September 6, 2026
Mumbai News Kannada
ಪ್ರಕಟಣೆ

ಕಾರ್ನಾಡು ಶ್ರೀ ಧರ್ಮಸ್ಥಾನ : ಮಾರ್ಚ್ 08, 09, ಮತ್ತು 10ರಂದು “ವರ್ಷಾವಧಿ ನೇಮೋತ್ಸವ”





ಮುಲ್ಕಿ ಸಮೀಪದ ಕಾರ್ನಾಡು ಶ್ರೀ ಧರ್ಮ ದೈವಸ್ಥಾನದ ವರ್ಷಾವಧಿ ನೇಮೋತ್ಸವವು ಮಾರ್ಚ್ 8, 9 ಮತ್ತು 10ರಂದು ವಿಜೃಂಭಣೆಯಿಂದ ಜರಗಲಿದೆ.

​ಕಾರ್ಯಕ್ರಮದ ವಿವರಗಳು:

​ತಾ. 08-03-2026ನೇ ರವಿವಾರ ಬೆಳಿಗ್ಗೆ ಗಂಟೆ 7-30ಕ್ಕೆ ತೋರಣ ಮುಹೂರ್ತ, ಬೆಳಿಗ್ಗೆ ಗಂಟೆ 11-00ಕ್ಕೆ ಮಾಗಂದಡಿ ಭಂಡಾರ ಮನೆಯಿಂದ ಶ್ರೀ ಧರ್ಮದೈವಗಳ ಭಂಡಾರ ಹೊರಡುವುದು. ಮಧ್ಯಾಹ್ನ ಗಂಟೆ 12-15ಕ್ಕೆ ಧ್ವಜಾರೋಹಣ, ಮಧ್ಯಾಹ್ನ ಗಂಟೆ 1-00ಕ್ಕೆ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಗಂಟೆ 5-30ರಿಂದ ಶ್ರೀ ಉಳ್ಳಾಯ ದೈವದ ನೇಮೋತ್ಸವ ಹಾಗೂ ರಾತ್ರಿ ಗಂಟೆ 9-30ರಿಂದ ಶ್ರೀ ಧೂಮಾವತಿ ದೈವದ ನೇಮೋತ್ಸವ ಜರುಗಲಿರುವುದು.
​ತಾ. 09-03-2026ನೇ ಸೋಮವಾರ ಮಧ್ಯಾಹ್ನ ಗಂಟೆ 1-00ಕ್ಕೆ ಅನ್ನಸಂತರ್ಪಣೆ ಮತ್ತು ರಾತ್ರಿ ಗಂಟೆ 9-00ರಿಂದ ಶ್ರೀ ಜಾರಂದಾಯ ಮತ್ತು ಪರಿವಾರ ದೈವಗಳ ನೇಮೋತ್ಸವ ನಡೆಯಲಿದೆ.
​ತಾ. 10-03-2026ನೇ ಮಂಗಳವಾರ ಬೆಳಿಗ್ಗೆ ಗಂಟೆ 10-00ರಿಂದ ಶ್ರೀ ಅಣ್ಣಪ್ಪ ಪಂಜುರ್ಲಿ ದೈವದ ನೇಮೋತ್ಸವ, ಮಧ್ಯಾಹ್ನ ಗಂಟೆ 1-00ರಿಂದ ಅನ್ನಸಂತರ್ಪಣೆ ಹಾಗೂ ಸಂಜೆ ಗಂಟೆ 5-30ಕ್ಕೆ ಧ್ವಜಾವರೋಹಣ ಮತ್ತು ಭಂಡಾರ ನಿರ್ಗಮನದೊಂದಿಗೆ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿವೆ.

​ಅಧ್ಯಕ್ಷ ಎಂ. ಹೆಚ್. ಅರವಿಂದ್ ಪೂಂಜಾ, ಉಪಾಧ್ಯಕ್ಷರುಗಳಾದ ಅರುಣ್ ಎಂ ಶೆಟ್ಟಿ, ಶಶಿಂದ್ರ ಸಾಲಿಯನ್, ಕಾರ್ಯದರ್ಶಿ ದಿವಾಕರ ಕೋಟ್ಯಾನ್, ಸಹ ಕಾರ್ಯದರ್ಶಿಗಳಾದ ಸದಾಶಿವ ಕೋಟ್ಯಾನ್, ಮನಿಶ್ ಜೆ ಸುವರ್ಣ, ಲತೀಶ್ ಕಾರ್ನಾಡ್, ಕೋಶಾಧಿಕಾರಿ ಪ್ರವೀಣ್ ವಿ ಕೋಟ್ಯಾನ್ ಸಹ ಕೋಶಾಧಿಕಾರಿಗಳಾದ ಆನಂದ ಶೆಟ್ಟಿಗಾರ್, ಸುಧಾಕರ್ ಶೆಟ್ಟಿ, ಅರ್ಚಕ ಸದಾನಂದ ಪೂಜಾರಿ, ಕಾರ್ನಾಡು ಗುತ್ತು, ಗುಂಡಾಲು ಗುತ್ತು, ಚಿತ್ರಪು ಗರಡಿ ಮನೆ, ಕಾರ್ನಾಡು ಕೊರಂಟಬೆಟ್ಟು ಮನೆ, ಗೋಪಾಲ ನಾಯ್ಗಾರ್, ಮಾಗದಂಗಡಿ ಮನೆ, ಶ್ರೀ ಧರ್ಮಸ್ಥಾನ ಜೀರ್ಣೋದ್ಧಾರ ಸಮಿತಿ, ಕಾರ್ನಾಡು, ಶ್ರೀ ದರ್ಮಸ್ಥಾನ ಜೀರ್ಣೋದ್ಧಾರ ಸಮಿತಿ ಮುಂಬಯಿ, ಶ್ರೀ ಧರ್ಮಸ್ಥಾನ ಯುವಕ ವೃಂದ,ಮಹಿಳಾ ಮಂಡಳಿ ಕಾರ್ನಾಡು ಹಾಗೂ ರ ಕಾರ್ನಾಡು, ಕೊಕ್ಕರ್ ಕಲ್, ಚಿತ್ರಾಪು ಗುಂಡಾಲು ಗ್ರಾಮಸ್ಥರು ​ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ತಾವುಗಳು,ಪಾಲ್ಗೊಂಡು ಸಹಕರಿಸಿ,ಶ್ರೀ ದೈವಗಳ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸಿದ್ದಾರೆ.



Related posts

ಮುಂಬಯಿ ವಿವಿ ಕನ್ನಡ ವಿಭಾಗ: ಮಾ. 20ರಂದು ಪ್ರಭಾಕರ ದೇವಾಡಿಗ ಆರೂರು ಅವರ ‘ಲಲಿತ ರಂಗ ಗುಣನಾಯಕ’ ಕೃತಿ ಲೋಕಾರ್ಪಣೆ

Mumbai News Desk

ಗೋರೆಗಾಂವ್ ಕರ್ನಾಟಕ ಸಂಘ -ಜುಲೈ19ರಂದು 68ನೇ ವಾರ್ಷಿಕ ಮಹಾ ಸಭೆ.

Mumbai News Desk

ಸೆ.7: ಸಾಫಲ್ಯ ಸೇವಾ ಸಂಘ, ಮುಂಬೈ – ವಿದ್ಯಾರ್ಥಿ ಸಹಾಯಧನ, ಮಹಿಳೆಯರಿಗೆ ಘರ್‌ಘಂಟಿ ವಿತರಣೆ ಹಾಗೂ ನಾನಾ ಸಮಾಜಮುಖಿ ಕಾರ್ಯಕ್ರಮಗಳು

Mumbai News Desk

ಮಾ.15 ರಂದು ಮಹಾನಗರ ಕನ್ನಡ ಸಂಸ್ಥೆ ಡೊಂಬಿವಲಿ ವತಿಯಿಂದ ಜಾಗತಿಕ ಮಹಿಳಾ ದಿನಾಚರಣೆ

Mumbai News Desk

ಶ್ರೀ ಗಜಾನನ ಬಿಲ್ಲವರ ಸೇವಾ ಸಂಘ (ರಿ.) ತೋನ್ಸೆ :ಜುಲೈ 5 ರಂದು “ಶ್ರೀ ಜಗನ್ನಾಥ ಕ್ಷೇತ್ರ ಮಹಿಮೆ” ವಿಶೇಷ ಆಧ್ಯಾತ್ಮಿಕ ಕಾರ್ಯಕ್ರಮ

Mumbai News Desk

ಶ್ರೀ ರಜಕ ಸಂಘ ಮುಂಬಯಿ, ಜ.6 ರಂದು ಸಾಮೂಹಿಕ ಶ್ರೀ ಸತ್ಯ ನಾರಾಯಣ ಮಹಾಪೂಜೆ

Mumbai News Desk