು)
    • ​ವಿಕ್ರಾಂತ್ ಎಸ್. ಉರ್ವಲ್ (ಆಡಳಿತ ನಿರ್ದೇಶಕರು: ಐಐಟಿಸಿ ಮುಂಬಯಿ)
  • ಕೃತಿಗಳ ಪರಿಚಯ:
    • ​ಡಾ| ದಿನೇಶ್ ಶೆಟ್ಟಿ ರೆಂಜಾಳ (ಪತ್ರಕರ್ತರು, ಉದಯವಾಣಿ – ಮುಂಬಯಿ)
    • ​ಅಮಿತಾ ಭಾಗ್ವತ್ (ಸಾಹಿತಿ, ‘ಹವ್ಯಕ ಸಂದೇಶ’ದ ಮಾಜಿ ಸಂಪಾದಕರು)
  • ಪ್ರಾಸ್ತಾವಿಕ: ಸರಿತಾ ಸುರೇಶ ನಾಯಕ್ (ಉಪಾಧ್ಯಕ್ಷರು: ಗೋರೆಗಾಂವ್ ಕರ್ನಾಟಕ ಸಂಘ)
  • ಕಾರ್ಯಕ್ರಮ ನಿರ್ವಹಣೆ: ಡಾ. ಪೂರ್ಣಿಮಾ ಸುಧಾಕರ ಶೆಟ್ಟಿ (ಸಹಪ್ರಾಧ್ಯಾಪಕರು, ಕನ್ನಡ ವಿಭಾಗ ಮುಂಬಯಿ ವಿ.ವಿ.)

​ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗ ಮತ್ತು ಗೋರೆಗಾಂವ್ ಕರ್ನಾಟಕ ಸಂಘದ ಪದಾಧಿಕಾರಿಗಳು ಎಲ್ಲಾ ಪುಸ್ತಕ ಪ್ರೇಮಿಗಳಿಗೆ ಈ ಸಮಾರಂಭಕ್ಕೆ ಹಾರ್ದಿಕ ಸ್ವಾಗತವನ್ನು ಕೋರಿದ್ದಾರೆ.



Related posts

ಬಂಟರ ಸಂಘ ಮುಂಬಯಿ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿ; ಸೆ. 27 ರಂದು ನವರಾತ್ರಿ ಉತ್ಸವ .ಯಕ್ಷಗಾನ ತಾಳಮದ್ದಳೆ, ದಾಂಡಿಯಾ ರಾಸ್

Mumbai News Desk

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ (ರಿ) : ಫೆ. 8ರಂದು ಸಿದ್ಧ ಕಣ್ಣಿನ ಹನಿ ಕಾರ್ಯಕ್ರಮ

Mumbai News Desk

ಶ್ರೀ ಮಣಿಕಂಠ ಸೇವಾ ಸಮಿತಿ ,ವಸಾಯಿ ಡಿ.13ರಂದು 22ನೇ ವಾರ್ಷಿಕ ಶ್ರೀ ಅಯ್ಯಪ್ಪ ಮಹಾಪೂಜೆ.

Mumbai News Desk

ಶ್ರೀ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಆ.17ರಂದು ಸಂಕ್ರಮಣ ಹಾಗೂ ನಾಗ ಪಂಚಮಿ ಪೂಜೆ

Mumbai News Desk

ದಹಿಸರ್‌ ಶ್ರೀ ದುರ್ಗಾಪರಮೇಶ್ವರಿ ಶನೈಶ್ವರ ದೇವಸ್ಥಾನ: ಆ.17ರಂದು ನಾಗಪಂಚಮಿ ಉತ್ಸವ

Mumbai News Desk

ಸೆ.21.ಶ್ರೀ ಸಾಯಿಬಾಬಾ ಪೂಜಾ ಸಮಿತಿ,ಕಾಲಘೋಡ (ರಿ).ಹೊಲಿಗೆ ತರಬೇತಿ ಪ್ರಮಾಣಪತ್ರ ವಿತರಣೆ, 31ನೇ ವಾರ್ಷಿಕ ಮಹಾಸಭೆ.

Mumbai News Desk