September 6, 2026
Mumbai News Kannada
ಪ್ರಕಟಣೆ

ಸಾಂತಾಕ್ರೂಜ್ ಪೇಜಾವರ ಮಠ : ಡಿ. 23ಕ್ಕೆ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ ಆರನೇ ವರ್ಷದ ಸಮಾರಾಧನೆ





ಉಡುಪಿ ಶ್ರೀ ಪೇಜಾವರ ಮಠಾಧೀಶರಾಗಿದ್ದ 
ಯತಿಕುಲ ಚಕ್ರವರ್ತಿ  ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದರ
6ನೆಯ ಸಮಾರಾಧನಾ ಮಹೋತ್ಸವ ಡಿ.23 ಮಂಗಳವಾರ  
ಬೆಳಗ್ಗೆ 10ರಿಂದ ಸಾಂತಾಕ್ರೂಜ್ ಪೂರ್ವದ ಪೇಜಾವರ ಮಠದ ಸಭಾಗೃಹದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಅನುಗ್ರಹ ಮತ್ತು ಮಾರ್ಗದರ್ಶನದಲ್ಲಿ ನಡೆಯಲಿರುವ ಧಾರ್ಮಿಕ ಕಾರ್ಯದಲ್ಲಿ ಶ್ರೀ ಭೀಮನಕಟ್ಟೆ ಮಠದ ಮಠಾಧೀಶ  ಶ್ರೀ ರಘುವರೇಂದ್ರ ತೀರ್ಥ ಶ್ರೀಪಾದಂಗಳ ಉಪಸ್ಥಿತಿಯಲ್ಲಿ ಬೆಳಗ್ಗೆ 10ರಿಂದ ಶ್ರೀಗಳ ಆರನೇ ಮಹಾ ಸಮಾರಾಧನಾ ಮಹೋ ತ್ಸವದ ಪೂಜಾಧಿಗಳು ಆರಂಭಗೊಳ್ಳಲಿದೆ. ಪೂರ್ವಾಹ್ನ 11ರಿಂದ ಪ್ರವಚನ, ಶ್ರೀರಾಮ ಪೂಜೆ. ಮಧ್ಯಾಹ್ನ 12ರಿಂದ ತೀರ್ಥ ಪ್ರಸಾದ ವಿತರಣೆ ನಡೆಯಲಿದೆ.

ಭಕ್ತಾದಿಗಳು, ಗುರುಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿ ಶ್ರೀಗುರುಗಳ ಅನುಗ್ರಹಕ್ಕೆ ಪಾತ್ರರಾಗುವಂತೆ , ಪೇಜಾವರ ಮಠ ಮುಂಬಯಿ ಶಾಖಾ ಪ್ರಧಾನ ವ್ಯವಸ್ಥಾಪಕ ರಾಮದಾಸ ಉಪಾಧ್ಯಾಯ ರೆಂಜಾಳ, ವ್ಯವಸ್ಥಾಪಕರಾದ ವಿದ್ವಾನ್ ಹರಿ ಭಟ್ ಪುತ್ತಿಗೆ, ನಿರಂಜನ್ ಗೋಗೈ, ಮಠದ ಪುರೋಹಿತ ವರ್ಗದ ಪ್ರಕಟನೆ ತಿಳಿಸಿದೆ.



Related posts

ಡಿ.24 ರಂದು ಭಂಡಾರಿ ಸೇವಾ ಸಮಿತಿ ಮುಂಬಯಿ  –  ಭಂಡಾರಿ  ಫ್ಯಾಮಿಲಿ ಫೆಸ್ಟಿವಲ್ 2023,

Mumbai News Desk

ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ, ನಾಯ್ಗಾಂವ್ – ವಿರಾರ್ ಶಾಖೆಜು. 28ಕ್ಕೆ “ಪ್ರಸ್ತುತ ಶಿಕ್ಷಣ ವ್ಯವಸ್ಥೆ” ಬಗ್ಗೆ ವಿಚಾರ ಸಂಕಿರಣ

Mumbai News Desk

ಶ್ರೀ ಮಹಾವಿಷ್ಣು ಮಂದಿರ – ಡೊಂಬಿವಲಿ, ಜುಲೈ 11 ರಂದು ಸುವರ್ಣ ಸಂಭ್ರಮದ ಉದ್ಘಾಟನಾ ಸಮಾರಂಭ ಹಾಗು ಸರಣಿ ಕಾರ್ಯಕ್ರಮಕ್ಕೆ ಚಾಲನೆ.

Mumbai News Desk

ಮುಲ್ಕಿ: ಉಚಿತ ಆರೋಗ್ಯ ತಪಾಸಣಾ ಶಿಬಿರ: ಸಾರ್ವಜನಿಕರಿಗೆ ಸೇವೆಯ ಸದುಪಯೋಗ ಪಡೆದುಕೊಳ್ಳಲು ಕರೆ

Mumbai News Desk

ಜ.13ಕ್ಕೆ ಗುರು ನಾರಾಯಣ ರಾತ್ರಿ ಪ್ರೌಢ ಶಾಲೆಯ 63ನೇ ವಾರ್ಷಿಕ ದಿನಾಚರಣೆ

Mumbai News Desk

ಕರ್ನಾಟಕ ಸಮಾಜ ಸೂರತ್ : ಜೂ29 ತುಳು ಪರ್ಬ”, ಸಾಧಕರಿಗೆ ಸನ್ಮಾನ, ನೃತ್ಯ‌, ತುಳು ನಾಟಕ.

Mumbai News Desk