
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ (ರಿ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಹಾಗೂ ದಾಸ್ ಚಾರಿಟೇಬಲ್ ಸೇವಾ ಟ್ರಸ್ಟ್ (ರಿ) ಮಂಗಳೂರು ಇದರ ಸಹಯೋಗದಲ್ಲಿ “ಕುಂಭಕಲಾವಳಿ ಕುಲಾಲ ಕಲಾ ಸೇವಾಂಜಲಿ” ಕಾಯ೯ಕ್ರಮ ಮಂಗಳೂರಿನ ಕುದ್ಮುಲ್ ರಂಗರಾವ್, ಪುರಭವನದಲ್ಲಿ ಜ. 04ರಂದು ನಡೆಯಲಿದೆ.

ಈ ಸಂದರ್ಭದಲ್ಲಿ ಹಿಂದುಳಿದ ವರ್ಗದ ಕುಲಾಲ-ಕುಂಬಾರ ಸಮುದಾಯದಲ್ಲಿ ಹುಟ್ಟಿ, ಜಾತ್ಯಾತೀತ, ಧರ್ಮಾತೀತ, ಮಾನವೀಯ ಚಿಂತನೆಗಳಿಂದ, ಮೇಲ್ವರ್ಗ ಕೆಳವರ್ಗ ಎಂಬ ಭೇದ ಇಲ್ಲದೇ ನೊಂದ ಬೆಂದ ಬಡವರ ನಿರ್ಗತಿಕರ ಸೇವೆ ಮಾಡಿ, ವೈದ್ಯರ, ಪ್ರಾಧ್ಯಾಪಕರ, ಶಿಕ್ಷಣ ತಜ್ಞರ, ಸಾಹಿತಿಗಳ, ಚಿಂತಕರ, ಸಂಘಟಕರ, ಸಮಾಜ ವಿಜ್ಞಾನಿಗಳ ಗುಂಪಿನ ಗಟ್ಟಿ ಧ್ವನಿ ಆಗಿ, ಅಶಕ್ತರ ಆಶಾಕಿರಣವಾಗಿ, ಸಮಾಜ ಮುಖೀ ಸೇವೆಗೆ ಪ್ರತಿಷ್ಠಿತ ಡಿ. ದೇವರಾಜ್ ಅರಸು ರಾಜ್ಯ ಪುರಸ್ಕಾರ, ಜೀವಮಾನದ ವೈದ್ಯಕೀಯ ಸೇವೆಗಾಗಿ ಭಾರತೀಯ ವೈದ್ಯಕೀಯ ಸಂಘದ ರಾಷ್ಟ್ರೀಯ ಶಾಖೆಯಿಂದ ಪ್ರತಿಷ್ಠಿತ ಡಾ ಬಿ ಸಿ ರಾಯ್ ಸಮಾಜ ಸೇವಾ ಪುರಸ್ಕಾರ ಪಡೆದು, ಪ್ರಸ್ತುತ ಪ್ರತಿಷ್ಠಿತ ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ರಾಜ್ಯ ಶಾಖೆಯ ಉಪಾಧ್ಯಕ್ಷರಾಗಿ ಆಯ್ಕೆ ಆಗಿ, ಬಡ ರೋಗಿಗಳಿಗೆ ಉಚಿತ ಸೇವೆ ಸಾಂತ್ವನ ನೀಡುತ್ತಾ,ವೈದ್ಯಕೀಯ ಸೇವೆ ಯ ಜೊತೆ ಆರೋಗ್ಯ ಜಾಗೃತಿ ಹಾಗೂ ಸಂಘಟನೆ ಮಾಡುತ್ತಾ ಕರಾವಳಿ ಮಲೆನಾಡಿನ ಉದ್ದಕ್ಕೂ “ಬಡವರ ವೈದ್ಯ” ಎಂಬ ಖ್ಯಾತಿಯ ಡಾ. ಎಂ ಅಣ್ಣಯ್ಯ ಕುಲಾಲ್ ಅವರಿಗೆ ಅತಿಥಿ ಗಣ್ಯರ ಸಮ್ಮುಖದಲ್ಲಿ “ ವೈದ್ಯ ಸಿಂಧೂರ” ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು.





