
ಜಯ ಸಿ ಸುವರ್ಣ ಅಭಿಮಾನಿಗಳು ಮಹಿಳಾ ಅಭಿಮಾನಿಗಳು, ಮುಂಬಯಿ ಬಿಲ್ಲವರು ಹಾಗೂ ಶ್ರೀ ನಾರಾಯಣ ಗುರು ಭಜನಾ ಮಂಡಳಿ (ರಿ), ಮುಂಬಯಿ, ಇವರ ಆಯೋಜನೆಯಲ್ಲಿ ಅರಶಿನ ಕುಂಕುಮ ಕಾರ್ಯಕ್ರಮ ಜ.26ರಂದು ಸೋಮವಾರ ಅಪರಾನ್ಹ ಗಂಟೆ 3 ರಿಂದ ಗೊರೇಗಾoವ್ ಜಯಲೀಲಾ ಬ್ಯಾಂಕ್ಟ್ ಟ್ ಹಾಲ್ ನಲ್ಲಿ ನಡೆಯಲಿದೆ,
ಇದೇ ಸಂಧರ್ಭದಲ್ಲಿ ಮುಂಬಯಿಯ ವಿವಿಧ ಉಪನಗರಗಳ ಶ್ರೀ ನಾರಾಯಣ ಗುರು ಭಜನಾ ಮಂಡಳಿ ಯವರಿಂದ ಕುಣಿತ ಭಜನೆ ನಡೆಯಲಿದೆ.
ಸಂಜೆ 5:30 ಗಂಟೆಗೆ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು
ಜಯ ಸಿ ಸುವರ್ಣ ಮಹಿಳಾ ಅಭಿಮಾನಿಗಳ ಕಾರ್ಯಧ್ಯಕ್ಷೆ ನಿಶಿತಾ ಸೂರ್ಯಕಾಂತ್ ಸುವರ್ಣ ವಹಿಸಲಿದ್ದಾರೆ.
ಅತಿಥಿಗಳಾಗಿ ನಗರ ಸೇವಕಿ ಮೀನಾಕ್ಷಿ ಶಿಂದೆ , ಪುಷ್ಪ ಶ್ರೀನಿವಾಸ್ ಕೋಟ್ಯಾನ್, ಗೌರವ ಅತಿಥಿಗಳಾಗಿ ನಗರ ಸೇವಕಿ ಜಗದೀಶ್ವರಿ ಜಗದೀಶ್ ಅಮೀನ್, ನಗರ ಸೇವಕಿ ನಿಶಾ ಸುರೇಶ್ ಬಂಗೇರ, ನಗರಸೇವಕ ಹರೀಶ್ ಶಾಸ್ತ್ರಿ, ಸಮಾಜ ಸೇವಕಿರಾದ ತನ್ವಿ ದಿನೇಶ್ ರಾವ್, ಹಿಮಾಲಿನಿ ಸದಾಶಿವ ಸುವರ್ಣ, ಹರಿನಾಕ್ಷಿ ಮೋಹನ್, ಇವರು ಪಾಲ್ಗೊಳ್ಳಲಿದ್ದಾರೆ,
ಈ ಸಂದರ್ಭದಲ್ಲಿ ಕರ್ನಾಟಕ ಸ್ಟೈಲ್ ಐಕಾನ್ ಪ್ರಶಸ್ತಿಯನ್ನು ಸ್ವೀಕರಿಸಿದ ರಿಕಿತ ಸಾಲಿಯಾನ್, ವೀಣಾ ಶೆಟ್ಟಿ, ಅಶ್ವಿನಿ ಕೋಟ್ಯಾನ್ ಇವರನ್ನು ಸನ್ಮಾನಿಸಲಾಗುವುದು
ಈ ಪ್ರಯುಕ್ತ ಎಲ್ಲಾ ಪರಿಸರದ ಕನ್ನಡಿಗರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಾಗಿ ಜಯ ಸಿ ಸುವರ್ಣ ಅಭಿಮಾನಿಗಳು, ಮಹಿಳಾ ಅಭಿಮಾನಿಗಳು, ಯುವ ಅಭಿಮಾನಿಗಳು,ಮುಂಬಯಿ ಬಿಲ್ಲವರು, ಶ್ರೀ ನಾರಾಯಣ ಗುರು ಭಜನಾ ಮಂಡಳಿಯವರು ವಿನಂತಿಸಿಕೊಂಡಿದ್ದಾರೆ.




